ಸಿದ್ದು ತಲೆಯಲ್ಲಿ ಸೆಗಣೆ ತುಂಬಿದೆ
ದೇವೇಗೌಡರು,ಕುಮಾರಸ್ವಾಮಿ ಇಬ್ಬರೂ ಉತ್ತರ ಕುಮಾರರು: ಈಶ್ವರಪ್ಪ
Team Udayavani, Apr 2, 2019, 6:14 AM IST
ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ಕುಟುಂಬವೇ ರಾಜಕಾರಣ ಮಾಡುತ್ತಿದೆ. ಹಾಸನವನ್ನು ಮೊಮ್ಮಗನಿಗೆ ಬಿಟ್ಟು ಕೊಟ್ಟು ಗೌಡ್ರು ಕಣ್ಣೀರಿಟ್ಟಿದ್ದಾರೆ. ಗೌಡ್ರು ಮತ್ತು ಸಿಎಂ ಕುಮಾರಸ್ವಾಮಿ ಇಬ್ಬರೂ ಉತ್ತರ ಕುಮಾರರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತು ಮಾತಿಗೂ ಸಿದ್ದು ನನ್ನ ಬಗ್ಗೆ ಮಾತನಾಡುತ್ತಿದ್ದು, ಈಶ್ವರಪ್ಪನಿಗೆ ತಲೆಯಲ್ಲಿ ಮೆದಳು ಇಲ್ಲ ಎನ್ನುತ್ತಿದ್ದಾರೆ. ಮೆದುಳನ್ನು ವೈದ್ಯರು ಸರಿ ಮಾಡ್ತಾರೆ. ಆದರೆ ಅವರ ತಲೆಯಲ್ಲಿ ಸೆಗಣೆ ತುಂಬಿಕೊಂಡಿದೆ. ಅದನ್ನು ಯಾರಿಂದಲೂ ಸರಿ ಮಾಡಲಾಗದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಬರೇ ಸಿದ್ದುನ ಸೋಲಿಸಿದ್ದಾರೆ. ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್ನವರೇ ಸೋಲಿಸ್ತಾರೆ. ಮಂಡ್ಯ ಹಾಗೂ ತುಮಕೂರಿನಲ್ಲಿ ಕಾಂಗ್ರೆಸ್ನವರು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸ್ತಾರೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಮುಸ್ಲಿಂರಿಗೆ ಎಂಪಿ ಟಿಕೆಟ್ ಕೊಡಲ್ಲ. ಕೊಡುವುದೂ ಇಲ್ಲ. ಅವರು ಮೊದಲು ನಮ್ಮನ್ನು ಬೆಂಬಲಿಸಲಿ ಆ ನಂತರ ಪಕ್ಷ ವಿಚಾರ ಮಾಡುತ್ತೆ. ಬೇರೆ ರಾಜ್ಯದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೊಟ್ಟಿದೆ. ಇತ್ತೀಚೆಗೆ ಮುಸ್ಲಿಂರಿಗೂ ಅರ್ಥ ಆಗುತ್ತಿದ್ದು, ಕಾಂಗ್ರೆಸ್ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು. ಇನ್ನೂ ಇಕ್ಬಾಲ್ ಅನ್ಸಾರಿ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಮೊದಲು ನಮ್ಮ ಬಿಜೆಪಿ ಕಚೇರಿಯ ಕಸ ಕೂಡಿಸಲಿ ನಂತರ ಪಕ್ಷ ಟಿಕೆಟ್ ಕೊಡಬೇಕೋ? ಬೇಡವೋ ಎನ್ನುವುದನ್ನು ತೀರ್ಮಾನ ಮಾಡುತ್ತೆ ಎಂದರು.
ತಮ್ಮ ಮೇಲೆ ಪದೇಪದೆ ಸಿಎಂ ಕುಮಾರಸ್ವಾಮಿ ಅವರು ನೋಟ್ ಕೌಂಟಿಂಗ್ ಮೆಷಿನ್ ಇತ್ತು ಎಂದು ಆರೋಪ ಮಾಡುತ್ತಿದ್ದಾರೆ. ಹೌದು ನಾವು ಉದ್ಯಮ ಮಾಡುತ್ತಿದ್ದೇವೆ. ನೋಟ್ ಕೌಂಟಿಂಗ್ ಮೆಷಿನ್ ಇಟ್ಟುಕೊಂಡರೆ ತಪ್ಪೇನು? ನನ್ನ ಮನೆಯಲ್ಲಿ ನೋಟ್ ಕೌಂಟಿಂಗ್ ಮೆಷಿನ್ ಇದ್ರೆ, ಸಿಎಂ ಮನೆಯಲ್ಲಿ ನೋಟ್ ಪ್ರಿಂಟಿಂಗ್ ಮೆಷಿನ್ ಇದೆ.
– ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
MUST WATCH
ಹೊಸ ಸೇರ್ಪಡೆ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?