ಕಡತ ಸುಟ್ಟರೆ ಪ್ರಯೋಜನವಿಲ್ಲ
Team Udayavani, May 1, 2019, 6:00 AM IST
ವಿವಿಧ ಸಚಿವಾಲಯಗಳ ಕಚೇರಿಗಳು ಇರುವಂಥ ಹೊಸದಿಲ್ಲಿಯ ಶಾಸ್ತ್ರಿ ಭವನದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜಕೀಯ ಟೀಕೆ ಮಾಡಲು ಬಳಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರೇ, ಕಡತಗಳನ್ನು ಸುಟ್ಟೊಡನೆ ನೀವು ಉಳಿದಿರಿ ಎಂದು ಭಾವಿಸುವುದು ಬೇಡ. ನಿಮ್ಮ ತೀರ್ಪಿನ ಸಮಯ ಹತ್ತಿರ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ. ಇದೇ ವೇಳೆ, ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ರಾಹುಲ್ ಮತ್ತೆ ಚೌಕಿದಾರ ಹೇಳಿಕೆಯನ್ನು ನೀಡಿದ್ದು, ‘ಪ್ರಧಾನಿ ಮೋದಿಯವರ ನಿವಾಸವನ್ನು ಕಾಯುವ ಭದ್ರತಾ ಸಿಬ್ಬಂದಿ ಕೂಡ ಚೌಕಿದಾರ್ ಚೋರ್ ಹೇ ಎಂದು ಹೇಳುತ್ತಾರೆ’ ಎಂದಿದ್ದಾರೆ.