ಮೋದಿಯತ್ತ ಬೆರಳು ತೋರಿಸಿದ ಕೈ ಕಟ್ ; ಬಿಜೆಪಿ ರಾಜ್ಯಾಧ್ಯಕ್ಷ
ವಿವಾದಾತ್ಮಕ ಹೇಳಿಕೆ ನೀಡಿದ ನಾಯಕನಿಗೆ ಚುನಾವಣಾ ಆಯೋಗ ನೊಟೀಸ್
Team Udayavani, Apr 25, 2019, 4:02 PM IST
ಶಿಮ್ಲಾ: ಮೋದಿಯತ್ತ ಬೆರಳು ತೋರಿದವರ ಕೈ ಕತ್ತರಿಸುತ್ತೇವೆಎ ಂದು ಹಿಮಾಚಲಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಭರದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮಂಡಿಯ ಚುನಾವಣಾಧಿಕಾರಿ ಸತ್ಪಾಲ್ ಸಿಂಗ್ ಅವರಿಗೆ ನೊಟೀಸ್ ಜಾರಿ ಮಾಡಿ ಉತ್ತರಿಸುವಂತೆ ಹೇಳಿದ್ದಾರೆ.