ರಾಯಚೂರಲ್ಲಿ ಮಹಿಳೆಯರೇ ನಿರ್ಣಾಯಕರು!


Team Udayavani, Mar 23, 2019, 1:46 AM IST

4.jpg

ರಾಯಚೂರು: ನಿರೀಕ್ಷಿತ ಮಟ್ಟದ ಸ್ಥಾನಮಾನ ಪಡೆಯದ ಮಹಿಳೆಯರು ಮತದಾರರ ಪಟ್ಟಿಯಲ್ಲಿ ಮುಂದಿರುವುದು ರಾಯಚೂರು ಲೋಕಸಭೆ ಕ್ಷೇತ್ರದ ವಿಶೇಷತೆ. ಒಟ್ಟಾರೆ ಮತದಾರರಲ್ಲಿ ಪುರುಷರಿಗೆ ಹೋಲಿಸಿದರೆ 13,705 ಮಹಿಳಾ ಮತದಾರರು ಹೆಚ್ಚಿರುವುದು ಗಮನಾರ್ಹ.

ರಾಯಚೂರು ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಮೂರು ಸೇರಿ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರ ಇದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 16,61,606 ಮತದಾರರಿದ್ದರೆ, ಈ ಬಾರಿ 2.21 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಂದರೆ 9,39,752 ಪುರುಷ, 9,53,457 ಮಹಿಳಾ ಮತದಾರರು ಸೇರಿ ಒಟ್ಟು 18,93,576 ಮತದಾರರಿದ್ದಾರೆ. ಹೀಗಾಗಿ ಯಾವುದೇ ಪಕ್ಷಗಳು ಮಹಿಳಾ ಮತದಾರರನ್ನು ಒಲಿಸಿಕೊಳ್ಳದೆ ಗೆಲ್ಲುವುದು ಸುಲಭದ ಮಾತಲ್ಲ. ಹೊಸ ಮತದಾರರ ಪೈಕಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲೇ ಅತಿ ಹೆಚ್ಚು ಅಂದರೆ 53 ಸಾವಿರ ಹೊಸ ಮತದಾರರು ಸೇರಿದ್ದಾರೆ.

ಸುರಪುರ ದೊಡ್ಡ ಕ್ಷೇತ್ರ: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರ ಜನಸಂಖ್ಯೆಯಲ್ಲಿದೊಡ್ಡದಾ ಗಿದ್ದು 1,37,504 ಪುರುಷರು, 1,36,080 ಮಹಿಳೆಯರು, 20 ಇತರೆ ಮತದಾರರು ಸೇರಿ ಒಟ್ಟು 2.73,604 ಮತದಾರರನ್ನು ಹೊಂದಿದ್ದು, ದೊಡ್ಡ ಕ್ಷೇತ್ರ ಎನಿಸಿಕೊಂಡಿದೆ. ಲಿಂಗಸುಗೂರು ಕ್ಷೇತ್ರದಲ್ಲಿ 1,20,396 ಪುರುಷ, 1,21,599 ಮಹಿಳೆ, 9 ಇತರೆ ಮತದಾರರು ಸೇರಿ 2,42,004 ಮತದಾರರಿದ್ದಾರೆ.

ಶಹಾಪುರ ಕ್ಷೇತ್ರದಲ್ಲಿ 1,13,422 ಪುರುಷ, 1,12,779 ಮಹಿಳೆ ಹಾಗೂ 25 ಇತರೆ ಸೇರಿ 2,26,226 ಮತದಾರರಿದ್ದಾರೆ. ಇನ್ನು ಯಾದಗಿರಿ ಕ್ಷೇತ್ರದಲ್ಲಿ 1,16,705 ಪುರುಷ, 1,18,018 ಮಹಿಳೆ ಹಾಗೂ 24 ಇತರೆ ಮತದಾರರು ಸೇರಿ 2,34,747 ಮತದಾರರಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 1,13,403 ಪುರುಷರು, 1,17,822 ಮಹಿಳೆಯರು ಹಾಗೂ 70 ಇತರೆ ಮತದಾರರು ಸೇರಿ
ಒಟ್ಟು 2,31,295 ಮತದಾರರಿದ್ದಾರೆ.

ನಗರ ಕ್ಷೇತ್ರದಲ್ಲಿ 1,08,747 ಪುರುಷರು,1,08,419 ಮಹಿಳೆಯರು ಹಾಗೂ 121 ಇತರೆ ಮತದಾರರು ಸೇರಿ 2,17,287 ಮತದಾರರಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿ 1,17,951 ಪುರುಷರು, 1,23,592 ಮಹಿಳೆಯರು ಹಾಗೂ 74 ಇತರೆ ಸೇರಿ ಒಟ್ಟು 2,41,617 ಮತದಾರರಿದ್ದಾರೆ. ದೇವದುರ್ಗದಲ್ಲಿ 1,11,624 ಪುರುಷರು, 1,15,148 ಮಹಿಳೆಯರು,24 ಇತರೆ ಮತದಾರರು ಸೇರಿ 2,26,796 ಮತದಾರರಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಹಿಳೆಯರ ಶಿಕ್ಷಣ ಪ್ರಮಾಣ ಕಡಿಮೆ ಇದೆ. ಬಹುತೇಕರು ಅಶಿಕ್ಷಿತರೇ ಹೆಚ್ಚು. ಕಳೆದ ಚುನಾವಣೆಯಲ್ಲಿ ಸುಮಾರು 4 ಲಕ್ಷಕ್ಕೂ ಅ ಧಿಕ ಮತಗಳು ಚಲಾವಣೆಗೊಂಡಿರಲಿಲ್ಲ. ಇನ್ನು ಈ ಭಾಗದಲ್ಲಿ ಬೇಸಿಗೆ ಬಂದರೆ ಸಾಕು ಬರ ಆವರಿಸಿ ಕೆಲಸವಿಲ್ಲದೇ ಜನ ಗುಳೆ ಹೋಗುವುದು ಸಾಮಾನ್ಯ. ದೇವದುರ್ಗ, ಲಿಂಗಸುಗೂರು ತಾಲೂಕುಗಳಲ್ಲಿನ  ತಾಂಡಾಗಳು ಈ ಹೊತ್ತಿಗೆ ಬಣಗುಟ್ಟುತ್ತಿರುತ್ತವೆ. ಇರುವಮಹಿಳೆಯರು ಕೂಡ ಮತದಾನ ದಿನ ಕೂಲಿಗೆ ಹೋಗಿರುವವರೇ ಜಾಸ್ತಿ. ಹೀಗಾಗಿ ಲೆಕ್ಕಕ್ಕೆ ಇದ್ದರೂ ಮಹಿಳೆಯರ ಹಕ್ಕು ಮತಗಳಾಗಿ ಪರಿವರ್ತನೆಗೊಳ್ಳುವುದು ಬಹಳ ಕಷ್ಟಕರ. ಹಕ್ಕು ಚಲಾಯಿಸಿದ ಮತದಾರರು ಇನ್ನು ಕಳೆದ ಚುನಾವಣೆಯ ಅವಲೋಕನ ಮಾಡುವುದಾದರೆಒಟ್ಟು 16,61,606 ಮತದಾರರಲ್ಲಿ 9,68,513 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು. ಅದರಲ್ಲಿ 13,334 ಮತಗಳು ತಿರಸ್ಕೃತಗೊಂಡಿದ್ದವು. 5,01,122 ಪುರುಷರು, 4,67,391 ಮಹಿಳೆಯರು ಹಕ್ಕು ಚಲಾಯಿಸಿದ್ದರು. ಅಂದರೆ 6,93,093 ಮತದಾರರು ತಮ್ಮ ಹಕ್ಕು ಚಲಾಯಿಸಿರಲಿಲ್ಲ. ವಿಜೇತ ಅಭ್ಯರ್ಥಿ ಬಿ.ವಿ ನಾಯಕ 4,43,659, ಪರಾಜಿತ ಅಭ್ಯರ್ಥಿ ಕೆ.ಶಿವನಗೌಡ ನಾಯಕ 4,42,160 ಮತಗಳನ್ನು ಪಡೆದಿದ್ದರು.

ಸಿದ್ದಯ್ಯ ಸ್ವಾಮಿ ಕುಕುನೂರು 

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.