ಮೀನುಗಾರರ ಕುಟುಂಬಕ್ಕೆ ನಿರ್ಮಲಾ ಸಾಂತ್ವನ
Team Udayavani, Mar 27, 2019, 6:30 AM IST
ಮಲ್ಪೆ: ಸುವರ್ಣ ತ್ರಿಭುಜ ಬೋಟ್ನಲ್ಲಿದ್ದ ಮಲ್ಪೆಯ ಮೀನುಗಾರರಾದ ಚಂದ್ರಶೇಖರ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಅವರ ಬಡಾನಿಡಿಯೂರು ಪಾವಂಜಿಗುಡ್ಡೆ ಮನೆಗೆ ಮಂಗಳವಾರ ಮಧ್ಯಾಹ್ನ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೊದಲು ಚಂದ್ರಶೇಖರ ಕೋಟ್ಯಾನ್ ಮನೆಗೆ ತೆರಳಿದ ಸಚಿವೆ ಪತ್ನಿ ಶ್ಯಾಮಲಾ ಮತ್ತು ತಾಯಿ ಗೌರಿ ಕೋಟ್ಯಾನ್ ಅವರನ್ನು ಸಂತೈಸಲು ಪ್ರಯತ್ನಿಸಿದರು.
ಇನ್ನೊಮ್ಮೆ ಹುಡುಕಲು ಕ್ರಮ ಕೈಗೊಳ್ಳಲಾಗುವುದು, ನೀವು ಯಾವ ರೀತಿಯಲ್ಲಿ ಕಾರ್ಯಾಚರಿಸಲು ಬಯಸುತ್ತೀರೋ ಆ ರೀತಿಯಲ್ಲೂ ಹುಡುಕಲು ಬದ್ಧರಾಗಿದ್ದೇವೆ ಎಂದರು.
ಬಳಿಕ ದಾಮೋದರ ಸಾಲ್ಯಾನ್ ಅವರ ಮನೆಗೆ ತೆರಳಿದರು. ತಂದೆ ಸುವರ್ಣ ತಿಂಗಳಾಯ, ತಾಯಿ ಸೀತಾ ಸಾಲ್ಯಾನ್ ಅವರು “ಮಗ ಹಿಂದಿರುಗಿ ಬರಬೇಕು. ಅವನನ್ನು ಮತ್ತೂಮ್ಮೆ ನೋಡುವ ಭಾಗ್ಯ ಕರುಣಿಸಿ’ ಎಂದು ಕೈ ಮುಗಿದು ಕಣ್ಣೀರು ಸುರಿಸಿದರು.
ಮನೆಮಂದಿ ಆಕ್ರೋಶ?
ಇನ್ನೊಮ್ಮೆ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದ ಸಂಸದೆ ಶೋಭಾ ಅವರ ಮಾತಿಗೆ ಕೋಪಗೊಂಡ ದಾಮೋದರ ಸಾಲ್ಯಾನ್ ಅವರ ತಮ್ಮ ಗಂಗಾಧರ ಸಾಲ್ಯಾನ್ ಆಕ್ರೋಶ ವ್ಯಕ್ತ ಪಡಿಸಿದಾಗ ಶೋಭಾ ಸುಮ್ಮನಾದರು. ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಸತೀಶ್ ಕುಂದರ್, ಉಮೇಶ್ ಪೂಜಾರಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ