ರಾಹುಲ್ರನ್ನು ಪ‹ಶ್ನಿಸುವವರಿಗೆ ನಾಚಿಕೆಯಾಗಬೇಕು: ಪಿತ್ರೋಡಾ
Team Udayavani, Apr 15, 2019, 6:04 AM IST
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಯೋತ್ಪಾದನೆಯ ನೋವನ್ನು ಉಂಡವರು. ತಮ್ಮ ಕಣ್ಣೆದುರೇ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್ ಗಾಂಧಿ ಉಗ್ರವಾದಕ್ಕೆ ಬಲಿಯಾಗಿದ್ದನ್ನು ನೋಡಿದವರು. ಅದರ ವೇದನೆ ಏನೆಂದು ಎಲ್ಲರಿಗಿಂತ ಹೆಚ್ಚಾಗಿ ರಾಹುಲ್ಗೆ ಗೊತ್ತಿದೆ. ಹೀಗಿರುವಾಗ, ರಾಹುಲ್ ಅವರ ರಾಷ್ಟ್ರೀಯವಾದ, ದೇಶಭಕ್ತಿಯ ಬಗ್ಗೆ ಪ್ರಶ್ನಿಸುವವರಿಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಅಲ್ಲದೆ, ರಾಹುಲ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷಕ್ಕೆ ಸೇರಿದವರು. ಆದರೆ, ಪ್ರಧಾನಿ ಮೋದಿ ಅವರ ಪಕ್ಷ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೇನು ಕೊಡುಗೆ ಕೊಟ್ಟಿದೆ ಎಂದೂ ಪಿತ್ರೋಡಾ ಪ್ರಶ್ನಿಸಿದ್ದಾರೆ.