ಉಗ್ರರ ಕೊಲ್ಲಲು ಆಯೋಗದ ಒಪ್ಪಿಗೆ ಬೇಕೇ?
ಖುಷಿನಗರ್, ದಿಯೋರಿಯಾ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ
Team Udayavani, May 13, 2019, 6:00 AM IST
ಹೊಸದಿಲ್ಲಿ: “ಭಾರತವನ್ನು ಹಾಳುಗೆಡವಲು ಬಂದಿರುವ ಉಗ್ರರನ್ನು ಸದೆಬಡಿಯಲು ನಮ್ಮ ಯೋಧರು, ಚುನಾವಣಾ ಆಯೋಗದ ಅನುಮತಿ ಪಡೆಯಬೇಕೇ?’
– ಇಂಥದ್ದೊಂದು ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಉತ್ತರ ಪ್ರದೇಶದ ಖುಷಿ ನಗರ್, ದಿಯೋರಿಯಾ ಹಾಗೂ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ಮೂರು ಪ್ರತ್ಯೇಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಸೇನೆಯ ಕಾರ್ಯಾಚರಣೆಗಳನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ ಎಂಬ ವಿಪಕ್ಷಗಳ ಆರೋಪಗಳಿಗೆ ಮೊನಚಾದ ಉತ್ತರ ನೀಡಿದರು. ತಮ್ಮಿ ಮಾತಿಗೆ, ಕಾಶ್ಮೀರದ ಶೋಪಿಯಾನ್ನಲ್ಲಿ ರವಿವಾರ ಬೆಳಗ್ಗೆ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಪ್ರಕರಣ ವನ್ನು ಬಳಸಿಕೊಂಡ ಅವರು,””ಸಶಸ್ತ್ರಧಾರಿ ಭಯೋತ್ಪಾದಕರು ಸೇನೆಯ ಮುಂದೆ ಪ್ರತ್ಯಕ್ಷವಾದಾಗ, ನಮ್ಮ ಯೋಧರು ಅವರನ್ನು ಕೊಲ್ಲಬೇಕೋ ಬೇಡವೋ ಎಂದು ಚುನಾವಣಾ ಆಯೋಗವನ್ನು ಕೇಳುತ್ತಾ ಕೂರಬೇಕೇ?” ಎಂದು ಕೇಳಿದರು.
ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಹರಿಹಾಯ್ದ ಅವರು, “”ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ವಿವಾಹಿತ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಕೆದಕಿ, “”ಎ. 26ರಂದು ನಡೆದಿದ್ದ ಈ ಪ್ರಕರಣದ ಬಗ್ಗೆ ಆಕೆಯ ಪತಿ ಅಂದೇ ಪೊಲೀಸರಿಗೆ ದೂರು ನೀಡಿದ್ದರೂ, ಮೇ 2ರಂದು ಎಫ್ಐಆರ್ ದಾಖಲಿಸಲಾಗಿದೆ. ನಿಮಗೆ (ಮಾಯಾವತಿ) ಈ ದೇಶದ ಹೆಣ್ಣುಮಕ್ಕಳ ಮೇಲೆ ಕಿಂಚಿತ್ತಾದರೂ ಗೌರವವಿದ್ದರೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಬೆಂಬಲ ವನ್ನು ಹಿಂಪಡೆಯಿರಿ” ಎಂದು ಸವಾಲು ಹಾಕಿದರು.
ಇತ್ತೀಚೆಗೆ, ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದ ಮಾಯಾವತಿ, ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದ್ದರು.
“ಕಳಂಕ ಹಚ್ಚಿದವರನ್ನು ಕ್ಷಮಿಸಲ್ಲ’
ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “”ಹಿಂದೂ ಧರ್ಮಕ್ಕೆ ಭಯೋತ್ಪಾದನೆಯ ಕಳಂಕ (ಮಾಲೆಗಾಂವ್, ಅಜ್ಮಿàರ್ ಸ್ಫೋಟ ಪ್ರಕರಣ) ಹಚ್ಚುವ ಮೂಲಕ ಕಾಂಗ್ರೆಸ್ ಭಾರತದ ಧಾರ್ಮಿಕ ಪರಂಪರೆಗೆ ಕಪ್ಪು ಮಸಿ ಬಳಿಯಿತು. ಹಿಂದೂ ಧರ್ಮಕ್ಕೆ ಇಂಥ ಕಳಂಕ ಅಂಟಿಸಿದವರನ್ನು ಈ ದೇಶದ ಹಿಂದೂಗಳು ಎಂದಿಗೂ ಕ್ಷಮಿಸಲಾರರು” ಎಂದು ಹರಿಹಾಯ್ದರು. ಅಲ್ಲದೆ, ಭೋಪಾಲ್ ಅನಿಲ ದುರಂತ, ಸಿಕ್ಖ್ ದಂಗೆಯಂಥ ಘಟನೆ ಗಳನ್ನು ಆಗಿದ್ದಾಯ್ತು ಎನ್ನುವ ಮೂಲಕ ಉಡಾಫೆ ಮನೋಭಾವವನ್ನು ಕಾಂಗ್ರೆಸ್ ತೋರುತ್ತಿದೆ. ಇದು ವಿಪಕ್ಷಗಳ ಮನಸ್ಥಿತಿಗೆ ಸೂಕ್ತ ಉದಾಹರಣೆ ಎಂದರು.
ಅಲ್ಲದೆ, ಖಾಂಡ್ವಾದ ಹೆಮ್ಮೆಯಾದ ಬಾಲಿವುಡ್ನ ಅಮರ ಗಾಯಕ ಕಿಶೋರ್ ಕುಮಾರ್ ಅವರ ಹಾಡುಗಳನ್ನು ತುರ್ತು ಪರಿಸ್ಥಿತಿ ವೇಳೆ ನಿರ್ಬಂಧಿಸಲಾಗಿತ್ತೆಂದೂ ಹೇಳಿದರು.
ಜತೆಗೆ, ಅಲ್ಲದೆ, ಜಾತಿ ರಾಜಕಾರಣ ಮಾಡುವ ವಿಪಕ್ಷಗಳು, ಹಾಲಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದರಲ್ಲದೆ, ತಾವು ಜಾತಿ ರಾಜಕಾರಣದಿಂದ ದೂರವಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ