ಸುಮಲತಾ ಕರೆದರೂ ಪ್ರಚಾರಕ್ಕೆ ಹೋಗುವುದಿಲ್ಲ : ಶಿವರಾಜ್ ಕುಮಾರ್
Team Udayavani, Mar 24, 2019, 7:40 PM IST
ಮೈಸೂರು : ರೆಬೆಲ್ಸ್ಟಾರ್ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾನು , ಪ್ರಚಾರಕ್ಕೆ ಹೋಗುತ್ತಿಲ್ಲ. ಸುಮಲತಾ ಅವರು ನನ್ನನ್ನು ಕರೆದಿಲ್ಲ. ಸದ್ಯ ಕರೆದರೂ ನಾನು ಹೋಗುವುದಿಲ್ಲ ಎಂದರು.
ರಾಜಕೀಯಕ್ಕೆ ಹೋಗಲು ಬುದ್ಧಿ ಬೇಕು. ನಾನು ರಾಜಕೀಯಕ್ಕೆ ಹೋಗುವಷ್ಟು ಬುದ್ದಿವಂತನಲ್ಲ ಎಂದು ಹೇಳಿಕೆ ನೀಡಿದ್ದಾರೆ.