ಅಜೆಕಾರು: 25ನೇ ವರ್ಷದ ಶ್ರೀ ಗಣೇಶೋತ್ಸವ
Team Udayavani, Sep 2, 2019, 5:04 AM IST
ಅಜೆಕಾರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಜೆಕಾರು ಇದರ ವತಿಯಿಂದ ಅಜೆಕಾರು ಪೇಟೆಯಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 2ರಿಂದ 6ರ ವರೆಗೆ ನಡೆಯಲಿದೆ.
ರಜತ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸೆ. 2ರಂದು ಬೆಳಗ್ಗೆ ಗಂಟೆ 8ಕ್ಕೆ ದೇವತಾ ಪ್ರಾರ್ಥನೆ, ವಿಗ್ರಹ ಪ್ರತಿಷ್ಠಾಪನೆ, 8.45ಕ್ಕೆ ಗಣೇಶೋತ್ಸವದ ಉದ್ಘಾಟನೆ, ಗಂಟೆ 9ಕ್ಕೆ ಗಣಪತಿಹೋಮ, 10.30ರಿಂದ ಹರಿಕಥಾ ಕಾಲಕ್ಷೇಪ ಗಣೇಶ ಮಹಿಮೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಗಂಟೆ 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಂಜೆ ಗಂಟೆ 3.30ರಿಂದ ವಿವಿಧ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ, ರಾತ್ರಿ ಗಂಟೆ 6.30ಕ್ಕೆ ರಂಗಪೂಜೆ, ರಾತ್ರಿ ಗಂಟೆ 7ರಿಂದ ಧಾರ್ಮಿಕ ಸಭೆ, ರಾತ್ರಿ ಗಂಟೆ 8.30ರಿಂದ ನೃತ್ಯ ನಿನಾದ ನಡೆಯಲಿದೆ.
ಸೆ. 3ರಂದು ಬೆಳಗ್ಗೆ 8.30ಕ್ಕೆ ಗಣಪತಿಹೋಮ, 9ಕ್ಕೆ 108 ತೆಂಗಿನಕಾಯಿ ಗಣಪತಿಯಾಗ, 10.30ರಿಂದ ಭಜನ ಸಂಕೀರ್ತನೆ, 12.30ಕ್ಕೆ ಮಹಾಪೂಜೆ, 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ, ಅಪರಾಹ್ನ 2ರಿಂದ ಯಕ್ಷಗಾನ ಶ್ರೀ ದೇವಿ ಮಹಾತೆ¾. ರಾತ್ರಿ ಗಂಟೆ 9ರಿಂದ ಗುರ್ಕಾರೆ ಗುವೆಲ್ಡ್ ತುಳು ಸಾಮಾಜಿಕ ನಾಟಕ ನಡೆಯಲಿದೆ.
ಸೆ. 4ರಂದು ಬೆಳಗ್ಗೆ 8.30ಕ್ಕೆ ಗಣಪತಿಹೋಮ, 9ಕ್ಕೆ ಅಥರ್ವ ಶೀಶ ಗಣಪತಿಯಾಗ, 12.30 ಮಹಾಪೂಜೆ, ಗಂಟೆ 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ. 3.30ರಿಂದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ಕ್ಕೆ ರಂಗ ಪೂಜೆ, 8.30ಕ್ಕೆ ಮಹಾಪೂಜೆ, 9ರಿಂದ ಕಂಡೊಡೊರಿ ದಂಡ್ಡೊರಿ ತುಳು ಹಾಸ್ಯಮಯ ನಾಟಕ ನೆರವೇರಲಿದೆ.
ಸೆ. 5ರಂದು ಬೆಳಗ್ಗೆ 8.30ಕ್ಕೆ ಗಣಪತಿಹೋಮ, 9ಕ್ಕೆ ಮಹಾಮೂಡುಗಣಪತಿ ಸೇವೆ, 10ಕ್ಕೆ ಭಜನೆ ಕಾರ್ಯಕ್ರಮ, 12.30ಕ್ಕೆ ಮಹಾಪೂಜೆ, 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ. ಮಧ್ಯಾಹ್ನ ಗಂಟೆ 2ಕ್ಕೆ ಗಡಿಬಿಡಿ ಮಲ್ಪಡೆ ಹಾಸ್ಯಮಯ ಸಾಮಾಜಿಕ ನಾಟಕ, ಸಂಜೆ 4.30ರಿಂದ ನೃತ್ಯ ಸಂಗಮ, ರಾತ್ರಿ 7ರಿಂದ ಧಾರ್ಮಿಕ ಸಭೆ, ರಾತ್ರಿ 9ಕ್ಕೆ ಕೋಟಿಚೆನ್ನಯ ತುಳು ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.
ಸೆ. 6ರಂದು ಬೆಳಗ್ಗೆ 8.30ಕ್ಕೆ ಗಣಪತಿಹೋಮ, 9.30ಕ್ಕೆ ಭಕ್ತಿಗಾನ ಸುಧಾ, 12.30ಕ್ಕೆ ಮಹಾಪೂಜೆ, 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ, ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ, 3.30ಕ್ಕೆ ವಿಸರ್ಜನೆ ಪೂಜೆ, 4ರಿಂದ ವಿವಿಧ ವಾಧ್ಯಘೋಷಗಳೊಂದಿಗೆ ಪುರಮೆರವಣಿಗೆ ಅಂಡಾರಿನ ಮುದೆಲ್ಕಡಿ ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ನಡೆಯಲಿದೆ.
ಪದಾಧಿಕಾರಿಗಳು
ಗೌರವ ಅಧ್ಯಕ್ಷರಾಗಿ ವಿ.ಸುನಿಲ್ ಕುಮಾರ್, ಭಾಸ್ಕರ ಶೆಟ್ಟಿ ಕುಂಠಿನಿ, ಅಧ್ಯಕ್ಷರಾಗಿ ವಿಜಯ ಶೆಟ್ಟಿ, ಕಾರ್ಯದರ್ಶಿ ಕೆ. ಪ್ರಶಾಂತ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.