ಅಪ್ಪಯ್ಯನ ನೆನಪು 2020: ನನ್ನ ಸೂಪರ್ ಹೀರೊ ಆಗಿದ್ದವರು ನೀವೆ ತಾನೆ!

ಅಂದು ನಾನು ಮತ್ತು ನೀವು ಇಬ್ಬರೆ ಕುಂದೇಶ್ವರದ ಹಬ್ಬದಲ್ಲಿ ಅಂದ ಚೆಂದದ ಬಣ್ಣವುಳ್ಳ ಒಂದು ವಿಮಾನ ಖರೀದಿ

Team Udayavani, Jun 21, 2020, 9:29 AM IST

ಅಪ್ಪಯ್ಯನ ನೆನಪು 2020: ನನ್ನ ಸೂಪರ್ ಹೀರೊ ಆಗಿದ್ದವರು ನೀವೆ ತಾನೆ!

ಯಿಂದ,
ಮುದ್ದು ಮಗಳು

ರಿಗೆ,
ಪ್ರಿತಿಯ ಅಪ್ಪಯ್ಯನಿಗೆ

ವಿಷಯ: ಆಟದ ಸಾಮಾನು ಹಾಳಾದ ಕುರಿತು

ಅಂದು ನಾನು ಮತ್ತು ನೀವು ಇಬ್ಬರೆ ಕುಂದೇಶ್ವರದ ಹಬ್ಬದಲ್ಲಿ ಅಂದ ಚೆಂದದ ಬಣ್ಣವುಳ್ಳ ಒಂದು ವಿಮಾನ ಖರೀದಿಸಿದ್ದೇವು ನೆನಪಿದೆಯಾ. ಆ ವಿಮಾನದಲ್ಲಿ ಕೂತುಕೊಳ್ಳಲು ಸಾಧ್ಯವಾಗದಿದ್ದರು ಹಗಲು ರಾತ್ರಿ ಅದರೊಂದಿಗಿನ ನನ್ನ ಆಟ ಸಾಗುತ್ತಲೇ ಇತ್ತು. ಅದರ ತಿರುಗುವ ಚಕ್ರ ಕೇಳಲೆಂದು ಕಿವಿ ಹತ್ತಿರವಿಟ್ಟು ಖುಷಿ ಪಟ್ಟೆ.

ಆದರೆ ಆ ಖುಷಿ ಬಹುಕಾಲವಿರದೇ ಅದೇ ಚಕ್ರಕ್ಕೆ ಕಿವಿ ಮತ್ತು ನೆತ್ತಿಯ ಕೂದಲು ಸಿಕ್ಕಿಕೊಂಡು ಅದನ್ನು ಸರಿಪಡಿಸಲು ನೀ ಪಟ್ಟ ಪರದಾಟ ಇಂದಿಗೂ ನೆನಪಾಗುತ್ತದೆ.‌ ಆ ಘಟನೆ ಬಳಿಕ ವಿಮಾನ ಆಟಿಕೆ ಎಂದರೆ ಈಗಲೂ ಭಯವಾಗುತ್ತದೆ. ಆ ದಿನ ನೀವು‌ ನಾನು ಒಟ್ಟಾಗಿ ಸೇರಿ ಖರೀದಿಸಿದ ಆ ಪುಟ್ಟ ವಿಮಾನಕ್ಕೀಗ 22 ರ ಸಂವತ್ಸರ. ಅಂಬಾರಿಯ ಮೇಲೆ ಕೂತು ಮೆರವಣಿಗೆ ಹೊರಡುವ ರಾಣಿಯಂತೆ ಹೆಗಲ ಮೇಲೆ ನನ್ನ ಹೊತ್ತು ತಿರುಗುತ್ತಿದ್ದ
ಅಪ್ಪಯ್ಯನಿಗಿಂದು ತುಸು ವಯಸ್ಸಾದಂತಿದೆ. ಅಂದು ನಾ ಮಾಡಿದ ಚೇಷ್ಟೆಗಳಿಗೆಲ್ಲ ಅಮ್ಮ ಬೈಯಲು ಬಂದಾಗ ನನ್ನ ಸೂಪರ್ ಹೀರೊ ಆಗಿದ್ದವರು ನೀವೆ ತಾನೆ.

ಇಂದು ಅದೇ ತರಹದ ಆಟದ ಸಾಮಾನು ಹಿಡಿದು ನನ್ನ ಪುಟ್ಟ ಮಗಳು ತನ್ನ ಅಪ್ಪನೊಂದಿಗೆ ಆಟವಾಡುತ್ತಿದ್ದರೆ ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳದ್ದೇ ನೆನಪಾಗುತ್ತದೆ. ಹೀಗೆ ಮೊನ್ನೆ ಆಟವಾಡುತ್ತಿದ್ದಾಗ ಮಗಳ ಚೇಷ್ಟೆಗೆ ನೀ ಉಡುಗೊರೆಯಾಗಿತ್ತ ಪುಟ್ಟ ವಿಮಾನದ ರೆಕ್ಕೆಯೊಂದು ತುಂಡಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಆ ಕೂಡಲೇ ಸಿಟ್ಟುಗೊಂಡು ಮಗಳಿಗೆರಡು ಏಟು ನೀಡಬೇಕೆಂದಾಗ ‘ನಿರ್ಜಿವ ವಸ್ತುವಿಗಾಗಿ ಜೀವ ಇರುವ ಮನಸ್ಸುಗಳಿಗೆ ತೊಂದರೆ ನೀಡಬಾರದು’ ಎಂಬ ನಿಮ್ಮ ಮಾತು ನೆನಪಾಗಿ ಸುಮ್ಮನಾದೇ. ಆದರೂ ಅದು ನಿರ್ಜೀವವಲ್ಲ ನನ್ನ ಪ್ರೀತಿಯ ಅಪ್ಪಯ್ಯ ನನಗಾಗಿ ನೀಡಿದ ಬೆಲೆಕಟ್ಟಲಾಗದ ಉಡುಗೊರೆ. ಹಾಳಾದರು ಎಸೆಯಲು ಮನಸ್ಸು ಬಾರದ ಬೆಸುಗೆ ಅದರೊಂದಿಗಿದೆ ಅದಕ್ಕಾಗಿ ನಾನೇ ಹೊಸ ರೆಕ್ಕೆ ಜೋಡಿಸಿ ಅದನ್ನು ಎತ್ತಿಟ್ಟಿದ್ದೇನೆ. ಜತೆಗೆ ನಿಮ್ಮ ಪ್ರೀತಿಯನ್ನು ಸಹ.

ಧನ್ಯವಾದಗಳೊಂದಿಗೆ
ಇತಿ ತಮ್ಮ ಪ್ರೀತಿಯ ಮಗಳು
ಅನು -ಅನುರಾಧಾ ಪ್ರಭಾಕರ, ಕುಂದಾಪುರ.

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.