ಕಾವೇರಿ ಹೋರಾಟಗಾರರ ಕೇಸ್ ವಾಪಸ್: ಸಿಎಂ
ಮಂಡ್ಯದಲ್ಲಿ ಮುಂದುವರಿದ ಪ್ರಚಾರದ ಅಬ್ಬರ
Team Udayavani, Apr 12, 2019, 6:00 AM IST
ಮಂಡ್ಯದ ಹೊರವಲಯದಲ್ಲಿ ನಿಖೀಲ್ ಪ್ರಚಾರ.
ಮಂಡ್ಯ: ಸೊಳ್ಳೇಪುರ, ರಾಂಪುರ, ವಳಗೆರೆಹಳ್ಳಿ, ಗೆಜ್ಜಲಗೆರೆ ಸೇರಿದಂತೆ ಮದ್ದೂರು ತಾಲೂಕಿನ ವಿವಿಧೆಡೆ ಸಚಿವ ಡಿ.ಸಿ.ತಮ್ಮಣ್ಣ ಜೊತೆಗೂಡಿ ರೋಡ್ ಶೋ ನಡೆಸಿದ
ಕುಮಾರಸ್ವಾಮಿ, ಸುಮಲತಾ ಪರ ಟೀಕಾಪ್ರಹಾರ ನಡೆಸಿದರು.
ತಾಲೂಕಿನ ಗೆಜ್ಜಲಗೆರೆ ಬಂದ ಸಿಎಂ, 1983ರ ಗೆಜ್ಜಲಗೆರೆ ಗೋಲಿಬಾರ್ ಪ್ರಕರಣದಲ್ಲಿ ವೀರ ಮರಣವನ್ನಪ್ಪಿದ ನಾಥಪ್ಪ ಹಾಗೂ ಸಿದ್ದಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದರು. ಕಾವೇರಿಗಾಗಿ ಹೋರಾಡಿದ 1,350 ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದರು.
ಜೆಡಿಎಸ್ನ್ನು ಮುಗಿಸುವುದರ ಜತೆಗೆ ನಿಖೀಲ್ನನ್ನು ಸೋಲಿಸಲು ಎಲ್ಲಾಪಕ್ಷಗಳು ಟೊಂಕಕಟ್ಟಿ ನಿಂತಿದ್ದಾರೆ. ಇಂತಹ ಎಲ್ಲಾ ಪ್ರಯತ್ನಗಳಿಗೆ ತಾವು ತಕ್ಕ ಉತ್ತರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಮಂಡ್ಯದ ಹರಿಪ್ರಿಯ ಹೋಟೆಲ್ನ ಚಾಣಕ್ಯ ಸಭಾಂಗಣದಲ್ಲಿ ಗ್ರಾಮೀಣ ವಿದ್ಯುತ್ ಪ್ರತಿನಿಧಿಗಳು ಸನ್ಮಾನಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಇಂತಹ ಸಣ್ಣಪುಟ್ಟ ಕಾರ್ಯಕ್ರಮಕ್ಕೆಲ್ಲಾ ಬರೋಕೆ ಆಗೋಲ್ಲ ಎಂದು “ಕೈ’ನಾಯಕರ ವಿರುದ್ಧ ಕಿಡಿಕಾರಿ, ಸನ್ಮಾನ ಸ್ವೀಕರಿಸದೆ ಹೊರ ನಡೆದರು.
ಚುನಾವಣೆಗೆ ಎರಡು ದಿನವಿರುವಾಗ ಪ್ರಚಾರದ ಸಮಯದಲ್ಲಿ ತಮ್ಮ ಬೆಂಬಲಿಗರಿಂದಲೇ ಕಲ್ಲು ತೂರಾಟ ನಡೆಸಿಕೊಂಡು ಆಸ್ಪತ್ರೆ ಸೇರಿಕೊಳ್ಳುವ ಚಿತಾವಣೆಯನ್ನು ಪಕ್ಷೇತರ ಅಭ್ಯರ್ಥಿ ನಡೆಸಿದ್ದಾರೆ. ಆ ಮೂಲಕ ಮತ್ತೂಂದು ರೀತಿಯಲ್ಲಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸುಮಲತಾ ಹೆಸರೇಳದೆ ಆರೋಪಿಸಿದರು.
ಸಿಎಂಗೆ ತರಾಟೆ: ಈ ಮಧ್ಯೆ, ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ರೈತರ ಸಾಲಮನ್ನಾ ವಿಚಾರವಾಗಿ ಮಾತು ಆರಂಭಿಸಿದಾಗ, ಗ್ರಾಮಸ್ಥರು ಅವರ ಭಾಷಣಕ್ಕೆ
ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಸಿಎಂ, ನಿಮಗೆ ಬೇಕಾದವರಿಗೆ ಓಟು ಹಾಕಿಕೊಳ್ಳಿ. ನಿಮ್ಮ ಕಷ್ಟ-ಸುಖಕ್ಕೆ ಯಾರು ಸ್ಪಂದಿಸುತ್ತಾರೋ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿ, ಮುನ್ನಡೆದರು.
ಕಾರಿಗೆ ಬೆಂಕಿ: ಈ ಮಧ್ಯೆ, ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕುಮಾರಸ್ವಾಮಿಯವರ ರೇಂಜ್ ರೋವರ್ ಕಾರಿನಲ್ಲಿ ತುಂಬಾ ಬಿಸಿಯಾಗಿ, ಹೊಗೆ ಕಾಣಿಸಿಕೊಂಡು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು. ಬಳಿಕ, ಸಚಿವ ಡಿ.ಸಿ.ತಮ್ಮಣ್ಣ ಅವರ ಕಾರಿನಲ್ಲಿ ಪ್ರಚಾರ ಮುಂದುವರಿಸಿದರು. ಗುರುವಾರ ಕಾರನ್ನು ರಿಪೇರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ