ಆಸ್ತಿ ಬೆಲೆ ಏರಿಕೆ: ಪ್ರಮೋದ್‌ ಮಧ್ವರಾಜ್‌ ವಿವರಣೆ


Team Udayavani, Mar 28, 2019, 6:10 AM IST

madhwaraj-PP

ಉಡುಪಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹಿಂದಿನ ವಿಧಾನಸಭಾ ಚುನಾವಣ ಸಂದರ್ಭ ಸಲ್ಲಿಸಿದ ನಾಮಪತ್ರದ ಅಫಿದವಿತ್‌ ಘೋಷಣೆ ಮತ್ತು ಇಂದಿನ ಘೋಷಣೆಯಲ್ಲಿನ ಆಸ್ತಿ ಮೌಲ್ಯದ ವೃದ್ಧಿಗೆ ಕಾರಣಗಳನ್ನು ನೀಡಿದ್ದಾರೆ.

ಸ್ಥಿರಾಸ್ತಿಯ ಅಂದಾಜು ಪ್ರಸ್ತುತ ಮಾರುಕಟ್ಟೆ ದರದಲ್ಲಿ ಏರಿಕೆಯಾಗಿರುವುದರಿಂದ ಸುಮಾರು 1.26 ಕೋಟಿ ರೂ. ಮೌಲ್ಯ ಏರಿಕೆಯಾಗಿದೆ. ಷೇರು ಹೂಡಿಕೆಗಳ ಮೌಲ್ಯವನ್ನು ಲೆಕ್ಕಪರಿಶೋಧನೆಗೊಳಪಟ್ಟ ತಖೆ¤ಗಳ ಪ್ರಕಾರ ಮಾರಾಟಗಾರನಿಗೆ ಲಾಭರಹಿತವಾಗಿ ನಮೂದಿಸಲಾಗಿದೆ. ಹಿಂದಿನ ಸಲ ಇದರ ಮೌಲ್ಯವನ್ನು ಮಾರುಕಟ್ಟೆ ದರದಲ್ಲಿ ನಮೂದಿಸಲಾಗಿತ್ತು. ಇದರಲ್ಲಿ ಸುಮಾರು 5.05 ಕೋಟಿ  ರೂ.ಗಳಷ್ಟು ವ್ಯತ್ಯಾಸವಿದೆ. ಎಲ್ಲ ಅಂಕಿ-ಅಂಶಗಳನ್ನು ಅಫಿದವಿತ್‌ನಲ್ಲಿ ವಿವರಿಸಲಾಗಿದೆ. ಇತರ ಆಸ್ತಿಗಳ ಮೌಲ್ಯ ಕಳೆದ ವರ್ಷ ಅಫಿದವಿತ್‌ನ ಅಂಕಿ-ಅಂಶಗಳಿಗೆ ಹೋಲಿಸಿ
ದರೆ 2.37 ಕೋಟಿ ರೂ.ಗಳಷ್ಟು ಮೌಲ್ಯದ ವ್ಯತ್ಯಾಸವಿದೆ. ಇದಕ್ಕೆ ಮೂಲಕಾರಣ ಕಳೆದ ವರ್ಷ ಆಸ್ತಿಯ ಮೌಲ್ಯಗಳನ್ನು ಪ್ರೊವಿಷನಲ್‌ ಆರ್ಥಿಕ ತಖೆ ಪ್ರಕಾರ ಸಲ್ಲಿಸಲಾಗಿತ್ತು. ಈ ಸಲದ ಅಂಕಿ-ಅಂಶಗಳನ್ನು ಅಕ್ಟೋಬರ್‌ನಲ್ಲಿ ಪಡೆದ ಲೆಕ್ಕ ಪರಿಶೋಧನ ತಖೆ¤ ಪ್ರಕಾರ ಸಲ್ಲಿಸಲಾಗಿದೆ.

ನನ್ನ ಎಲ್ಲ ಆಸ್ತಿಯ ಮೌಲ್ಯಗಳು ಅಫಿದವಿತ್‌ನ ಆಯಾ ಕಂಡಿಕೆಗಳಲ್ಲಿ ಲಭ್ಯವಿವೆ. 2016-2017ನೇ ಆರ್ಥಿಕ ವರ್ಷದಲ್ಲಿ ನನ್ನ ಮಾಲಕತ್ವದ, “ಮೆ| ರಾಜ್‌ ಫಿಶ್‌ ಮೀಲ್‌ ಮತ್ತು ಆಯಿಲ್‌ ಕಂಪೆನಿ’ಯನ್ನು ಪಾಲುದಾರಿಕೆ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ. ಆದುದ ರಿಂದ ಸಂಸ್ಥೆಯ 2016-17ನೇ ಸಾಲಿನ ಹಾಗೂ ಅನಂತರದ ಆರ್ಥಿಕ ತಖೆ¤ಗಳಲ್ಲಿರುವ ಸ್ಥಿರ ಹಾಗೂ ಚರ ಸ್ವತ್ತುಗಳು ಪಾಲುದಾರಿಕೆ ಸಂಸ್ಥೆಯ ಸ್ಥಿರ ಹಾಗೂ ಚರ ಸ್ವತ್ತುಗಳಾಗಿ ಪರಿವರ್ತನೆಯಾಗಿದೆ. ಇದರ ಬಗ್ಗೆ ನನ್ನ ಅಫಿದವಿತ್‌ನಲ್ಲಿ ಉಲ್ಲೇಖೀಸಿದ್ದೇನೆ ಮತ್ತು ಕಳೆದ ಬಾರಿಯೂ ಈ ಬಗ್ಗೆ ವಿವರ ನೀಡಿದ್ದೇನೆ ಎಂದು ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

ಬ್ಯಾಂಕ್‌ ವ್ಯವಹಾರ – ನ್ಯಾಯಾಲಯ ಆದೇಶ
ಪ್ರಮೋದ್‌ ಅವರ ಬ್ಯಾಂಕ್‌ ವ್ಯವಹಾರದ ಬಗ್ಗೆ ಟಿ.ಜೆ. ಅಬ್ರಹಾಂ ಅಥವಾ ಇತರರು ಹೇಳಿಕೆ ನೀಡುವುದು, ಅದನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು, ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತಾವಿಸುವುದನ್ನು ನಿರ್ಬಂಧಿಸಿ ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.