ಐಟಿ ದಾಳಿಗೆ ರಾಜಕೀಯ ಉತ್ತರ ಕೊಡ್ತೇವೆ: ರೇವಣ್ಣ
Team Udayavani, Mar 30, 2019, 8:21 AM IST
ಕಡೂರು: ಜೆಡಿಎಸ್ ಪಕ್ಷದ ಅಭ್ಯರ್ಥಿಗಳು, ನಾಯಕರು ಮತ್ತವರ ಸಂಬಂ ಧಿಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಈ ಐಟಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು.ಇದರ ಹಿಂದೆ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇರ ಹಸ್ತಕ್ಷೇಪವಿದೆ. ಇದಕ್ಕೆ ರಾಜಕೀಯ ವಾಗಿಯೇ ಉತ್ತರ ನೀಡಲಾಗುವುದು. ಹಾಸನ, ಶಿವಮೊಗ್ಗ, ಮಂಡ್ಯ ಅಭ್ಯರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಈ ದಾಳಿ ನಡೆಸಲು ಪ್ರೇರಣೆ ನೀಡಿದ ಡಿಯೂರಪ್ಪನವರು, 24 ಗಂಟೆಯೊಳಗೆ ಕ್ಲೀನ್ಚಿಟ್ ಸರ್ಟಿಫಿಕೇಟ್ ಕೊಡಿಸುತ್ತಾರಾ ಎಂದು ಪ್ರಶ್ನಿಸಿದರು.