ಕುಂದಗೋಳ: 6 ಕೈ ಬಂಡಾಯ ಅಭ್ಯರ್ಥಿಗಳ ಮನವೊಲಿಸಿದ ಜಮೀರ್
ಸ್ವತಃ ತಾಲೂಕು ಕಚೇರಿಗೆ ಕರೆತಂದು ನಾಮಪತ್ರ ವಾಪಾಸ್ ತೆಗೆಸಿದ ಸಚಿವ
Team Udayavani, May 2, 2019, 3:50 PM IST
ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪ ಚುನಾವಣೆ ಟಿಕೆಟ್ ಕೈ
ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ 6 ಮಂದಿ ಮುಖಂಡರ ನಾಮಪತ್ರ ತೆಗೆಸುವಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಯಶಸ್ವಿಯಾಗಿದ್ದಾರೆ.
ಬುಧವಾರ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಮನವೊಲಿಸಿದ್ದ ಜಮೀರ್ ಅಹ್ಮದ್ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಲಕರ್ಣಿ 6 ಮಂದಿಯ ನಾಮಪತ್ರ ವಾಪಾಸ್ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವತಃ ಜಮೀರ್ ಅವರೇ ತಾಲೂಕು ಕಚೇರಿಗೆ 6 ಮಂದಿಯೊಂದಿಗೆ ಆಗಮಿಸಿ ನಾಮಪತ್ರಗಳನ್ನ ವಾಪಾಸ್ ತೆಗೆಸಿದ್ದಾರೆ.
ಸುರೇಶ್ ಸವಣೂರು, ನದಾಫ್ , ಜೆ.ಡಿ ಘೋರ್ಪಡೆ,ಚಂದ್ರಶೇಖರ್, ವಿಶ್ವನಾಥ ಕುಬಿನಾಳ ಸೇರಿ ಆರು ಮಂದಿ ನಾಮಪತ್ರ ವಾಪಾಸ್ ಪಡೆದಿದ್ದಾರೆ.
ನಾಮಪತ್ರ ಹಿಂಪಡೆಯಲು ಮೇ 2 ಅಂತಿಮ
ದಿನವಾದ್ದರಿಂದ ಜಮೀರ್ ಬಂಡಾಯ ಶಮನಗೊಳಿಸಲು ನೇತೃತ್ವವಹಿಸಿದ್ದರು.
ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಭರವಸೆ ನೀಡಿದಕಾರಣ ನಾಮಪತ್ರ ವಾಪಾಸ್ ಪಡೆದಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ದಿ| ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಮತ್ತು ಬಿಜೆಪಿಯ ಮಾಜಿ ಶಾಸಕಎಸ್.ಐ.ಚಿಕ್ಕನಗೌಡ್ರ ನಡುವೆ ನೇರ ಸ್ಪರ್ಧೆ ಎದುರಾಗಿದೆ.