ಅಜಿತ್ ದೋವಲ್ ಪುತ್ರನಿಗೆ “ಝೆಡ್’ ಕೆಟಗರಿ ಭದ್ರತೆ
Team Udayavani, May 1, 2019, 6:05 AM IST
ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ಶೌರ್ಯ ದೋವಲ್ ಅವರಿಗೆ ಉನ್ನತ ಮಟ್ಟದ “ಝೆಡ್’ ಕೆಟಗರಿಯ ಭದ್ರತೆ ಯನ್ನು ಕಲ್ಪಿಸಲಾಗಿದೆ. ಅವರ ಜೀವಕ್ಕೆ ಬೆದರಿಕೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಜಿತ್ ದೋವಲ್ ಅವರ ಶತ್ರುಗಳಿಂದಾಗಿ ಶೌರ್ಯ ಅವರ ಜೀವಕ್ಕೆ ಅಪಾಯವಿರುವುದಾಗಿ ಕೇಂದ್ರ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖ ವಾಗಿದ್ದು, ಈ ಹಿನ್ನೆಲೆಯಲ್ಲಿ ಅವ ರಿಗೆ ಕೇಂದ್ರ ಅರೆಸೇನಾ ಪಡೆಯಿಂದ ಝೆಡ್ ಕೆಟ ಗರಿಯ ಭದ್ರತೆ ಒದಗಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಅದರಂತೆ, ಸುಮಾರು 15-16 ಕಮಾಂಡೋಗಳು ಶೌರ್ಯ ದೋವಲ್ಗೆ ಭದ್ರತೆ ಒದಗಿಸಲಿ ದ್ದಾರೆ. ಇವರ ಜೊತೆಗೆ, ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಕಣಕ್ಕಿಳಿದಿರುವ 10 ಮಂದಿ ಬಿಜೆಪಿ ಅಭ್ಯರ್ಥಿಗಳಿಗೂ ಅಲ್ಪಾವಧಿಗೆ ಕೇಂದ್ರ ಸರಕಾರ ಭದ್ರತೆ ಒದಗಿಸಿದೆ.