IRCTC ಹಗರಣ: ಜ.28ರ ವರೆಗೆ ಲಾಲು, ಇತರರ ಜಾಮೀನು ವಿಸ್ತರಣೆ
Team Udayavani, Jan 19, 2019, 6:21 AM IST
ಹೊಸದಿಲ್ಲಿ : ಐಆರ್ಸಿಟಿಸಿ ಯ ಎರಡು ಹಗರಣಗಳಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ ದಿಲ್ಲಿ ನ್ಯಾಯಾಲಯ ಜನವರಿ 28ರ ವರೆಗೆ ಮಧ್ಯಾವಧಿ ಜಾಮೀನು ವಿಸ್ತರಿಸಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಈ ಕೇಸುಗಳನ್ನು ದಾಖಲಿಸಿತ್ತು.
ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಇದೇ ವೇಳೆ ಲಾಲು ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರ ಮಧ್ಯಾವಧಿ ಜಾಮೀನನ್ನು ಕೂಡ ಜನವರಿ 28ರ ವರೆಗೆ ವಿಸ್ತರಿಸಿದರು.
ಅಂತೆಯೇ ಜನವರಿ 28ರಂದು ನ್ಯಾಯಾಲಯವು ಲಾಲು ಪ್ರಸಾದ್ ಮತ್ತು ಇತರರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಪ್ರಕಟಿಸಲಿದೆ.
ಖಾಸಗಿ ಸಂಸ್ಥೆಯೊಂದಕ್ಕೆ ಎರಡು ಐಆರ್ಸಿಟಿಸಿ ಹೊಟೇಲುಗಳ ನಿರ್ವಹಣಾ ಗುತ್ತಿಗೆಯನ್ನು ಅಕ್ರಮವಾಗಿ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿ ಈ ಕೇಸುಗಳನ್ನು ಲಾಲು ಮತ್ತು ಇತರರ ವಿರುದ್ಧ ಸಿಬಿಐ, ಇಡಿ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ