ಕ್ರಿಕೆಟಿಗರ ಪೊಲಿಟಿಕಲ್‌ ಟೆಸ್ಟ್‌ !


Team Udayavani, Mar 23, 2019, 12:30 AM IST

12.jpg

ಮೈದಾನದಲ್ಲಿ ಮಾತ್ರವಲ್ಲ ; ರಾಜಕೀಯದಲ್ಲೂ ಬ್ಯಾಟ್‌ ಬೀಸಲು ಹೋದವರು ಹಲವರು. ರಾಜಕೀಯ ಪಕ್ಷಗಳೂ ಸೆಲೆಬ್ರಿಟಿ (ಸಿನಿಮಾ ನಟರು, ಕ್ರಿಕೆಟ್‌ ಪಟುಗಳು ಇತ್ಯಾದಿ) ಗಳ ಮುಖಬೆಲೆಯ ಮೇಲೆ ಬಂಡವಾಳ ಹೂಡುವುದೇನೂ ಹೊಸದಲ್ಲ. ಭಾರತೀಯ ಕ್ರಿಕೆಟ್‌ ತಂಡದ ಓಪನರ್‌ ಆಗಿದ್ದ ಗೌತಮ್‌ ಗಂಭೀರ್‌ ತಮ್ಮ ರಾಜಕೀಯ ಇನ್ನಿಂಗ್ಸ್‌ ಅನ್ನು ಶುಕ್ರವಾರವಷ್ಟೇ ಆರಂಭಿಸಿದ್ದಾರೆ ಬಿಜೆಪಿಯನ್ನು ಸೇರುವ ಮೂಲಕ. ಹಾಗೆಂದು ಬ್ಯಾಟಿಂಗ್‌ಗೆ ಇಳಿದವರೆಲ್ಲಾ ಕೈ ತುಂಬಾ ರನ್‌ ಗಳಿಸುತ್ತಾರೆಂದೇನೂ ಇಲ್ಲ. ಹಾಗೆಯೇ ರಾಜಕೀಯದಲ್ಲೂ ಇದೆ. ಗಂಭೀರ್‌ ತಮ್ಮ ಪೊಲಿಟಿಕಲ್‌ ಟೆಸ್ಟ್‌ ಗೆ ಸಿದ್ಧವಾಗಿರುವ ಹೊತ್ತಿನಲ್ಲೇ ಇದುವರೆಗೆ ಇಂಥದೊಂದು ಪರೀಕ್ಷೆ ಬರೆದವರ ಬಗ್ಗೆ ಅವಲೋಕನ ಇಂದಿನ ಮತದ ಮಾತು.

ನವಜೋತ್‌ ಸಿಂಗ್‌ ಸಿಧು
ಸಿಧು ಮೊದಲು ಬಿಜೆಪಿ ಪರ ಬ್ಯಾಟ್‌ ಬೀಸಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಮೃತ ಸರದಿಂದ ಸ್ಪರ್ಧಿಸಿ ಗೆಲುವಿನ ರುಚಿಯನ್ನೂ ಸವಿದರು. 2016ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಹೊಂದಿಯೂ, ಬಿಜೆಪಿಯಿಂದ ಹೊರಬಂದು 2017ರಲ್ಲಿ ಕಾಂಗ್ರೆಸ್‌ ಸೇರಿದರು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದಾರೆ.

ವಿನೋದ್‌ ಕಾಂಬ್ಳಿ
 ಭಾರತೀಯ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್‌. ಇವರು ಹೆಚ್ಚು ಅವಕಾಶ ಪಡೆದವರಲ್ಲ. ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ವರು. ಬಳಿಕ ಲೋಕ್‌ ಭಾರತಿ ಪಕ್ಷದ ಮೂಲಕ ರಾಜಕೀಯ ಗ್ರೌಂಡ್‌ಗೆ ಇಳಿದರೂ ಪಕ್ಷದ ಉಪಾಧ್ಯಕ್ಷ ಪಟ್ಟಕ್ಕೇ ಸೀಮಿತಗೊಂಡರು. ದೊಡ್ಡ ಗೆಲುವಿನ ರುಚಿ ಕಂಡವರಲ್ಲ.

ಮನ್ಸೂರ್‌ ಅಲಿಖಾನ್‌ ಪಟೌಡಿ
ಭಾರತೀಯ ಕ್ರಿಕೆಟ್‌ ಕಂಡ ಅತ್ಯುನ್ನತ‌ ಕಪ್ತಾನನಾಗಿದ್ದ ಮನ್ಸೂರ್‌ 1991ರಲ್ಲಿ ಬೋಪಾಲ್‌ನಲ್ಲಿ ಕಾಂಗ್ರೆಸ್‌ ಚಿಹ್ನೆಯಡಿ ಸ್ಪರ್ಧಿಸಿ ಸೋಲುಂಡವರು. “ಕೈ’ ಬಿಟ್ಟು ಹರಿಯಾಣದ ವಿಶಾಲ್‌ ಹರಿಯಾಣ ಪಕ್ಷದಿಂದ ಸ್ಪರ್ಧಿಸಿದ್ದರೂ ಗೆಲುವಿನತ್ತ ಮುಖ ಮಾಡಲಾಗಲಿಲ್ಲ. 

ಅಜರುದ್ದೀನ್‌
ಮಧ್ಯಮ ಕ್ರಮಾಂಕದ ದಾಂಡಿಗನಾಗಿದ್ದ ಅಜರುದ್ದೀನ್‌ ಮ್ಯಾಚ್‌ಫಿಕ್ಸಿಂಗ್‌ ಆರೋಪವೊಂದರಲ್ಲಿ ನಿಷೇಧಕ್ಕೆ ಗುರಿಯಾದರು. ಸೀಮಿತ ಒವರ್‌ಗಳ ಪಂದ್ಯಾಟದಿಂದ ನಿಷೇಧವಾದರೂ 24ಗಿ7 ರಾಜಕೀಯದ ಬಾಗಿಲು ತೆರೆದಿತ್ತು. 2009ರಲ್ಲಿ ಕಾಂಗ್ರೆಸ್‌ ಸೇರಿ, 2009ರಲ್ಲಿ ಉತ್ತರ ಪ್ರದೇಶದಿಂದ ಸಂಸದನಾಗಿಯೂ ಆಯ್ಕೆಯಾದರು. 

ಕೀರ್ತಿ ಅಜಾದ್‌
 ವಿಶ್ವಕಪ್‌ ವಿಜೇತ ತಂಡದಲ್ಲಿದ್ದು, ರಾಜಕೀಯಕ್ಕೆ ಬಂದವರು. ಇವರು ಬಿಜೆಪಿ ಹಾಗೂ ಕಾಂಗ್ರೆಸ್‌ನ ನೀರು ಕುಡಿದವರೇ. ತಂದೆ ಭಾಗವತ್‌ ಝಾ ಅಜಾದ್‌ ಕಾಂಗ್ರೆಸ್‌ ನಿಂದ ಗುಜರಾತ್‌ ಸಿಎಂ ಆಗಿದ್ದಾಗ ಇವರು ಬಿಜೆಪಿ ಸೇರಿದ್ದರು. ಸಂಸದನಾಗಿದ್ದಾಗ ಹಗರಣ ಗಳು ಇವರನ್ನು ಬಿಡಲಿಲ್ಲ. ಮುಖ್ಯವಾಗಿ ಅರುಣ್‌ ಜೇಟ್ಲಿ ಇವರ ವಿರುದ್ಧ ಗುಡುಗಿದಾಗ ಅನಿವಾರ್ಯವಾಗಿ ಬಿಜೆಪಿ ತೊರೆದು “ಕೈ’ ಹಿಡಿದರು.

ಅರ್ಜುನ್‌ ರಣತುಂಗ
ಶ್ರೀಲಂಕಾದ ಅರ್ಜುನ್‌ ರಣತುಂಗ ನಿವೃತ್ತಿ ಘೋಷಿಸಿದ ಬಳಿಕ ಧುಮುಕಿದ್ದು ರಾಜಕೀಯಕ್ಕೆ. ಶ್ರೀ ಲಂಕಾ ಫ್ರೀಡಂ ಪಾರ್ಟಿಯ ಮೂಲಕ 2001ರಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿ ಭರ್ಜರಿ ಗೆಲುವಿನ ಸಿಕ್ಸರ್‌ ಅನ್ನೇ ಬಾರಿಸಿದ್ದು ಇತಿಹಾಸ. 

ಸನತ್‌ ಜಯಸೂರ್ಯ
ಏಕದಿನ ಕ್ರಿಕೆಟ್‌ನ ಪ್ರತಿಭಾವಂತ ಆಟಗಾರ. ಪ್ರಯೋಗಶೀಲನಂತೆ ರಾಜಕೀಯ ಕ್ಷೇತ್ರಕ್ಕೂ ಇಳಿದು ಯಶಸ್ಸು ಕಂಡರು. 2010ರಲ್ಲಿ ಅಧಿಕಾರವನ್ನು ಅನುಭವಿಸಿದ್ದರು. ಮಹೇಂದ್ರ ರಾಜಪಕ್ಸೆ ಸರಕಾರದಲ್ಲಿ ಉಪ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದು ವಿಶೇಷ.

ಇಮ್ರಾನ್‌ ಖಾನ್‌ 
ಕ್ರಿಕೆಟ್‌ನಲ್ಲಿ ಈ ಯಶಸ್ಸು ಕಂಡದ್ದು ಇಮ್ರಾನ್‌ ಖಾನ್‌ ಒಬ್ಬರೇ. ಪಾಕಿಸ್ಥಾನದ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಮ್ರಾನ್‌ ಚೆಂಡು-ದಾಂಡಿನ ಆಟದಿಂದ ನಿವೃತ್ತಿ ಪಡೆದು ರಾಜಕೀಯದತ್ತ ಹೊರಟರು . 1992ರ ವಿಶ್ವಕಪ್‌ ಅನ್ನು ಪಾಕಿಸ್ಥಾನ ಇವರ ನಾಯಕತ್ವದಲ್ಲಿ ಮುಡಿಗೇರಿಸಿಕೊಂಡಿತ್ತು. ಬಳಿಕ 1996ರಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತೀವ್ರವಾದ ಹಿನ್ನಡೆ, ಅವಮಾನವನ್ನು ಎದುರಿಸಿದ್ದರು. ಆದರೀಗ 22 ವರ್ಷಗಳ ಬಳಿಕ 2018ರಲ್ಲಿ ಪ್ರಧಾನಿ ಪಟ್ಟವನ್ನು ಏರಿದರು. ಹನ್ನೊಂದು ಮಂದಿಯ ತಂಡವನ್ನು ಮುನ್ನಡೆಸುತ್ತಿದ್ದವ ಇಂದು ದೇಶವನ್ನು ಮುನ್ನಡೆಸುತ್ತಿರುವ ಕಪ್ತಾನ.

ಉದಯವಾಣಿ  ಸ್ಪೆಷಲ್‌ ಡೆಸ್ಕ್

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.