ಮೋದಿ ಸರ್ವಾಧಿಕಾರ ತಡೆಗೆ ಒಗ್ಗಟ್ಟಿನ ಹೋರಾಟ
Team Udayavani, Apr 3, 2019, 6:00 AM IST
ಬೀದರ: ನರೇಂದ್ರ ಮೋದಿ ಐದು ವರ್ಷಗಳಲ್ಲಿ ಸಂಸತ್ನಲ್ಲಿ ಮಾತಾಡಿದ್ದು ಕೇವಲ 25 ಗಂಟೆ 25 ನಿಮಿಷ. ಉಳಿದೆಲ್ಲ ಮಾತುಗಳನ್ನು ಸಂಸತ್ ಹೊರಗಡೆಯೇ ಆಡಿದ್ದಾರೆ ಎಂದು ಕಲಬುರಗಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮಂಗಳವಾರ ಮೈತ್ರಿ ಪಕ್ಷಗಳು ಏರ್ಪಡಿಸಿದ್ದ
ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಸರ್ವಾಧಿಕಾರಿಯಾಗಲು ಹೊರಟಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಇದನ್ನು ತಡೆಯಬೇಕಿದೆ ಎಂದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಅರಾಜಕತೆ ಸೃಷ್ಟಿಗೆಯತ್ನಿಸುತ್ತಿದೆ.
ಈ ಮೂಲಕ ದೇಶದಲ್ಲಿ ಹುಕುಂ ಶಾಹಿ ಆಡಳಿತಕ್ಕೆ ಹುನ್ನಾರ
ನಡೆಸುತ್ತಿರುವ ಬಿಜೆಪಿಗೆ ಆರ್ಎಸ್ಎಸ್ನ ಸಂಪೂರ್ಣ ಸಹಕಾರವಿದೆ. ಈ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ, ದೇಶದ ಅಭಿವೃದಿಟಛಿಗಾಗಿ ಕಾಂಗ್ರೆಸ್ಗೆ ಬೆಂಬಲ ನೀಡಬೇಕು. ನಾವು ಕೆಲಸ ಮಾಡಿದ್ದೇವೆ. ಮತ ಕೇಳುತ್ತಿದ್ದೇವೆ. ಮೋದಿ ಏನೂ ಮಾಡದೆ ಮತ
ಕೇಳುತ್ತಿದ್ದಾರೆ. ಇದೀಗ ನಡೆಯಲಿರುವ ಚುನಾವಣೆ ಖಂಡ್ರೆ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ನಡುವಿನ ಚುನಾವಣೆ ಅಲ್ಲ. ಇದು ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ