ಸ್ಟ್ರಾಂಗ್ರೂಂನಲ್ಲಿ ಫೋಟೊ ತೆಗೆದವನ ಸೆರೆ
Team Udayavani, Apr 15, 2019, 6:05 AM IST
ತೆಲಂಗಾಣದ ಮಲ್ಕಜಿರಿ ಲೋಕಸಭೆ ಕ್ಷೇತ್ರದ ಟಿಎಸ್ಆರ್ ಪಕ್ಷದ ಅಭ್ಯರ್ಥಿಯ ಏಜೆಂಟ್ವೊಬ್ಬರು ಇವಿಎಂಗಳನ್ನು ಸ್ಟ್ರಾಂಗ್ರೂಂನಲ್ಲಿ ಇರಿಸುವ ವೇಳೆ ಫೋಟೊ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಎನ್. ವೆಂಕಟೇಶ್ ಎಂಬವರು ಅಭ್ಯರ್ಥಿ ರಾಜಶೇಖರ್ ರೆಡ್ಡಿ ಅವರ ರಾಜಕೀಯ ಪ್ರತಿನಿಧಿ. ಎ.11ರಂದು ಮತದಾನ ನಡೆದ ಬಳಿಕ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ಸ್ಟ್ರಾಂಗ್ರೂಂನಲ್ಲಿ ಇರಿಸಿ ಕೋಣೆಗೆ ಬೀಗ ಹಾಕುವ ವೇಳೆ ಅವರು ಇವಿಎಂಗಳ ಜತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಇದು ಕಾನೂನುಬಾಹಿರವಾದ ಕಾರಣ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.