“ಅವರ್ ಬಿಟ್ ಇವರ್ ಬಿಟ್ ಇನ್ಯಾರು’
Team Udayavani, Mar 12, 2019, 12:55 AM IST
ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಮರ್ಥ ಅಭ್ಯರ್ಥಿ ಸಿಗುತ್ತಿಲ್ಲವಂತೆ. ಪಾರ್ಟಿ ಫಂಡ್ಗಾಗಿ ಎದುರು ನೋಡದೆ, ಚುನಾವಣೆ ವೆಚ್ಚ ಖರ್ಚು ಮಾಡಿ ಸ್ಪರ್ಧೆ ಮಾಡುವವರಿಗಾಗಿ ಹುಡುಕಾಟ ನಡೆಯುತ್ತಿದ್ದಂತೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಕಣಕ್ಕೆ ಇಳಿಸಲು ರಾಜ್ಯದ ಕೆಲವು ನಾಯಕರು ಮೆಗಾಪ್ಲ್ರಾನ್ ರೂಪಿಸಿದ್ದರಂತೆ. ಆದರೆ, ಅದರ ಸುಳಿವರಿತ ರಾಮಲಿಂಗಾರೆಡ್ಡಿಯವರು,”ಸಚಿವ ಸ್ಥಾನ ಕೊಡದಿದ್ದರೂ ಸರಿ, ನನಗೆ ಎಂಪಿ ಟಿಕೆಟ್ ಬೇಡ’ ಎಂದು ಕೈ ಮುಗಿದಿದ್ದಾರಂತೆ. ಹೀಗಾಗಿ, ಪ್ರಿಯಾಕೃಷ್ಣ ಅವರ ಹೆಸರು ತೇಲಿ ಬಿಡಲಾಗಿದೆಯಂತೆ. ಅವರೂ ಸಹ ಒಲ್ಲದ ಮನಸ್ಸಿನಲ್ಲಿದ್ದಾರಂತೆ.
ಹೀಗಾಗಿ, “ಅವರ್ ಬಿಟ್ ಇವರ್ ಬಿಟ್ ಇನ್ಯಾರು’ ಎಂದು ಕಾಂಗ್ರೆಸ್ ನಾಯಕರು ತಲಾಷೆ ಮಾಡುತ್ತಿದ್ದಾರಂತೆ. ಬೆಂಗಳೂರು ಸೆಂಟ್ರಲ್ ಟಿಕೆಟ್ಗೆ ಪ್ರಯತ್ನಿಸುತ್ತಿರುವ ಪ್ರಭಾವಿ ನಾಯಕರಿಗೆ ದಕ್ಷಿಣ ಕ್ಷೇತ್ರದ ಟಿಕೆಟ್ ಕೊಡಬಹುದು ಎಂದು ಕೆಲವರು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ