ಕತ್ತಿ ಸಹೋದರರ ಲೆಕ್ಕಾಚಾರಕ್ಕೆ ಕಾಂಗ್ರೆಸ್ ತಣ್ಣೀರು!
ಗಾಸಿಪ್
Team Udayavani, Apr 18, 2019, 3:00 AM IST
ಬೆಳಗಾವಿ ಜಿಲ್ಲಾ ರಾಜಕಾರಣ ಈಗ ಮಂಡ್ಯಕ್ಕಿಂತಲೂ ವಿಚಿತ್ರವಾಗಿದೆ. ಬಿಜೆಪಿ-ಕಾಂಗ್ರೆಸ್ನಲ್ಲಿ ಆಂತರಿಕ ತಿಕ್ಕಾಟವೇ ಹೆಚ್ಚಾಗಿದೆ. ಬಿಜೆಪಿಯ ಕತ್ತಿ ಸಹೋದರರು, ಕಾಂಗ್ರೆಸ್ನಲ್ಲಿ ಜಾರಕಿಹೊಳಿ ಸಹೋದರರ ಒಳ ಹೊಡೆತ ಮಿತಿ ಮೀರಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ರಮೇಶ ಕತ್ತಿ ಒಂದು ಕಾಲು ಹೊರಗಿಟ್ಟಿದ್ದರು. ಆದರೆ, ಯಡಿಯೂರಪ್ಪ ಅವರೇ ಬೆಳಗಾವಿಗೆ ಬಂದು ಸಮಾಧಾನ ಮಾಡಿ ಹೋಗಿದ್ದಾರೆ.
ಆದರೆ, ಇದಕ್ಕೂ ಮುನ್ನ ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್ ಪಕ್ಷಕ್ಕೆ ಬರದಂತೆ ಜಿಲ್ಲಾ ಕಾಂಗ್ರೆಸ್ ನಾಯಕರೇ ತಡೆಹಾಕಿದ್ದರಂತೆ. ರಮೇಶ ಕತ್ತಿ ಕಾಂಗ್ರೆಸ್ಗೆ ಬರಲು ಎಲ್ಲ ಸಿದ್ಧತೆ ಆಗಿತ್ತಂತೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಾತುಕತೆ ಕೂಡ ಮಾಡಿ ಮುಗಿಸಿದ್ದರು. ಇದಕ್ಕೆ ಜಿಲ್ಲೆಯ ಕೆಲವು ಲಿಂಗಾಯತ ಶಾಸಕರು ಕೈಜೋಡಿಸಿದ್ದರು.
ಆದರೆ ಇದು ಗೊತ್ತಾದ ನಂತರ ಜಿಲ್ಲಾ ನಾಯಕರು ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳ ಬದಲಾವಣೆ ಇಲ್ಲ ಎಂದು ಫರ್ಮಾನು ಹೊರಡಿಸಿ ಕತ್ತಿ ಸಹೋದರರ ಲೆಕ್ಕಾಚಾರಕ್ಕೆ ತಣ್ಣೀರು ಎರಚಿದರಂತೆ. ಕತ್ತಿ ಸಹೋದರರು ಬೆಳಗಾವಿಗೆ ಬಂದರೆ ನಮ್ಮ ನಿಯಂತ್ರಣ ತಪ್ಪುತ್ತದೆ ಎಂಬುದು ಈ ನಾಯಕರ ಆತಂಕಕ್ಕೆ ಕಾರಣವಾಗಿತ್ತಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು