ಪತ್ರಕರ್ತನ ಕೈಗೆ ನಿಂಬೆಹಣ್ಣು ಕೊಟ್ಟ ಸಿದ್ದು!
Team Udayavani, Apr 18, 2019, 3:00 AM IST
ಕಲಬುರಗಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಿಂಬೆಹಣ್ಣಿನ ರಾಜಕೀಯ ಹೆಚ್ಚು ಚರ್ಚಿತವಾಗುತ್ತಿರುವ ಬೆನ್ನಲ್ಲೇ ಬುಧವಾರ ನಗರಕ್ಕಾಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ನಿಂಬೆ ಹಣ್ಣು ಕಾಣಿಸಿಕೊಂಡಿತ್ತು!
ಕಲಬುರ್ಗಿ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಲು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿದ್ದರಾಮಯ್ಯ ಅವರಿಗೆ ಮಾಧ್ಯಮದವರು ಸುತ್ತುವರಿದರು. ಆಗ ಅವರ ಕೈಯಲ್ಲಿದ್ದ ನಿಂಬೆ ಹಣ್ಣನ್ನು ಮಾಧ್ಯಮದವರೊಬ್ಬರು ಗುರುತಿಸಿ ಕೇಳಿದರು.
ಆಗ ಸಿದ್ದರಾಮಯ್ಯನವರು, “ಇಲ್ಲಪ್ಪಾ ನನಗೆ ವಿಮಾನ ನಿಲ್ದಾಣದಲ್ಲಿ ಯಾರೋ ನಿಂಬೆಹಣ್ಣನ್ನು ನನ್ನ ಕೈಗೆ ಕೊಟ್ಟರು. ಬೇಕಾದರೆ ತಗೋ..’ ಎಂದು ಪ್ರಶ್ನಿಸಿದ ಮಾಧ್ಯಮದ ವ್ಯಕ್ತಿಯ ಕೈಗಿತ್ತರು. “ಅದು ನಿಮ್ಮ ಕೈಯಲ್ಲಿರುವ ನಿಂಬೆಹಣ್ಣು. ನೀವೇ ಇಟ್ಟುಕೊಳ್ಳಿ’ ಎಂದು ಪತ್ರಕರ್ತ ಹೇಳಿದಾಗ, “ಬೇಡಪ್ಪಾ ಈ ಕುರಿತು ನನಗೆ ನಂಬಿಕೆ ಇಲ್ಲ. ನೀವೇ ಇಟ್ಟುಕೊಳ್ಳಿ’ ಎಂದು ಹೇಳಿ ಅಲ್ಲಿಂದ ಮುಂದೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು