ಠೇವಣಿ ಹಣ ನಾಣ್ಯಗಳಲ್ಲೇ ಭರ್ತಿ ಮಾಡಿದ ಅಭ್ಯರ್ಥಿ!
Team Udayavani, Apr 4, 2019, 6:00 AM IST
ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ಈ ಬಾರಿಯೂ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿ ಶಿವಮೊಗ್ಗ ಲೋಕಸಭಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಹಣವನ್ನು ನಾಣ್ಯಗಳಲ್ಲಿ ನೀಡಿದ್ದಾರೆ.
ಬುಧವಾರ ನಾಮಪತ್ರ ಸಲ್ಲಿಸಿದ ಅವರು ಠೇವಣಿ ಹಣವನ್ನು ಚೀಲದಲ್ಲಿ ತಂದಿದ್ದು ವಿಶೇಷ. ಪ್ರತಿ ಬಾರಿ ವಿಶೇಷವಾಗಿರಬೇಕೆಂದು ಬಯಸುವ ಅವರು ಠೇವಣಿ ಹಣವನ್ನು 1ರೂ, 2ರೂ. ನಾಣ್ಯಗಳಲ್ಲಿ ಭರ್ತಿ ಮಾಡಿದ್ದಾರೆ. ಜಿಲ್ಲಾ ಧಿಕಾರಿ ಕಚೇರಿ ಬಳಿ ಚೀಲ ಹೊತ್ತುಕೊಂಡು ಬರುತ್ತಿದ್ದ ಅಭ್ಯರ್ಥಿಯನ್ನು ಕಂಡ ಪೊಲೀಸರು ಮೊದಲು ಹೌಹಾರಿದ್ದಾರೆ. ನಂತರ ಚೀಲದಲ್ಲಿ ನಾಣ್ಯಗಳಿರುವುದನ್ನು ಪರಿಶೀಲಿಸಿ ಒಳಬಿಟ್ಟಿದ್ದಾರೆ. ಹಣದ ಚೀಲ ಬರೋಬ್ಬರಿ 20 ಕೆಜಿ ತೂಗುತ್ತಿತ್ತು. ನಾಮಪತ್ರ ಸಲ್ಲಿಸಿದ ನಂತರ ಈ ಚಿಲವನ್ನು ಠೇವಣಿ ಹಣವಾಗಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ