ದುಮ್ಕಾದಲ್ಲಿ ಗುರು-ಶಿಷ್ಯ ಸಮರ


Team Udayavani, May 14, 2019, 4:55 AM IST

30

ಜಾರ್ಖಂಡ್‌ನ‌ ದುಮ್ಕಾ ಕ್ಷೇತ್ರವೆಂದಾಕ್ಷಣ ನೆನಪಿಗೆ ಬರುವುದು ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಅವರ ಹೆಸರು. 1980ರಿಂದ, ಅಂದರೆ ಈ ಕ್ಷೇತ್ರ ಅವಿಭಜಿತ ಬಿಹಾರದ ಭಾಗವಾಗಿದ್ದ ಸಮಯದಿಂದ ಆರಂಭಿಸಿ ಇಲ್ಲಿಯ ವರೆಗೂ 8 ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಶಿಬು ಸೋರೇನ್‌ ಕೇವಲ ಮೂರು ಬಾರಿ ಸೋತಿದ್ದಾರೆ. ಈ ಬಾರಿ ಬಿಜೆಪಿ ಯು ಸುನಿಲ್ ಸೋರೇನ್‌ರನ್ನು ಶಿಬು ವಿರುದ್ಧ ಕಣಕ್ಕೆ ಇಳಿಸಿದೆ.

ಗಮನಿಸಬೇಕಾದ ಅಂಶವೆಂದರೆ, ಸುನಿಲ್ ಸೋರೇನ್‌ ಒಂದು ಕಾಲದಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾದ ಭಾಗವಾಗಿದ್ದವರು, ಅಲ್ಲದೇ ಶಿಬು ಸೋರೇನ್‌ರ ಕಟ್ಟಾ ಶಿಷ್ಯ ಎಂದೇ ಕರೆಸಿಕೊ ಳ್ಳುತ್ತಿದ್ದರು. ಹೀಗಾಗಿ, ದುಮ್ಕಾ ಕದನವನ್ನು ಜನ, ಗುರು-ಶಿಷ್ಯನ ಹೋರಾಟ ಎಂದೇ ಕರೆಯುತ್ತಿದ್ದಾರೆ.

ಗುರು ಶಿಷ್ಯನ ನಡುವಿನ ಕದನ ಇದೇ ಮೊದಲಿನದ್ದೇನೂ ಅಲ್ಲ. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲೂ ಇಬ್ಬರೂ ಮುಖಾಮುಖೀಯಾಗಿದ್ದಾರೆ. ಎರಡರಲ್ಲೂ ಸುನಿಲ್ ಸೋತಿದ್ದಾರೆ. ಆದರೆ ಸೋಲಿನ ಅಂತರ ಮಾತ್ರ ಕಡಿಮೆಯೇ. 2014ರ ಮೋದಿ ಅಲೆಯ ವೇಳೆ ಶಿಬು ಸೋರೇನ್‌ ಅವರಿಗೆ ಪ್ರಬಲ ಸ್ಪರ್ಧೆ ಎದುರೊಡ್ಡಿದ್ದ ಸುನಿಲ್ ಕೇವಲ 39 ಸಾವಿರ ಮತಗಳ ಅಂತರದಿಂದ ಸೋತಿದ್ದರು. 2009ರಲ್ಲಂತೂ 19 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ ಶಿಬು ಸೋರೇನ್‌ ಅವರು ಈ ಬಾರಿಯ ಚುನಾವಣೆಯನ್ನು ಹಗುರವಾಗಿಯಂತೂ ಪರಿಗಣಿಸಿಲ್ಲ. ಇದು ಗುರೂಜಿಯ ಕೊನೆಯ ಚುನಾವಣೆಯಾಗಿದ್ದು, ನೀವೆಲ್ಲ ಅವ ರನ್ನು ಗೆಲ್ಲಿಸಲೇಬೇಕು ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾ ಭಾವನಾತ್ಮಕ ಅಸ್ತ್ರ ಬಳಸತೊಡಗಿದೆ.

2014ರಲ್ಲಿ ಜಾರ್ಖಂಡ್‌ ವಿಕಾಸ್‌ ಮೋರ್ಚಾ ವತಿಯಿಂದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಕೂಡ ಈ ಕ್ಷೇತ್ರ ದಿಂದ ಸ್ಪರ್ಧಿಸಿದ್ದರು (ಇವರು ಹಿಂದೆ ಬಿಜೆಪಿಯ ಟಿಕೆಟ್ ಮೇಲೆ 1998 ಮತ್ತು 1999ರ ಚುನಾವಣೆಯಲ್ಲಿ ಶಿಬು ಸೋರೇನ್‌ ಅವರನ್ನು ಸೋಲಿಸಿದ್ದ ಖ್ಯಾತಿ ಹೊಂದಿದವರು). ಅಂದರೆ 2014ರಲ್ಲಿ ತ್ರಿಕೋನ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಬಾಬುಲಾಲ್ ಮರಾಂಡಿ ಅವರು ಮಹಾ ಘಟ ಬಂಧನದ ಭಾಗವಾಗಿದ್ದು, ಶಿಬು ಸೋರೇನ್‌ ಪರವಾಗಿ ನಿಂತಿದ್ದಾರೆ.

ಹೀಗಾಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಬುಲಾಲ್ರಿಗೆ ಹೋಗಿದ್ದ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳು ಈ ಬಾರಿ ಶಿಬು ಅವರಿಗೆ ಬರಲಿವೆ ಎನ್ನುವ ಭರವಸೆಯಲ್ಲಿ ಪಕ್ಷದವರು ಇದ್ದಾರೆ. ಶಿಬು ಸೋರೇನ್‌ ಅವರು ಕೊಲೆ ಪ್ರಕರಣವೊಂದರಲ್ಲಿ ಹೆಸರು ಕೆಡಿಸಿಕೊಂಡು ಅಧಿಕಾರ ಕಳೆದುಕೊಂಡ ಇತಿಹಾಸವನ್ನು ಹೊಂದಿದ್ದರೂ ಈ ಭಾಗದ ಜನರಿಗೆ ಅವರೆಡೆಗಿನ ಅಭಿ ಮಾನವೇನೂ ತಗ್ಗಿಲ್ಲ. ಅವರನ್ನು ಜನ ‘ಗುರೂಜಿ’ ಎಂದೇ ಕರೆಯುತ್ತಾರೆ. ಆದರೆ ”ಶಿಬು ಸೋರೇನ್‌ ಬುಡಕಟ್ಟು ಜನರನ್ನು ಕತ್ತಲಲ್ಲೇ ಇಟ್ಟು, ತಾವಷ್ಟೇ ಬೆಳೆದಿದ್ದಾರೆ” ಎನ್ನುತ್ತಾರೆ ಸುನೀಲ್ ಸೋರೇನ್‌. ದುಮ್ಕಾ ಕ್ಷೇತ್ರದಲ್ಲಿ ಸಂತಾಲ್ ಬುಡಕಟ್ಟು ಜನರ ಪ್ರಾಬಲ್ಯವಿದ್ದು ಶಿಬು ಸೋರೇನ್‌ ಅವರು ಸಂತಾಲ್ ಮತ್ತು ಮುಸ್ಲಿಂ ಮತಗಳ ಮೇಲೆ ಅವಲಂಬಿತರಾಗಿದ್ದಾರೆ. ”ಈ ಬಾರಿ ಯುವ ಸಂತಾಲರು ಗುರೂಜಿಯ ನಿಷ್ಕ್ರಿಯತೆಯಿಂದ ಬೇಸತ್ತಿದ್ದು ಅವರೆಲ್ಲ ನಮಗೆ ಮತನೀಡಲಿದ್ದಾರೆ” ಎನ್ನುತ್ತಾರೆ ಸುನಿಲ್.

”ಇಡೀ ದುಮ್ಕಾ ಕ್ಷೇತ್ರ ನಕ್ಸಲ್ ಪೀಡಿತವಾಗಿದೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ಅತ್ತ ಶಿಬು ಸೋರೇನ್‌ ಆಗಲಿ, ಇತ್ತ ಸುನಿಲ್ ಆಗಲಿ ಮಾತನಾಡುತ್ತಲೇ ಇಲ್ಲ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಕಣದಲ್ಲಿ
ಶಿಬು ಸೋರೇನ್‌(ಜೆಎಂಎಂ)
ಸುನಿಲ್ ಸೋರೇನ್‌(ಬಿಜೆಪಿ)

2014ರ ಫ‌ಲಿತಾಂಶ
ಶಿಬು ಸೋರೇನ್‌(ಜೆಎಂಎಂ) 3,35,815
ಸುನಿಲ್ ಸೋರೇನ್‌(ಬಿಜೆಪಿ)2,96,785

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.