ಮೋದದ ಗಣಪಗೆ ವಿಧ ವಿಧ ಮೋದಕ


Team Udayavani, Sep 12, 2018, 6:00 AM IST

7.jpg

ಮೋದಕವೆಂದರೆ ಗಣಪನಿಗೆ ಬಹಳ ಇಷ್ಟವಂತೆ. ಹೀಗೆ ಹೇಳಿದಾಗ ಹಲವರಿಗೆ- “ಮೂಷಿಕ ವಾಹನ ಮೋದಕ ಹಸ್ತಾ…’ ಎಂಬ ಭಕ್ತಿಗೀತೆ ನೆನಪಾಗಿರಲಿಕ್ಕೂ ಸಾಕು. ಅಕ್ಕಿ, ಶೇಂಗಾ ಹಾಗೂ ಖರ್ಜೂರದಿಂದ ಮಾಡಬಹುದಾದ ರುಚಿರುಚಿ ಮೋದಕದ ರೆಸಿಪಿ ಇಲ್ಲಿದೆ… 

1. ತೆಂಗಿನ ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ತೆಂಗಿನಕಾಯಿ ತುರಿ- 1 ಕಪ್‌, ತುರಿದ ಬೆಲ್ಲ- 1/2 ಕಪ್‌, ಏಲಕ್ಕಿ- 3 ರಿಂದ 4, ಗಸೆಗಸೆ- 1 ಚಮಚ, ಬಿಳಿ ಎಳ್ಳು- 1 ಚಮಚ, ತುಪ್ಪ- 2 ಚಮಚ ಕಣಕಕ್ಕೆ: ಅಕ್ಕಿ ಹಿಟ್ಟು- 1 ಕಪ್‌, ಉಪ್ಪು- ಸ್ವಲ್ಪ, ತುಪ್ಪ- 1 ಚಮಚ
ಮಾಡುವ ವಿಧಾನ: ಮೊದಲು ಕಣಕ ಮಾಡಲು ಬಾಣಲೆಗೆ ತೆಂಗಿನತುರಿ ಮತ್ತು ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತೆಂಗಿನಕಾಯಿಯಲ್ಲಿರುವ ನೀರಿನಂಶ ಬೆಲ್ಲ ಕರಗಿಸಲು ಸಾಕಾಗುವುದರಿಂದ ಬೇರೆ ನೀರು ಹಾಕುವುದು ಬೇಡ. ಬೆಲ್ಲ ಕರಗಿ ತೆಂಗಿನಕಾಯಿ ಜೊತೆ ಸೇರಿ ಗಟ್ಟಿಯಾಗುವವರೆಗೆ ಕಾಯಿಸಿ. ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಕೆಳಗಿಳಿಸಿ.

ಈಗ ಒಂದು ಪಾತ್ರೆಯಲ್ಲಿ ಒಂದು ಕಪ್‌ ನೀರು, ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲಿಡಿ. ಕುದಿಯುತ್ತಿರುವಂತೆ ಅಕ್ಕಿ ಹಿಟ್ಟು ಸೇರಿಸಿ, ಕದಡಿ. ಉರಿ ಆರಿಸಿ. ಈಗ ಅದನ್ನು ಚೆನ್ನಾಗಿ ನಾದಿಕೊಂಡು, ಬಿರುಕುಗಳಿಲ್ಲದಂತೆ ಕಣಕ ತಯಾರಿಸಿ. ಈ ಕಣಕದಿಂದ ಚಿಕ್ಕ, ಚಿಕ್ಕ ಉಂಡೆ ಮಾಡಿಕೊಂಡು ಲಟ್ಟಿಸಿ, ಅದರೊಳಗೆ ಒಂದು ಚಮಚದಷ್ಟು ತಯಾರಿಸಿದ ಹೂರಣ ಇಟ್ಟು, ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಈಗ, ಗಣಪನಿಗೆ ಪ್ರಿಯವಾದ, ಸಾಂಪ್ರದಾಯಿಕ ಮೋದಕ ತಯಾರು.

2. ನೆಲಗಡಲೆ(ಶೇಂಗಾ) ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ಶೇಂಗಾ – 1/2 ಕಪ್‌, ಬೆಲ್ಲ-1/3 ಕಪ್‌, ತೆಂಗಿನತುರಿ-1/4 ಕಪ್‌, ಏಲಕ್ಕಿ ಪುಡಿ- ಸ್ವಲ್ಪ
ಕಣಕಕ್ಕೆ: ಅಕ್ಕಿ ಟ್ಟು-1 ಕಪ್‌, ನೀರು- 3/4 ಕಪ್‌, ಉಪ್ಪು-ಚಿಟಿಕೆಯಷ್ಟು
ಮಾಡುವ ವಿಧಾನ: ಶೇಂಗಾವನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, 3 ಚಮಚದಷ್ಟು ನೀರು ಹಾಕಿ ಕುದಿಯಲಿಡಿ. ಬೆಲ್ಲ ಕರಗುತ್ತಿದ್ದಂತೆ ಪುಡಿ ಮಾಡಿದ ಶೇಂಗಾ, ತೆಂಗಿನತುರಿ, ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರಗೆ ಕಾಯಿಸಿ, ತಣಿಯಲು ಬಿಡಿ.
ಈಗ ಪಾತ್ರೆಗೆ ನೀರು, ಉಪ್ಪು ಹಾಕಿ ಕುದಿಸಿ, ಅದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ನಾದಿ ಕಣಕ ತಯಾರಿಸಿ. ಕಣಕ ಮತ್ತು ಹೂರಣಗಳೆರಡನ್ನೂ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಸ್ವಲ್ಪ ಲಟ್ಟಿಸಿಕೊಂಡು, ಹೂರಣದ ಉಂಡೆ ಇಟ್ಟು ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಇದು ನೆಲಗಡಲೆಯ ಪರಿಮಳದೊಂದಿಗೆ ತಿನ್ನಲು ರುಚಿಕರ.

3. ಖರ್ಜೂರದ ಮೋದಕ
ಬೇಕಾಗುವ ಸಾಮಗ್ರಿ: ಖರ್ಜೂರ- 20, ಒಣಹಣ್ಣುಗಳು(ಬಾದಾಮಿ, ಗೋಡಂಬಿ, ಪಿಸ್ತಾ)- 1/2 ಕಪ್‌, ತುಪ್ಪ-ಸ್ವಲ್ಪ, ಏಲಕ್ಕಿ ಪುಡಿ- 1/4 ಚಮಚ
ಮಾಡುವ ವಿಧಾನ: ಖರ್ಜೂರಗಳನ್ನು ಬಿಡಿಸಿ, ಬೀಜಗಳನ್ನು ಬೇರ್ಪಡಿಸಿಕೊಳ್ಳಿ. ನಂತರ ಎಲ್ಲ ಒಣಹಣ್ಣುಗಳನ್ನು ಬಾಣಲೆಯಲ್ಲಿ ಬಿಸಿಮಾಡಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಖರ್ಜೂರಗಳನ್ನು ಕೂಡ ಮಿಕ್ಸಿಯಲ್ಲಿ ರುಬ್ಬಿ. ಈಗ ಖರ್ಜೂರದ ಪೇಸ್ಟ್‌ ಮತ್ತು ಒಣಹಣ್ಣುಗಳ ಪುಡಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಮೋದಕದ ಅಚ್ಚಿನಲ್ಲಿ ಹಾಕಿ. ಮೋದಕದ ಆಕಾರ ನೀಡಿ. ಇದು ಅತ್ಯಂತ ಸರಳ ಹಾಗೂ ಅರೋಗ್ಯದಾಯಕ ಮೋದಕ.

ವಿ.ಸೂ: ಎಲ್ಲ ಮೋದಕಗಳನ್ನು ಮೋದಕದ ಅಚ್ಚು ಬಳಸಿ ಮಾಡಿದರೆ ಆಕರ್ಷಕ ಆಕಾರ ಸಿಗುವುದು.

– ಸುಮನ್‌ ದುಬೈ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.