ಕರಾವಳಿ: ಸಿದ್ಧಾಂತಗಳಿಗೆ ಮತದಾರರ ಒಲವು


Team Udayavani, Apr 6, 2019, 6:00 AM IST

e-41

ಜೆ. ಎಂ. ಲೋಬೋ ಪ್ರಭು.

ಮಂಗಳೂರು: ಲೋಕಸಭಾ ಚುನಾವಣೆಗಳಲ್ಲಿ ಕರಾವಳಿಯ ಕ್ಷೇತ್ರಗಳ ಮತದಾರರು ಯಾವೆಲ್ಲಾ ಸಂಗತಿಗಳಿಗೆ ಮತ್ತು ಯಾವೆಲ್ಲ ವಿಚಾರಗಳಿಗೆ ಸ್ಪಂದಿಸಿದ್ದಾರೆ ಅನ್ನುವುದು ಕುತೂಹಲಕರವಾಗಿದೆ.

ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಅನಂತರದ 3-4 ಚುನಾವಣೆಗಳಲ್ಲಿ ಸ್ವಾತಂತ್ರ್ಯ ಗಳಿಕೆಗೆ ಸಂಬಂಧಿಸಿದ ಒಲವೇ ಫಲಿತಾಂಶಗಳಲ್ಲಿ ಕಂಡು ಬಂದಿತ್ತು. ಆಗಿನ್ನೂ ಸಂಪರ್ಕ ಸಂವಹನ ಪ್ರಬಲವಾಗಿರಲಿಲ್ಲ. ಪೂರ್ವಸಿದ್ಧ ನಿರ್ಧಾರಗಳನ್ನೇ ಮತದಾರರು ಚಲಾಯಿಸುತ್ತಿದ್ದರು.

ಆದರೆ ಕರಾವಳಿಯಲ್ಲಿ ಬದಲಾವಣೆಯ ಪ್ರಥಮ ಫಲಿತಾಂಶ ಬಂದಿದ್ದು 1967ರಲ್ಲಿ- ಉಡುಪಿ ಲೋಕಸಭಾ ಕ್ಷೇತ್ರದಲ್ಲಿ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದಿಂದ ಜೆ.ಎಂ. ಲೋಬೋ ಪ್ರಭು ಗೆದ್ದು ಅಚ್ಚರಿಯ ಫಲಿತಾಂಶ ತಂದು ಕೊಟ್ಟರು (1959ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಈ ಪಕ್ಷವನ್ನು ಸ್ಥಾಪಿಸಿದ್ದರು. ನಕ್ಷತ್ರ ಈ ಪಕ್ಷದ ಚಿಹ್ನೆಯಾಗಿತ್ತು). ಆ ಕಾಲದ ಜಮೀನ್ದಾರರು, ಉದ್ಯಮಿಗಳು ಈ ಪಕ್ಷದ ಬೆಂಬಲಿಗರೆಂಬ ಮಾತು ಕೇಳಿ ಬಂದಿತ್ತು. ಮೂಲತಃ ಐಸಿಎಸ್‌ ಅಧಿಕಾರಿಯಾಗಿದ್ದ ಲೋಬೋ 1962ರಲ್ಲಿ ಮಂಗಳೂರಿನಲ್ಲಿ ಸೋತಿದ್ದರೂ 1967ರಲ್ಲಿ ಉಡುಪಿಯಲ್ಲಿ ಗೆದ್ದರು.

ಭೂಮಾಲಕತ್ವದ ವಿಚಾರಗಳೆಲ್ಲ ಆ ಕಾಲಕ್ಕೆ ಸಮಾಜದಲ್ಲಿ ಅಲ್ಲಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿದ್ದವು. ಆದ್ದರಿಂದ ಸ್ವತಂತ್ರ ಪಕ್ಷ ಕೆಲವು ಸ್ಥಾನಗಳನ್ನು ಜಯಿಸಲು ಕಾರಣವಾಯಿತೆಂದು ಆ ಕಾಲಕ್ಕೆ ಅಭಿಪ್ರಾಯಗಳು ಮೂಡಿಬಂದಿದ್ದವು. ಹಾಗೆಂದು ಈ ಬದಲಾವಣೆಯು ತೀವ್ರವಾಗಿ ಮುಂದುವರಿಯಲಿಲ್ಲ.

1971ರ ಚುನಾವಣೆಯಲ್ಲಿ ಆಗಿನ ಆಡಳಿತ ಪಕ್ಷದ ಕೆಲವು ನಿರ್ಧಾರಗಳು ಮತ್ತೆ ಬದಲಾವಣೆಗೆ ಕಾರಣವಾದವು. ಉಳುವವನೇ ಹೊಲದೊಡೆಯ ಎಂಬ ನಿರ್ಧಾರ ಮತದಾರರನ್ನು ಬಹುವಾಗಿ ಪ್ರಭಾವಿಸಿದ್ದವು. ಆ ಕಾಲಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ಕೃಷಿ ಪ್ರಧಾನ ಜಿಲ್ಲೆ. ಕೃಷಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಆದ್ದರಿಂದ ಸಹಜವಾಗಿಯೇ ಆಡಳಿತರೂಢ ಪಕ್ಷದ ಪರವಾಗಿ ಭಾರೀ ಧ್ರುವೀಕರಣ ಸಹಿತ ಫಲಿತಾಂಶ ಬಂತು. ಜಿಲ್ಲೆಯಲ್ಲಿ ಆಗ ಯಾವುದೇ ಬೃಹತ್‌ ಉದ್ಯಮಗಳ ಸ್ಥಾಪನೆ ಆಗಿರಲಿಲ್ಲ.

ಆ ನಡುವೆ ತುರ್ತು ಪರಿಸ್ಥಿತಿಯ ಹೇರಿಕೆ ಆಯಿತು. ಸ್ವಲ್ಪ ವಿಳಂಬ ವಾಗಿ ಚುನಾವಣೆ ನಡೆಯಿತು. ಆ ಸಂದರ್ಭಕ್ಕೆ ದೇಶಾದ್ಯಂತ “ತುರ್ತು ಪರಿಸ್ಥಿತಿ’ಯೇ ಚುನಾವಣೆಯ ವಿಷಯವಾಗಿತ್ತು. ಕಾಂಗ್ರೆಸೇತರ ಪಕ್ಷಗಳು ಒಟ್ಟಾಗಿ ಜನತಾ ಪಕ್ಷ ರಚನೆಯಾಯಿತು. ದೇಶಾದ್ಯಂತ ಸಮಾನ ಒಲವು ವ್ಯಕ್ತಪಡಿಸಿದ ಮತದಾರರು ಜನತಾ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರು. ಆದರೆ, ಕರಾವಳಿಯಲ್ಲಿ ಮಾತ್ರ ಜನತೆ ವಿಭಿನ್ನವಾಗಿ ಮತದಾನ ಮಾಡಿದರು. ಇಲ್ಲಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಿಸಿದರು. ಕೃಷಿಕರಿಗೆ ಆಗಿದ್ದ ಅನುಕೂಲ, ತುರ್ತು ಪರಿಸ್ಥಿತಿಯ ಬಗ್ಗೆ ಪ್ರತ್ಯೇಕ ವ್ಯಾಖ್ಯಾನ, ರಾಜ್ಯದಲ್ಲಿದ್ದ ಸರಕಾರದ ಯೋಜನೆಗಳೆಲ್ಲ ಇದಕ್ಕೆ ಕಾರಣವೆಂದು ಆ ಕಾಲಕ್ಕೆ ಚುನಾವಣಾ ಫಲಿತಾಂಶ ವಿಶ್ಲೇಷಕರು ತೀರ್ಮಾನಕ್ಕೆ ಬಂದರು.

ಅಂದ ಹಾಗೆ…
ತುರ್ತು ಪರಿಸ್ಥಿತಿಯ ಆನಂತರದ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕಾಂಗೈ ಪಕ್ಷ ಸಂಪೂರ್ಣ ನೆಲಕಚ್ಚಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆದರೆ, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿದಿತ್ತು. ಆ ಸಂದರ್ಭದಲ್ಲಿ ಮೂಡುಬಿದಿರೆ ಬಸ್‌ ನಿಲ್ದಾಣದ ಬಳಿ ಕಂಡು ಬಂದ ಬ್ಯಾನರ್‌ನಲ್ಲಿದ್ದ ಒಕ್ಕಣೆ: ಉತ್ತರ ಭಾರತದ ಜನತೆಗೆ ಧನ್ಯವಾದಗಳು!

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.