ಜಾಧವ್ ಬೆನ್ನಿಗೆ ಕೈ ನಾಯಕರು!
Team Udayavani, Mar 26, 2019, 6:19 AM IST
ಕಲಬುರಗಿಯಲ್ಲಿ ಸಾಮಾನ್ಯವಾಗಿ ಬಿಸಿಲು ಜಾಸ್ತಿ. ಈಗ ಅದರ ಪ್ರಖರತೆಯನ್ನು ಖರ್ಗೆ ಹಾಗೂ ಜಾಧವ ಸ್ಪರ್ಧೆ ಇನ್ನಷ್ಟು ಹೆಚ್ಚಿಸಿದೆ.
ದಿನದಿಂದ ದಿನಕ್ಕೆ ಥರ್ಮಾಮೀಟರ್ ಏರುತ್ತಲೇ ಇದೆ. ಆರೋಪ,ಪ್ರತ್ಯಾರೋಪಕ್ಕಂತೂ ಕೊರತೆನೇ ಇಲ್ಲ. ಚುನಾವಣೆ ಘೋಷಣೆಗೂ ಮುನ್ನ ಜಾಧವ್ ರಾಜೀನಾಮೆ ಪ್ರಹಸನ ಮುನ್ನೆಲೆಗೆ ಬಂದಿತ್ತು. ಈಗ ಅಧಿಕೃತ ಅಭ್ಯರ್ಥಿಯಾದ ಬಳಿಕ ಕಾವು ಮತ್ತಷ್ಟು ಹೆಚ್ಚಾಗಿದೆ.
ವಿಷಯ ಇದಲ್ಲ, ಖರ್ಗೆ ವಿರುದ್ಧ ತೊಡೆ ತಟ್ಟಿರುವ ಜಾಧವ್ಗೆ ಕಾಂಗ್ರೆಸ್ ನಾಯಕರದ್ದೇ ಬೆಂಬಲ ಇದೆಯಂತೆ! ಹೈದ್ರಾಬಾದ್ ಕರ್ನಾಟಕದಲ್ಲಿ ಎಲ್ಲಿ ಹೋದರೂ ಖರ್ಗೆ ಕುಟುಂಬದ್ದೇ ಮಾತು.
ಇದನ್ನು ಬಹಿರಂಗವಾಗಿ ವಿರೋಧಿಸುವಂತೆಯೂ ಇಲ್ಲ. ಈಗ ಜಾಧವ್ ಬಂಡಾಯವೇ ಅವರಿಗೆಲ್ಲ ಜೀವಾಳ. ಹೀಗಾಗಿ ಒಳಗೊಳಗೆ ಜಾಧವ್ ಅವರಿಗೆ “ನೈತಿಕ ಬಲ’ ತುಂಬುವ ಕೆಲಸ ಮಾಡುತ್ತಿದ್ದಾರಂತೆ. ಬಿಜೆಪಿ ಸೇರ್ಪಡೆಯಾಗಿರುವ ಖರ್ಗೆ ವಿರೋಧಿಗಳೆಲ್ಲಾ ಈಗ ಕಾಂಗ್ರೆಸ್ನಲ್ಲಿರುವ ಅತೃಪ್ತರಿಗೆ ಒಳಗೊಳಗೆ ಗಾಳ ಹಾಕುತ್ತಿದ್ದಾರೆ. ಪರೋಕ್ಷವಾಗಿ
ಬೆಂಬಲ ಕೇಳುತ್ತಿದ್ದಾರೆ. “ಜಾಧವ್ ಗೆಲ್ಲಿಸಿ ಕಮಲ ಅರಳಿಸಿ’ ಎಂಬ ಸ್ಲೋಗನ್ ಹೇಳಿ ಮನವೊಲಿಸುತ್ತಿದ್ದಾರಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ