ಬಂಟ್ವಾಳ: ಮಾರುಕಟ್ಟೆಯಲ್ಲಿ ಹಬ್ಬದ ವ್ಯಾಪಾರ
Team Udayavani, Aug 21, 2020, 10:36 PM IST
ಬಿ.ಸಿ. ರೋಡ್ನ ಅಂಗಡಿವೊಂದರಲ್ಲಿ ಕಬ್ಬಿನ ರಾಶಿ.
ಬಂಟ್ವಾಳ: ಶ್ರೀ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆಗಳಲ್ಲಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿನ ಚಟು ವಟಿಕೆ ಕಂಡುಬಂದಿದ್ದು, ಹೂವು ಸಹಿತ ಇತರ ವಸ್ತುಗಳ ವ್ಯಾಪಾರ ಚುರುಕು ಪಡೆದುಕೊಂಡಿತ್ತು. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಳೆದ ಬಾರಿಯಂತೆ ಅಬ್ಬರ ಕಂಡುಬರಲಿಲ್ಲ.
ಸಾರ್ವಜನಿಕ ಶ್ರೀ ಗಣೇಶೋತ್ಸವಗಳು ಸರಳವಾಗಿ ಆಚರಿಸಲ್ಪಡುತ್ತಿದ್ದರೂ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಚೌತಿ ಬಡಿಸುವ ಸಂಪ್ರದಾಯವಿರುವುದರಿಂದ ಕಬ್ಬಿನ ವ್ಯಾಪಾರ ಕಂಡುಬಂದಿತ್ತು. ಹೂವು, ತರಕಾರಿ, ಹಣ್ಣಿನ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ರಾಶಿ ಕಂಡುಬಂತು.
ಖರೀದಿಸುವರ ಸಂಖ್ಯೆ ಕಡಿಮೆ
ಪ್ರತಿವರ್ಷ ಗಣೇಶೋತ್ಸವ ಮುನ್ನಾ ದಿನ ರಸ್ತೆ ಬದಿಗಳಲ್ಲಿ ಹೂವಿನ ವ್ಯಾಪಾರ ಅಬ್ಬರದಿಂದ ನಡೆಯುತ್ತಿದ್ದು, ಈ ಬಾರಿ ಕೆಲವೊಂದು ರಾಶಿಗಳು ಮಾತ್ರ ಕಂಡುಬಂತು. ಖರೀದಿಸುವವರ ಸಂಖ್ಯೆ ಕಡಿಮೆ ಇತ್ತು. ಜತೆಗೆ ಹಣ್ಣು, ತರಕಾರಿಗಳ ವ್ಯಾಪಾರವೂ ಕಂಡುಬಂತು.
ಸುಮಾರು ಒಂದೂವರೆ ಲಕ್ಷ ರೂ.ಗಳ ಹೂವನ್ನು ತಂದಿದ್ದೇವೆ ಎಂದು ಹೊಳೆ ನರಸೀಪುರದ ವರ್ತಕ ಹೊನ್ನೇಗೌಡ ಅವರು ಹೇಳುತ್ತಾರೆ.
ಹೂವಿನ ವ್ಯಾಪಾರ ಸ್ವಲ್ಪ ಮಟ್ಟಿಗೆ ಕಂಡು ಬಂದರೂ ಹಿಂದಿನ ಅಬ್ಬರವಿರಲಿಲ್ಲ. ಧಾರಣೆಯಲ್ಲೂ ಕೊಂಚ ಮಟ್ಟಿನ ವ್ಯತ್ಯಾಸ ಕಂಡು ಬಂದಿದೆ ಎಂದು ಬಿ.ಸಿ. ರೋಡ್ನ ಹೂವಿನ ವರ್ತಕ ಲೋಕೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ