ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗ ಆರ್ಜೆಡಿ ಘೋಷಣೆ ಬೋಗಸ್: ನಿತೀಶ್
ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್ಗೆ ನೀಡಲಾಗಿರುವ "ತಾರಾ ಪ್ರಚಾರಕ' ಎಂಬ ಪಟ್ಟವನ್ನು ಆಯೋಗ ವಾಪಸ್ ಪಡೆದಿದೆ.
Team Udayavani, Oct 31, 2020, 5:15 PM IST
ಪಾಟ್ನಾ: ಅಧಿಕಾರಕ್ಕೆ ಬಂದರೆ ಹತ್ತು ಲಕ್ಷ ಉದ್ಯೋಗ ನೀಡುವುದಾಗಿ ವಾಗ್ಧಾನ ಮಾಡಿರುವ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಘೋಷಣೆ ಬೋಗಸ್ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಶುಕ್ರವಾರ ಲೇವಡಿ ಮಾಡಿದ್ದಾರೆ.
ಮತದಾರರನ್ನು ಗೊಂದಲಕ್ಕೀಡು ಮಾಡುವ ನಿಟ್ಟಿನಲ್ಲಿ ಇಂಥ ಮಾತುಗಳನ್ನಾಡಲಾಗುತ್ತದೆ ಎಂದು ಪರ್ಬತ್ತಾ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಟೀಕಿಸಿದರು.
ಇದೇ ವೇಳೆ ಸಿವಾನ್, ಬೆಗುಸರೈನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಚಾರ ನಡೆಸಿದರು. ತಾರಾ ಪ್ರಚಾರಕ ಪಟ್ಟ ಹಿಂದಕ್ಕೆ: “ನೈತಿಕ ಮತ್ತು ಗೌರವ ಪೂರ್ವಕವಾಗಿ ವರ್ತಿಸಿಲ್ಲ’ ಎಂಬ ಕಾರಣಕ್ಕೆ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್ಗೆ ನೀಡಲಾಗಿರುವ “ತಾರಾ ಪ್ರಚಾರಕ’ ಎಂಬ ಪಟ್ಟವನ್ನು ಆಯೋಗ ವಾಪಸ್ ಪಡೆದಿದೆ. ಅವರು ಪದೇ ಪದೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳಿದೆ.
ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ವಿರುದ್ಧ “ಚುನ್ನು-ಮುನ್ನು’ ಎಂದು ಲೇವಡಿ ಮಾಡಿದ್ದ ಬಿಜೆಪಿ ನಾಯಕ ಕೈಲಾಸ್ ವಿಜಯ ವರ್ಗೀಯ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಅಭಿಪ್ರಾಯ ಪಟ್ಟಿದೆ. ಈ ಬಗ್ಗೆ ಅ.26ರಂದು ಆಯೋಗ ನೋಟಿಸ್ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಚೋಟಾ ಮೋದಿ”:ಡಿಸಿಎಂ ಹುದ್ದೆಗೆ ರಾಜೀನಾಮೆ, ರಾಜ್ಯಸಭೆಗೆ ಬಿಜೆಪಿಯಿಂದ ಸುಶೀಲ್ ಮೋದಿ ಆಯ್ಕೆ
ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್
ತೇಜಸ್ವಿ ಒಳ್ಳೆಯ ಹುಡುಗ, ಆದರೆ RJD ಅಧಿಕಾರದ ಗದ್ದುಗೆ ಏರಿದ್ದರೆ…ಉಮಾಭಾರತಿ ಹೇಳಿದ್ದೇನು?
ನಿತೀಶ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ-ಜೆಡಿಯು ನಡುವೆ ಸಂಪುಟ ಕಸರತ್ತು ಆರಂಭ
ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ, ಇದು ನಮ್ಮ ಬದ್ಧತೆ: ಭಾರತೀಯ ಜನತಾ ಪಕ್ಷ