ಅಪ್ಪನ ನೆನಪು 2020: ತಂದೆ ಒಂದು ಆಲದ ಮರವಿದ್ದಂತೆ

ಭಯದಿಂದ ಬಾಗಿಲು ತಟ್ಟಿದೆವು ಜೋರು ಸ್ವರದಲ್ಲಿ ತಂದೆ ಗುಡುಗಿದರು ಎಷ್ಟು ಟೈಮ್ ಈಗ?

Team Udayavani, Jun 21, 2020, 8:26 AM IST

ಅಪ್ಪನ ನೆನಪು 2020: ತಂದೆ ಒಂದು ಆಲದ ಮರವಿದ್ದಂತೆ

ತಂದೆ ಒಂದು ಆಲದ ಮರವಿದ್ದಂತೆ, ತಂದೆಯೊಬ್ಬ ಮನೆಯೊಳಗಿದ್ದರೆ ಮನೆಯವರೆಲ್ಲರಿಗೂ ಒಂದು ಸುರಕ್ಷತೆಯ ಭಾವನೆ ಬರುತ್ತದೆ. ನನ್ನ ತಂದೆ ತುಂಬಾ ಕಟ್ಟುನಿಟ್ಟಿನ ಮನುಷ್ಯ, ಕೋಪ ಜಾಸ್ತಿ ಮಕ್ಕಳು ಓದಿನಲ್ಲಿ ಮುಂದಿರಬೇಕೆಂಬುದು ಅವರ ನಿಲುವು. ಯಾವಾಗಲೂ ಕೈಯಲ್ಲಿ ಪುಸ್ತಕವಿರಬೇಕು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸಗಳೂ ನಡೆಯಬೇಕು.

ಬೆಳಗ್ಗೆ ಆರು ಗಂಟೆಯೊಳಗೆ ಎದ್ದಿರಬೇಕು ಸ್ವಚ್ಚವಾಗಿ ಹಲ್ಲುಜ್ಜಿ ಸ್ನಾನ ಮಾಡಿ ನಂತರ ತಿಂಡಿ, ಮಧ್ಯಾಹ್ನ 1.30 ಕ್ಕೆ ರಾತ್ರಿ 9 ಗಂಟೆಗೆ ಊಟ, ಇದು ದಿನನಿತ್ಯದ ಕ್ರಮ ಇದರಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ನಮ್ಮ ಅಣ್ಣ ನನ್ನ ಅಜ್ಜನ ಮನೆಯಲ್ಲಿ ಓದುತ್ತಿದ್ದನು ಇಲ್ಲಿ ನಾನು ಅಕ್ಕ ತಮ್ಮ ಮೂರು ಜನ, ನಾವು ಮೂವರು ದೀಪ ಹಚ್ಚುವ ವೇಳೆಗೆ ಮನೆಯಲ್ಲಿ ಇರಬೇಕು ನಂತರ ಓದೋದಕ್ಕೆ ಶುರು ಮಾಡಬೇಕು ಟಿವಿ ಬಂದ ಕಾಲ ಅದು, ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಪಕ್ಕದ ಮನೆಯಲ್ಲಿ ಇತ್ತು, ಒಂದು ದಿನ ಟಿವಿಯಲ್ಲಿ ಸಿನಿಮಾ ಬರುತ್ತಿತ್ತು ಸರಿ ಸ್ನೇಹಿತರ ಬಲವಂತದಿಂದ ನೋಡುವುದಕ್ಕೆ ಅಲ್ಲಿ ಕುಳಿತೆವು.

ನಮ್ಮ ಮೂವರ ಕಣ್ಣು ಗಡಿಯಾರದ ಮೇಲೆಯೇ ಇತ್ತು ಯಾಕೆಂದರೆ ಆರೂ ಮೂವತ್ತರ ಒಳಗೆ ಮನೆಯಲ್ಲಿರಬೇಕು ನೋಡುತ್ತ ನೋಡುತ್ತ ಸಮಯ ಜಾರುತ್ತಿತ್ತು ಸಿನಿಮಾವನ್ನು ಬಿಟ್ಟು ಹೋಗಲು ಮನಸ್ಸಿಲ್ಲ ಹೇಗೋ ಮೂರು ಜನ ಇದ್ದೇವೆ ಏನೂ ಮಾಡುವುದಿಲ್ಲ ಎಂಬ ಧೈರ್ಯದಿಂದ ನೋಡುವುದನ್ನು ಮುಂದುವರೆಸಿದೆವು ಒಮ್ಮೆ ಗಡಿಯಾರ ನೋಡಿದರೆ ಸಮಯ ಒಂಭತ್ತು ತೋರಿಸುತ್ತಿತ್ತು ಗಾಬರಿಗೊಂಡು ಮನೆಗೆ ಹೋದೆವು ಬಾಗಿಲು ಮುಚ್ಚಿತ್ತು.

ಭಯದಿಂದ ಬಾಗಿಲು ತಟ್ಟಿದೆವು ಜೋರು ಸ್ವರದಲ್ಲಿ ತಂದೆ ಗುಡುಗಿದರು ಎಷ್ಟು ಟೈಮ್ ಈಗ? ಮನೆಗೆ ಬರುವ ಸಮಯವೇ? ಒಳಗೆ ಬರಕೂಡದು ಎಂದರು, ನಿಂತ ನೆಲವೇ ಕುಸಿದಂತಾಯಿತು ಒಳಗಡೆ ಇದ್ದ ಅಮ್ಮನೂ ಹೇಳಿ ನೋಡಿದರೆ ಯಾವುದಕ್ಕೂ ಜಗ್ಗಲಿಲ್ಲ ಕೊನೆಗೆ ಸೋತು ಪಕ್ಕದಲ್ಲಿದ್ದ ನನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಕೂತೆವು. ಸುಮಾರು ಹನ್ನೆರಡು ಮೂವತ್ತರ ವೇಳೆಗೆ ತಂದೆ ಬಾಗಿಲು ತೆಗೆದರು ಇವತ್ತೇ ಕೊನೆ ಇನ್ನೆಂದಿಗೂ ಇಂಥ ಘಟನೆ ನಡೆಯಕೂಡದು ಎಂದು ಹೇಳಿದರು ಆಯಿತು ಅಂತ ತಲೆ ತಗ್ಗಿಸಿಕೊಂಡು ಒಳಗೆ ನಡೆದೆವು.

ಆ ಸಮಯದಲ್ಲಿ ಅವರ ವರ್ತನೆ ನೋಡಿ ನನಗೆ ಕೋಪ ಬಂದಿತ್ತು. ಛೆ ಏನು ಅಂಥ ತಪ್ಪು ಮಾಡಿದ್ದು ಅಂತ ಆದರೆ ಈಗ ನನಗೆ ಅನ್ನಿಸುತ್ತದೆ, ಹೌದು ಹೆಣ್ಣುಮಕ್ಕಳು ಕತ್ತಲು ಆಗುವ ಮುಂಚೆ ಮನೆ ಸೇರಿಕೊಳ್ಳಬೇಕೆಂಬ ಅವರ ದೂರಾಲೋಚನೆ ಸರಿ ಇತ್ತೆಂದು. ಸಮಯದ ಮಹತ್ವ, ಮನುಷ್ಯನಿಗೆ ಶಿಸ್ತು ಎಷ್ಟು ಮುಖ್ಯ ಅಂತ ನನಗೆ ಈಗ ಅದರ ಅರಿವಾಗುತ್ತಿದೆ. ಈಗ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರು ಕಲಿಸಿದ ಶಿಸ್ತಿನ ಪಾಠಗಳು ಸದಾಕಾಲ ನಮ್ಮ ಜೊತೆಗಿರುತ್ತವೆ.

ಗೀತಾ ವಿ.

ಟಾಪ್ ನ್ಯೂಸ್

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.