ಪ್ರಧಾನಿ ನರೇಂದ್ರ ಮೋದಿಗೆ ಸವಾಲು
Team Udayavani, Apr 8, 2019, 6:30 AM IST
ವಯನಾಡ್ನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಂದನ್ನು ಹಾಕಿದ್ದಾರೆ. ರಾಹುಲ್ ಅವರಿಗೆ ಉತ್ತರ ಹಾಗೂ ದಕ್ಷಿಣ ಭಾರತದಿಂದ ಗೆದ್ದು ಬರುವ ವಿಶ್ವಾಸವಿರುವ ಕಾರಣ ಅವರು ಎರಡೂ ಕಡೆ ಕಣಕ್ಕಿಳಿದಿದ್ದಾರೆ. ಅದೇ ಧೈರ್ಯ ಪ್ರಧಾನಿ ಮೋದಿಯವರಿಗಿದ್ದರೆ, ಕೇರಳ ಅಥವಾ ತಮಿಳುನಾಡಿನಲ್ಲಿ ಸ್ಪರ್ಧಿಸಲಿ ಎಂದು ತರೂರ್ ಸವಾಲೆಸೆದಿದ್ದಾರೆ. ಇದೇ ವೇಳೆ, ಕಾಂಗ್ರೆಸ್ನ ಮತ್ತೂಬ್ಬ ನಾಯಕ ಅಭಿಷೇಕ್ ಮನು ಸಿಂ Ì ಅವರೂ ರವಿವಾರ ಮಾತನಾಡಿ, ಮೋದಿ ದಕ್ಷಿಣ ಭಾರತದ ಯಾವುದಾದರೂ ರಾಜ್ಯಗಳಲ್ಲಿ ಸ್ಪರ್ಧಿಸುವ ಧೈರ್ಯ ತೋರುವರೇ ಎಂದು ಕೇಳಿದ್ದಾರೆ.