ಸುಳ್ಳಿನ ಮೊರೆಹೋದ ಪ್ರಧಾನಿ: ಕಾಂಗ್ರೆಸ್ ಆರೋಪ
Team Udayavani, May 1, 2019, 6:00 AM IST
ರಾಹುಲ್ಗೆ ನೋಟಿಸ್ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತಮ್ಮ ವೈಫಲ್ಯದಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಹತಾಶ ಪ್ರಧಾನಿ ದಿನಕ್ಕೊಂದರಂತೆ ಸುಳ್ಳು ಆರೋಪಗಳನ್ನು ಮಾಡತೊಡಗಿದ್ದಾರೆ. ಅವರಿಗೆ ಸೋಲಿನ ಭಯ ಕಾಡತೊಡಗಿದೆ ಎಂದು ಆರೋಪಿಸಿದೆ.