ಮೃತರ ಭೂಮಿ ಕಸಿದಿದ್ದಾರೆಯೇ ಮೋದಿ?
Team Udayavani, May 6, 2019, 6:20 AM IST
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ನೀಡಿದ್ದ ಪ್ಲಾಟ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ. ಅವರ ಪ್ಲಾಟ್ ವರ್ಗಾವಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ನಿಯಮವಿದೆ. ಆದರೆ ಅದನ್ನು ಬಿಜೆಪಿಯ ಮಾಜಿ ಅಧ್ಯಕ್ಷ ಜನ ಕೃಷ್ಣಮೂರ್ತಿ ಪ್ಲಾಟ್ ಜೊತೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇವರು 2007 ಸೆಪ್ಟೆಂಬರ್ನಲ್ಲೇ ನಿಧನರಾಗಿದ್ದಾರೆ.
ಜನ ಕೃಷ್ಣಮೂರ್ತಿ ಪ್ಲಾಟ್ ಅನ್ನು ಮೋದಿ ತಮ್ಮ ಪ್ಲಾಟ್ ಜೊತೆಗೆ ಸೇರಿಸಿಕೊಂಡಿದ್ದಾರೆ. ಮೃತರ ಭೂಮಿಯನ್ನು ಮೋದಿ ನುಂಗಿದ್ದಾರೆ ಎಂಬುದಾಗಿ ಖೇರಾ ಆರೋಪಿಸಿದ್ದಾರೆ. ಅಲ್ಲದೆ ಮೋದಿ ನಾಮಪತ್ರದಲ್ಲಿ ಒಂದೊಂದು ವರ್ಷದಲ್ಲೂ ಪ್ಲಾಟ್ನ ಸಂಖ್ಯೆಯನ್ನು ಬೇರೆ ಬೇರೆ ನಮೂದಿಸಲಾಗಿದೆ. ಒಂದು ವರ್ಷ 411 ಎಂದು ನಮೂದಿಸಲಾಗಿದ್ದರೆ, ಇನ್ನೊಮ್ಮೆ 401ಎ ಎಂದು ನಮೂದಿಸಲಾಗಿದೆ. ಅನಂತರ ನಾಲ್ಕು ಪ್ಲಾಟ್ಗಳಲ್ಲಿ ಇದನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆಯಾದರೂ, ಉಲ್ಲೇಖೀಸಿದ ಸಂಖ್ಯೆಗೆ ಇದು ಹೋಲಿಕೆಯಾಗುತ್ತಿಲ್ಲ ಎಂದು ಖೇರಾ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!