ಬೆಳಗಾವಿಯಲ್ಲಿ ಈ ಬಾರಿ ಬ್ಯಾಲೆಟ್ಟೋ-ಮಷಿನ್ನೋ ?


Team Udayavani, Apr 6, 2019, 6:05 AM IST

,Belgaum-Lok-Sabha,-Election-Commission,

ಬೆಳಗಾವಿ: ಈ ಸಲವೂ ಬೆಳಗಾವಿ ಲೋಕಸಭೆ ಇಡೀ ದೇಶದ ಗಮನ ಸೆಳೆಯಲಿದ್ದು, 23 ವರ್ಷಗಳ ಬಳಿಕ ಮತ್ತೂಮ್ಮೆ ಚುನಾವಣಾ ಆಯೋಗಕ್ಕೆ ತಲೆ ಬಿಸಿ ಆರಂಭವಾಗಿದೆ.

23 ವರ್ಷಗಳ ನಂತರ ಮತ್ತೂಮ್ಮೆ 64 ನಾಮಪತ್ರಗಳು ಸಿಂಧು ಆಗಿದ್ದು, ಚುನಾವಣಾ ಆಯೋಗ ಬ್ಯಾಲೆಟ್‌ ಪೇಪರ್‌ನಿಂದ ಪಾರಾದರೂ ಮತದಾನ ವೇಳೆ ತೊಂದರೆಯಿಂದ
ಮುಕ್ತಿಯಾಗಬೇಕಾದರೆ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆಯಬೇಕಾದ ಅಗತ್ಯವಿದೆ. ಇದು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ವರ್ಷ ಬೆಳಗಾವಿ ಲೋಕಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ.ಮಾ.28ರಿಂದ ಏ.4ರ ವರೆಗೆ 76 ನಾಮತ್ರಗಳು ಸಲ್ಲಿಕೆ ಆಗಿದ್ದವು. ಈ ಪೈಕಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಕಣದಲ್ಲಿ ಒಟ್ಟು 64 ಅಭ್ಯರ್ಥಿಗಳ ನಾಮಪತ್ರಗಳು ಸಿಂಧು ಆಗಿವೆ.

64 ಅಷ್ಟೇ ಇದ್ದಿದ್ದರೆ ಚುನಾವಣಾ ಆಯೋಗಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ಇದರಲ್ಲಿ ನೋಟಾ ಆಯ್ಕೆ ಇರುವುದರಿಂದ 65 ಸಂಖ್ಯೆಗಳನ್ನು ಮಷಿನ್‌ಗೆ ಅಳವಡಿಸಲು ಆಯೋಗಕ್ಕೆ ಹೆಚ್ಚಿನ ತಲೆ ನೋವು ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 4434 ಬೂತ್‌ಗಳಿದ್ದು, ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತಯಂತ್ರಗಳು ಜಿಲ್ಲೆಗೆ ಆಗಮಿಸಿವೆ. ಸದ್ಯದ ಪ್ರಕಾರ ಎಂ-2 ಕಂಟ್ರೋಲ್‌ ಯೂನಿಟ್‌ಗಳು ಇವೆ.

ಒಂದು ಇವಿಎಂನಲ್ಲಿ 16 ಹೆಸರುಗಳು ಅಡಕವಾಗುತ್ತವೆ. ಅಂದರೆ ಒಟ್ಟಾರೆ 4 ಇವಿಎಂಗಳು ಸಾಕಾಗುತ್ತವೆ. ಆದರೆ 64 ಅಭ್ಯರ್ಥಿಗಳ ಹೆಸರಿನ ಜೊತೆಗೆ ನೋಟಾ ಕೊನೆಯ ಅನುಕ್ರಮ ಸಂಖ್ಯೆಯಲ್ಲಿ ಇರುವುದರಿಂದಾಗಿ ಆಯೋಗ ಮುಂದೆ ಏನು ಮಾಡಬಹುದು ಎಂಬ ಬಗ್ಗೆತಲೆಕೆಡಿಸಿಕೊಳ್ಳುತ್ತಿದೆ. ಎಂ-2 ಕಂಟ್ರೋಲ್‌
ಯೂನಿಟ್‌ ಗಳ ಮಷಿನ್‌ಗಳಲ್ಲಿ 16 ಹೆಸರು ಮಾತ್ರ ಸೇರಿಸಲಾಗುತ್ತದೆ. ಎಂ-3 ಕಂಟ್ರೋಲ್‌ ಯೂನಿಟ್‌ಗಳು ಇದ್ದಿದ್ದರೆ ಒಂದು ಮತ ಯಂತ್ರದಲ್ಲಿ 21 ಹೆಸರುಗಳನ್ನು ಸೇರಿಸಬಹುದು. ಎಂ-3 ಯಂತ್ರಗಳನ್ನು ಬಳಸಿಕೊಂಡರೆ ತಲೆ ನೋವಿನಿಂದ ಪಾರಾಗಬಹುದು. 64 ಅಭ್ಯರ್ಥಿಗಳೇ ಕಣದಲ್ಲಿ ಉಳಿದುಕೊಂಡರೆ ಬ್ಯಾಲೆಟ್‌ ಪೇಪರ್‌ ಮೂಲಕವೂ ಚುನಾವಣೆ ನಡೆಸುವ ಸಾಧ್ಯತೆ ಇದೆ. ಯಾವ ಸಮಸ್ಯೆಯೂ ಬೇಡ ಎಂದಾದರೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಬೇಕಾದ ಅಗತ್ಯವಿದೆ.

ಲಭ್ಯ ವಿವಿಪ್ಯಾಟ್‌ ಕಡಿಮೆ
ಬ್ಯಾಲೆಟ್‌ ಯೂನಿಟ್‌ ಹಾಗೂ ಕಂಟ್ರೋಲ್‌ ಯೂನಿಟ್‌ಗಳು ಅಗತ್ಯವಾಗಿ ಬೇಕಾದಷ್ಟು ಇವೆ. ಒಟ್ಟು ನೋಟಾ ಸೇರಿಸಿ 64 ಇದ್ದರೆ ಬೂತ್‌ಗೆ ನಾಲ್ಕರಂತೆ ಇವಿಎಂ ಯಂತ್ರಗಳು ಬೇಕಾಗುತ್ತವೆ. ನಾಲ್ಕು ಯಂತ್ರಗಳಿಗೆ ಒಂದು ವಿವಿಪ್ಯಾಟ್‌ ಬೇಕಾಗುತ್ತವೆ. ಒಂದು ವೇಳೆ 65 ಹೆಸರು ಸೇರಿಸುವುದಾದರೆ ಎಂ-3 ಕಂಟ್ರೋಲ್‌ ಯೂನಿಟ್‌ಗಳೇ ಬೇಕಾಗುತ್ತವೆ. ಸದ್ಯ ಬೆಳಗಾವಿ ಲೋಕಸಭೆಗೆ ಬಂದಿರುವ ವಿವಿ ಪ್ಯಾಟ್‌ಗಳೂ ಕಡಿಮೆ ಪ್ರಮಾಣದಲ್ಲಿವೆ. ಈ ಸಮಸ್ಯೆ ಕೂಡ ಚುನಾವಣಾ ಆಯೋಗಕ್ಕಿದೆ. 22 ವರ್ಷಗಳ ಹಿಂದೆ 1996ರಲ್ಲಿ ಬೆಳಗಾವಿ ಲೋಕಸಭೆ ಚುನಾವಣೆಗೆ ಒಟ್ಟು 456 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದಕ್ಕೆ ಅತಿ ದೊಡ್ಡ ಪ್ರಮಾಣದ ಬ್ಯಾಲೆಟ್‌ ಪೇಪರ್‌ ಬಳಸಲಾಗಿತ್ತು. 2-3 ದಿನಗಳ ಕಾಲ ನಿರಂತರವಾಗಿ ಅಧಿಕಾರಿಗಳು ಮತ ಎಣಿಕೆ ಮಾಡಿದ್ದರು. ಇದಕ್ಕಿಂತ ಮುಂಚೆ 1985ರಲ್ಲಿ 305 ಅಭ್ಯರ್ಥಿಗಳು ಬೆಳಗಾವಿ ವಿಧಾನಸಭೆಗೆ ನಾಮಪತ್ರ
ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಈಗ ಮತ್ತೂಮ್ಮೆ ಇಂಥ ದಾಖಲೆ ಪ್ರಮಾಣದಲ್ಲಿ ನಾಮಪತ್ರ ಬಂದಿರುವುದೇ ಸಮಸ್ಯೆಗೆ ಕಾರಣ.

ಮತದಾನ ಚೀಟಿ ನೀಡುವಂತೆ ಜಾಗೃತಿ ಮೂಡಿಸಲು 1985ರಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನಿಲ್ಲಿಸಿದ್ದರೆ,1996ರಲ್ಲಿ ಮತ ವಿಭಜನೆ ಮಾಡಲು 1996ರಲ್ಲಿ ಎಂಇಎಸ್‌ನವರು 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈಗ 2019ರ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್‌ನವರು 50ಕ್ಕೂ ಹೆಚ್ಚು ಜನರಿಂದ ನಾಮಪತ್ರ ಸಲ್ಲಿಸಿ ಕಣಕ್ಕಿಳಿಸಿದ್ದಾರೆ.

ಬೆಳಗಾವಿ ಲೋಕಸಭೆಗೆ ನಾಮಪತ್ರ ಸಲ್ಲಿಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಿವೆ.ಸದ್ಯ 64 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಒಬ್ಬರು ನಾಮಪತ್ರ ಹಿಂಪಡೆದುಕೊಂಡರೆ ನೋಟಾ ಸೇರಿ 64 ಹೆಸರುಗಳನ್ನು ನಾಲ್ಕು ಮತಯಂತ್ರಗಳಲ್ಲಿ ಅಳವಡಿಸಲು ಸಾಧ್ಯವಿದೆ. ಇಲ್ಲದಿದ್ದರೆ ಮುಂದಿನ ಕಾರ್ಯದ ಬಗ್ಗೆ ಆಯೋಗದ
ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು.
– ಡಾ| ಎಚ್‌.ಬಿ. ಬೂದೆಪ್ಪ,
ಅಪರ ಜಿಲ್ಲಾಧಿಕಾರಿ

– ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.