ಆಣೆ ಮಾಡಲು ಸಿದ್ಧ , ಪ್ರಿಯಾಂಕ್ ಬರ್ತಾರಾ?
Team Udayavani, Mar 15, 2019, 2:48 AM IST
ಕಲಬುರಗಿ: “ತಾವು ಹಣಕ್ಕೆ ಮಾರಾಟವಾಗಿದ್ದೇವೆಂದು ಆರೋಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ತಂದೆ-ತಾಯಿ ಹಾಗೂ ಮಕ್ಕಳ ಮೇಲೆ ಆಣೆ ಮಾಡಲಿ, ತಾವಂತೂ ಯಾವುದೇ ದೇವರ ಮೇಲೆ ಆಣೆ ಮಾಡಲು ಸಿದ್ಧದ್ದೇವೆ. ಅವರು ಆಣೆ ಮಾಡಲು ಬರುತ್ತಾರೆಯೇ?’ ಎಂದು ಡಾ| ಉಮೇಶ ಜಾಧವ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದಿದ್ದೇವೆ ಎನ್ನುವ ಸಚಿವರು ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬಹುದು. ಅದಕ್ಕೆ ತಾವು ಸಿದ್ಧ ಎಂದರು. ಸ್ಪೀಕರ್ ಒಬ್ಬ ತತ್ವವುಳ್ಳ ವ್ಯಕ್ತಿ. ಹೀಗಾಗಿ ಅವರ ಮೇಲೆ ವಿಶ್ವಾಸವಿದೆ. ಇದನ್ನು ಅವರಿಗೆ ಖುಷಿ ಪಡಿಸಲು ಹೇಳುತ್ತಿಲ್ಲ.
ಹೃದಯದಿಂದ ಈ ಮಾತು ಹೇಳುತ್ತಿದ್ದೇನೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೇ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಆಶೀರ್ವಾದ ತಮ್ಮ ಮೇಲಿದೆ ಎಂದರು.
ಚಿಂಚೋಳಿಗೆ ಬರುವಂತೆ ನೂರು ಸಲ ಕರೆದರೂ ಕ್ಷೇತ್ರದತ್ತ ಮುಖ ಮಾಡದ ಸಮಾಜ ಕಲ್ಯಾಣ ಸಚಿವರಿಗೆ ಈಗ ಎರಡು ದಿನಗಳ ಹಿಂದೆ ಚಿಂಚೋಳಿ ತಾಲೂಕು ನೆನಪಾಯಿತೇ? ತಮ್ಮನ್ನು ಮೂದಲಿಸಲೆಂದೇ ಚಿಂಚೋಳಿ ಕ್ಷೇತ್ರಕ್ಕೆ ಅವರು ಬಂದಿದ್ದರು. ಮುಖ್ಯವಾಗಿ ತಾವು ಕಾಂಗ್ರೆಸ್ ತ್ಯಜಿಸಿದ ನಂತರವಾದರೂ ಚಿಂಚೋಳಿ ಕ್ಷೇತ್ರ ಅವರಿಗೆ ನೆನಪಾಗಿ
ರುವುದು ಸ್ವಾಗತಾರ್ಹ ಎಂದು ಉಮೇಶ ಜಾಧವ್ ವ್ಯಂಗ್ಯವಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!