ಜಾಧವ್ ವಿರುದ್ಧ ಸ್ಪೀಕರ್ಗೆ “ಕೈ’ನಿಂದ ಮತ್ತೂಂದು ಅರ್ಜಿ
Team Udayavani, Mar 7, 2019, 1:27 AM IST
ಬೆಂಗಳೂರು: ಉಮೇಶ್ ಜಾಧವ್ ಅವರು ಶಾಸಕತ್ವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗದೆ ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆಯೇ ತರಕಾರು ತೆಗೆದು ಸ್ಪೀಕರ್ಗೆ ಮತ್ತೂಂದು ಅರ್ಜಿ ಸಲ್ಲಿಸಲು ಕಾಂಗ್ರೆಸ್ ಮುಂದಾಗಿದೆ.ಆದರೆ, ಕಾನೂನು ತಜ್ಞರ ಪ್ರಕಾರ, ಉಮೇಶ್ ಜಾಧವ್ ಅವರಿಗೆ ವಿಪ್ ಜಾರಿ ಮಾಡಲಾಗಿತ್ತಾದರೂ ಅವರು ಎರಡು ಬಾರಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ಸಭೆಗೆ ಗೈರು ಹಾಜರಾಗಲು ಅನುಮತಿ ಕೊಡಿ ಎಂದು ಪತ್ರದ ಮುಖೇನ ಕೋರಿದ್ದರು. ನಂತರ, ಬಜೆಟ್ ಅಂಗೀಕಾರದ ದಿನ ಅಧಿವೇಶನಕ್ಕೆ ಹಾಜರಾಗಿದ್ದರು. ಆ ಮೂಲಕ ವಿಪ್ನ ನಿರ್ದೇಶನ ಸಹ ಪಾಲಿಸಿದ್ದರು. ಹೀಗಾಗಿ, ಅನರ್ಹತೆ ಪ್ರಶ್ನೆ ಉದ್ಭವಿಸದು.
ಒಂದೊಮ್ಮೆ ಬಜೆಟ್ ಅಂಗೀಕಾರದ ವೇಳೆಯಲ್ಲಿ ಮತದಾನ ನಡೆದು, ಅಲ್ಲಿ ಪಕ್ಷದ ಆದೇಶಕ್ಕೆ ವಿರುದಟಛಿವಾಗಿ ನಡೆದುಕೊಂಡಿದ್ದರೆ, ವಿಪ್ ಉಲ್ಲಂ ಸಿದ್ದರೆ, ಆಗ ಸಮಸ್ಯೆಯಾಗುತ್ತಿತ್ತು. ಇದೇ ಧೈರ್ಯದ ಮೇಲೆ ಉಮೇಶ್ ಜಾಧವ್, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಹಲವು ಕಾನೂನು ತಜ್ಞರು ಹಾಗೂ ಹಿರಿಯ ರಾಜಕಾರಣಿಗಳ ಬಳಿ ಅವರು ಸಲಹೆ ಕೂಡ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ