ಕಾಮ್ಧಾರ್ ಗೆಲ್ಲಬೇಕು, ನಾಮ್ಧಾರ್ ಸೋಲಬೇಕು
Team Udayavani, Apr 1, 2019, 6:00 AM IST
ಮಡಿಕೇರಿ: ಈ ಲೋಕಸಭಾ ಚುನಾವಣೆ ಕೇವಲ ಮೋದಿಯವರ ಚುನಾವಣೆಯಲ್ಲ. ಇದು ಪ್ರತಿಯೋರ್ವ ಭಾರತೀಯರ ಗೌರವ, ಸಮ್ಮಾನದ ಚುನಾವಣೆಯಾಗಿದೆ. ಭ್ರಷ್ಟಾಚಾರದ ವಿರುದಟಛಿದ
ಹೋರಾಟಕ್ಕೆ ಇಡೀ ದೇಶದ ಬೆಂಬಲ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಪಾದಿಸಿದ್ದಾರೆ. ಗೋಣಿಕೊಪ್ಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್ ಮುಖಂಡರು ಜಾಮೀನು ಪಡೆದುಕೊಂಡು ಆತಂಕದ ಜೀವನ ನಡೆಸುತ್ತಿದ್ದಾರೆ. ಭ್ರಷ್ಟರಿಗೆ ಮೋದಿ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು. ತೆರಿಗೆ ವಂಚಿಸಿದವರ ಮೇಲೆ ಐಟಿ ದಾಳಿಯಾದರೆ ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಕಣ್ಣೀರು ಹಾಕಬೇಕು ಎಂದು ಪ್ರಶ್ನಿಸಿದರು. ಈ ಚುನಾವಣೆ ಮೂಲಕ ಕಾಮ್ಧಾರ್ಗಳು ಗೆಲ್ಲಬೇಕು, ನಾಮ್ಧಾರ್ ಗಳು ಸೋಲುವಂತಾಗಬೇಕು ಎಂದರು.
ವಿದೇಶ ಸುತ್ತುತ್ತಿದ್ದವರಿಗೆ ಏಕಾಏಕಿ ಅಯೋಧ್ಯೆ, ಗಂಗಾ ನದಿ ನೆನಪಾಗಬೇಕಾದರೆ ಮೋದಿಯವರೇ ಕಾರಣ ಎಂದು ವ್ಯಂಗ್ಯವಾಡಿದರು. ಅಯೋಧ್ಯೆಯ ಶ್ರೀರಾಮ ದೇವಾಲಯಕ್ಕೆ ತೆರಳಿದ ಸಂದರ್ಭ ತಮ್ಮ ಮತ ಬ್ಯಾಂಕ್ ನೆನಪಾಗಿ ದೇವರ ಮುಂದೆತಲೆಬಾ ಗಲು ತಿಣಕಾಡುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್