ನಾಗದೇವತೆಗೆ ಅಭಿಷೇಕ ಸಲ್ಲಿಸಿದ ಕರಡಿ ಕುಟುಂಬ
Team Udayavani, Mar 31, 2019, 6:44 AM IST
ಕೊಪ್ಪಳ: ಟಿಕೆಟ್ ಸಿಗಲೆಂದು ಹರಕೆಯನ್ನಿಟ್ಟುಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರ ಪತ್ನಿ ನಿಂಗಮ್ಮ ಕರಡಿ ಹಾಗೂ ಕುಟುಂಬ ಶನಿವಾರ ಹೊಸಪೇಟೆ ತಾಲೂಕಿನ ಬುಕ್ಕ ಸಾಗರ ಬಳಿ ಇರುವ ಏಳು ಮಕ್ಕಳ
ತಾಯಿ ಎಂದೇ ಪ್ರಸಿದಿಟಛಿ ಪಡೆದಿರುವ ನಾಗ ದೇವತೆಗೆ ವಿಶೇಷ ಅಭಿಷೇಕ ಸಲ್ಲಿಸಿದರು.
ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅವರ ಪತ್ನಿ ನಿಂಗಮ್ಮ ಕರಡಿ ಅವರು ಮಾ.28ರಂದು ಬುಕ್ಕಸಾಗರ ಬಳಿ ಇರುವ ನಾಗದೇವತೆಗೆ ಹರಕೆ ಮಾಡಿ ಕೊಂಡು ಪತಿಗೆ ಟಿಕೆಟ್ ಸಿಗಲಿ, ಅವರು ವಿಜಯಶಾಲಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಸಂಕಲ್ಪ ಮಾಡಿಕೊಂಡಿದ್ದರಂತೆ. ಅವರ ಸಂಕಲ್ಪವೋ, ಅದೃಷ್ಟವೋ ಗೊತ್ತಿಲ್ಲ ಸಂಗಣ್ಣ ಕರಡಿ ಅವರಿಗೆ ಶುಕ್ರವಾರ ಟಿಕೆಟ್ ಘೋಷಣೆಯಾಗಿದೆ. ಆಗ ಬೆಂಗಳೂರಿನಲ್ಲಿದ್ದ ಕರಡಿ ಅವರು ರಾತ್ರಿ ಕೊಪ್ಪಳಕ್ಕೆ ಆಗಮಿಸಿ ಶನಿವಾರ ಬೆಳಗಿನ ಜಾವವೇ ಕುಟುಂಬ ಸಮೇತ ಹೊಸಪೇಟೆ ಸಮೀಪದ ಬುಕ್ಕಸಾಗರಕ್ಕೆ ತೆರಳಿ ನಾಗ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುತ್ತಿರುವುದು ಕುಟುಂಬ ವರ್ಗಕ್ಕಷ್ಟೇ ಗೊತ್ತಿದ್ದರೂ ದೇವಸ್ಥಾನಕ್ಕೆ ತೆರಳಿದ ವೇಳೆ ಮಾಧ್ಯಮದವರಿಗೆ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ