ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ : ವಿಶ್ವ ರಂಗಭೂಮಿ ದಿನಾಚರಣೆ


Team Udayavani, Apr 5, 2019, 2:37 PM IST

0404mum01

ಮುಂಬಯಿ: ವಿಶ್ವ ರಂಗಭೂಮಿ ದಿನವನ್ನು ಇಂಟರ್‌ನ್ಯಾಶನಲ್‌ ಥಿಯೇಟರ್‌ ಇನ್‌ಸ್ಟಿಟ್ಯೂಟ್‌ 1961ರಲ್ಲಿ ಆಚರಿಸಲು ಆರಂಭಿಸಿತು. ವಿಶ್ವದೆಲ್ಲೆಡೆ ಈ ದಿನವನ್ನು ರಂಗ ಮಂದಿರ ಸಮುದಾಯಗಳು ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಮೀರಾರೋಡ್‌ ಪರಿಸರದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ರಂಗಭೂಮಿ ದಿನವನ್ನು ಮಾ. 27ರಂದು ಆಚರಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಂಸ್ಥೆಯ ನಾಟಕ ಕಲಾವಿದರು ಇದರ ಆಯೋಜನೆಯನ್ನು ಮಾಡಿದರು.

ರಂಗನಟ, ಚಿತ್ರನಟ ಜಿ. ಕೆ. ಕೆಂಚನಕೆರೆ ಹಾಗೂ ಸ್ಥಳೀಯ ಕಚೇರಿಯ ಅಧ್ಯಕ್ಷರಾದ ವಿಶ್ವನಾಥ್‌ ಸಾಲ್ಯಾನ್‌ ನೇತೃತ್ವದಲ್ಲಿ ಒಂದು ಸಂವಾದ ಈ ಸಂದರ್ಭದಲ್ಲಿ ನೆರವೇರಿತು. ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ರಂಗತಜ್ಞ, ಕಲಾವಿದ ಗುಣಪಾಲ್‌ ಉಡುಪಿ ಅವರು ಮಾತನಾಡಿ, ಕಲೆ, ಸಂಗೀತ, ಅಭಿನಯ ಕಲೆ, ಸಾಹಿತ್ಯ, ಪ್ರದರ್ಶನಾಭ್ಯಾಸ, ನಿರ್ದೇಶನ, ಪ್ರೇಕ್ಷಕವರ್ಗ, ನಾಟಕ ಕಂಪೆನಿಗಳು, ಬೀದಿನಾಟಕ, ಜನಪದ ನಾಟಕ, ನವರಸಗಳು ಹಾಗೂ ನಟನ ಗುಣ ಲಕ್ಷಣಗಳು ಇವೆಲ್ಲ ವಿಷಯಗಳ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು. ರಂಗ ಭೂಮಿಯ ಮೂಲಕ ಜಾಗತಿಕ ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಕಾಪಾಡುವಿಕೆ ಆಗುತ್ತದೆ. ರಂಗ ಕಲೆಯ ಮೂಲ ಆಶಯ ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸುವುದು. ರಂಗ ಭೂಮಿ ಮನುಷ್ಯನ ಜೀವನವನ್ನು ಬೆಸೆಯುವ ಕಾರ್ಯ ಮಾಡುತ್ತದೆ ಎಂದು ನುಡಿದು, ತನ್ನ ರಂಗಭೂಮಿಯ ನಂಟನ್ನು ಹಂಚಿಕೊಂಡ ಜೆ. ಕೆ. ಕೆಂಚನಕೆರೆ ಅವರು, ಯಕ್ಷಗಾನದ ನಂಟಿನೊಂದಿಗೆ ನಾಟಕವು ಅವರನ್ನು ಅಪ್ಪಿಕೊಂಡ ಬಗೆಯನ್ನು ಭಾವಪರವಶತೆಯಿಂದ ವಿವರಿಸಿದರು. ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಕಚೇರಿಯ ಕಲಾವಿದರ ನಾಟಕ ತಂಡ ಈಗಾಗಲೇ ಮುಂಬಯಿ ಮತ್ತು ಉಪನಗರಗಳಲ್ಲಿ ಅನೇಕ ತುಳು ಕನ್ನಡ ನಾಟಕ ಪ್ರದರ್ಶನಗಳನ್ನು ನೀಡಿ¨ªಾರೆ. ಅದರ ಕಲಾವಿದರಾದ ಸದಾನಂದ ಸಾಲ್ಯಾನ್‌ ಕಾಪು, ಲೀಲಾಧರ ಸನಿಲ್‌, ಶಿಲ್ಪಾ ಪೂಜಾರಿ, ಭಾ2ರತಿ ಅಂಚನ್‌, ಶಂಕರ್‌ ಎಲ್‌. ಪೂಜಾರಿ, ನಿತೇಶ್‌ ಪೂಜಾರಿ, ಶ್ರೇಯ ಸಾಲ್ಯಾನ್‌, ಜೀವನ್‌ ಅಮೀನ್‌ ಇವರು ರಂಗದೊಂದಿಗೆ ತಮ್ಮ ಸಂಬಂಧವನ್ನು ಸಭಿಕರ ಮುಂದೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಲೀಲಾ ಡಿ. ಪೂಜಾರಿ, ಕವಯತ್ರಿ ಲೀಲಾ ಗಣೇಶ್‌ ಕಾರ್ಕಳ, ಸುಜಾತಾ ಕೋಟ್ಯಾನ್‌, ಅಶೋಕ ವಳದೂರು ಉಪಸ್ಥಿತರಿದ್ದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ತುಳು ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಎ. ಕೆ. ಹರೀಶ್‌, ಶೋಭಾ ಶೆಟ್ಟಿ, ಸುರೇಖಾ ಪೂಜಾರಿ ಹಾಗೂ ರಂಗದ ಆಸಕ್ತಿಯನ್ನು ಹೊಂದಿದ ಅನೇಕ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.