ತಿರುನೆಲ್ಲಿ ದೇಗುಲ ಭೇಟಿ ಮೂಲಕ ಬಿಜೆಪಿಗೆ ಚೆಕ್‌!


Team Udayavani, Apr 21, 2019, 6:00 AM IST

22

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ವಯನಾಡ್‌ನ‌ ತಿರುನೆಲ್ಲಿ ಮಹಾವಿಷ್ಣು ದೇಗುಲಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.

ಶಬರಿಮಲೆ ವಿಷಯದ ಹಿನ್ನೆಲೆಯಲ್ಲಿ ಮತಗಳಿಕೆಯ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ತಮ್ಮ ದೇಗುಲ ಭೇಟಿ ಮೂಲಕ ರಾಹುಲ್‌ ಚೆಕ್‌ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಿಂದೂ ಮತಗಳಿಕೆಗೆ ಕಣ್ಣಿಟ್ಟಿದ್ದಾರೆ. ರಾಹುಲ್‌ ದೇಗುಲ ಭೇಟಿ ಹಿಂದಿನ ಮರ್ಮವೇನು ಎಂಬುದನ್ನೂ ಈಗ ಚುನಾವಣ ಪಂಡಿತರು ಲೆಕ್ಕಹಾಕುತ್ತಿದ್ದಾರೆ.

ತಿರುನೆಲ್ಲಿ ಮಹಾವಿಷ್ಣು ದೇಗುಲ ಸುಮಾರು 5 ಸಾವಿರ ವರ್ಷ ಇತಿಹಾಸ ಹೊಂದಿದ್ದು, ಅಪಾರ ಸಂಖ್ಯೆಯ ಹಿಂದೂ ಮತ್ತಿತರ ಭಕ್ತರು ನಡೆದುಕೊಳ್ಳುತ್ತಾರೆ. ಇದನ್ನು ಅರಿತೇ ರಾಹುಲ್‌ ಅವರಿಗೆ ಭೇಟಿ ನೀಡುವಂತೆ ಕೇರಳ ಕಾಂಗ್ರೆಸ್‌ನ ಮುಖಂಡರು ಹೇಳಿದ್ದರು ಎನ್ನಲಾಗಿದೆ.

ಇನ್ನೊಂದು ದೃಷ್ಟಿಯಲ್ಲಿ 1991ರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಚಿತಾಭಸ್ಮವನ್ನು ಇಲ್ಲಿನ ಪಾಪನಾಶಿನಿ ನದಿಯಲ್ಲಿ ಬಿಡಲಾಗಿತ್ತು. ಹೀಗಾಗಿ ಭಾವನಾತ್ಮಕ ಸಂಬಂಧವೂ ಭೇಟಿ ಹಿಂದಿದೆ ಎನ್ನಲಾಗುತ್ತಿದೆ.

ಬಲಿತರ್ಪಣ
ತಮ್ಮ ತಂದೆಯವರಿಗಾಗಿ ದೇಗುಲದ ಪ್ರಸಿದ್ಧ ಸೇವೆಯಲ್ಲೊಂದಾದ ಬಲಿತರ್ಪಣವನ್ನು ರಾಹುಲ್‌ ನೀಡಿದ್ದಾರೆ. ಸಾಂಪ್ರದಾಯಿಕ ವೇಷ್ಟಿ, ಶಲ್ಯ ಹೊದ್ದು ಸೇವೆಗಳನ್ನೂ ಮಾಡಿಸಿ ಪ್ರದಕ್ಷಿಣೆಯನ್ನೂ ಪೂರೈಸಿದರು. ರಾಹುಲ್‌ ಅವರ ದೇಗುಲ ಭೇಟಿ ವೈಯಕ್ತಿಕವಾಗಿರಬಹುದು. ಆದರೆ ಇದರ ಹಿಂದೆ ಗುಪ್ತ ಲೆಕ್ಕಾಚಾರವಿದೆ. ಬಿಜೆಪಿ ರಾಹುಲ್‌ ಅವರ ನಂಬಿಕೆಗಳ ಬಗ್ಗೆ ಯಾವತ್ತೂ ಪ್ರಶ್ನೆಗಳನ್ನೆತ್ತಿದೆ. ಈ ಸಂಬಂಧ ಉತ್ತರಿಸಲು ವಯನಾಡ್‌ನ‌ ಸಂದರ್ಭವನ್ನು ರಾಹುಲ್‌ ಬಳಸಿದರು ಎನ್ನಲಾಗುತ್ತಿದೆ.. ಅಲ್ಲದೆ ಬಿಜೆಪಿಯ ಪ್ರಖರ ಹಿಂದುತ್ವ ಎದುರಿಸಲು ರಾಹುಲ್‌ ಮೃದು ಹಿಂದುತ್ವದ ದಾಳವನ್ನು ಎಸೆಯುತ್ತಿದ್ದಾರೆ ಎನ್ನಲಾಗಿದೆ.

ರಾಹುಲ್‌ ವಯನಾಡ್‌ನ‌ಲ್ಲಿ ಚುನಾವಣೆಗೆ ನಿಂತ ಕೂಡಲೇ ಬಿಜೆಪಿ ಹಿಂದೂಗಳ ಮತಗಳು ಕಡಿಮೆ ಇರುವ ವಯನಾಡ್‌ ಅನ್ನೇ ರಾಹುಲ್‌ ಆಯ್ದುಕೊಂಡರು ಎಂದು ಲೇವಡಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ವಯನಾಡ್‌ನ‌ಲ್ಲಿ ಶೇ.41ರಷ್ಟಿರುವ ಹಿಂದೂಗಳ ಓಟು ಗಳಲ್ಲಿ ಸ್ವಲ್ಪವನ್ನಾದರೂ ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದು ರಾಹುಲ್‌ ಯತ್ನ. ಅಷ್ಟೇ ಅಲ್ಲದೆ, ಹಿಂದೂ ಸಂಪ್ರದಾಯ, ಪರಂಪರೆಗಳನ್ನು ಗೌರವಿಸುವೆ ಎಂದು ಕೇರಳದ ಹಿಂದೂಗಳಿಗೆ ತಿಳಿಸುವ ಪ್ರಯತ್ನವೂ ಹೌದು.

ಶಬರಿಮಲೆ ವಿಷಯದಲ್ಲಿ ಹಿಂದೂಗಳಿಗೆ ತಮ್ಮ ಪಕ್ಷವೇ ಏಕೈಕ ದಿಕ್ಕು ಎಂದು ಪ್ರತಿಪಾದಿಸಲು ಬಿಜೆಪಿ ಹೊರಟಿತ್ತು. ಈ ಮತ ಧ್ರುವೀಕರಣ ತಡೆಯುವ ಪ್ರಯತ್ನ ರಾಹುಲ್‌ ಅವರದ್ದು ಎಂಬ ವ್ಯಾಖ್ಯಾನ ಚಾಲ್ತಿಯಲ್ಲಿದೆ.

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.