ಚೌತಿ ಸ್ಪೆಷಲ್ ; ಮೋದಕ ಪ್ರಿಯನಿಗೆ ಖಾದ್ಯ ವೈವಿಧ್ಯ

ಈ ಬಾರಿಯ ಚೌತಿಗೆ ಇದನ್ನು ಮಾಡಿ ಗಣೇಶನಿಗೂ ಇಡಬಹುದು, ನೀವೂ ಸವಿಯಬಹುದು.

Team Udayavani, Aug 21, 2020, 1:37 PM IST

ಚೌತಿ ಸ್ಪೆಷಲ್ ; ಮೋದಕ ಪ್ರಿಯನಿಗೆ ಖಾದ್ಯ ವೈವಿಧ್ಯ

ದೇಶದ ನಾನಾ ಭಾಗಗಳಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಈ ಹಬ್ಬದ ವಿಶೇಷವೇ ವಿವಿಧ ಬಗೆಯ ಖಾದ್ಯಗಳು. ಮೋದಕ ಪ್ರಿಯನೆಂದೇ ಕರೆಯುವ ಗಣೇಶನಿಗೆ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ತಯಾರಿಸಲ್ಪಡುವ ವಿವಿಧ ಖಾದ್ಯಗಳು ಇಲ್ಲಿವೆ. ಈ ಬಾರಿಯ ಚೌತಿಗೆ ಇದನ್ನು ಮಾಡಿ ಗಣೇಶನಿಗೂ ಇಡಬಹುದು, ನೀವೂ ಸವಿಯಬಹುದು.

ಕ್ಯಾರೆಟ್‌ ಕರ್ಜಿಕಾಯಿ
ಬೇಕಾಗುವ ಸಾಮಗ್ರಿಗಳು
 . ಕ್ಯಾರೆಟ್‌ ತುರಿ- 2 ಕಪ್‌
 . ಸಕ್ಕ ರೆ- 1 ಕಪ್‌
 . ತುಪ್ಪ- 3- 4 ಚಮಚ
 . ಹಾಲು- 2 ಕಪ್‌
 . ಗೋಡಂಬಿ- ಸ್ವಲ್ಪ
 . ದ್ರಾಕ್ಷಿ- ಸ್ವಲ್ಪ
 . ಮೈದಾ- 1 ಕಪ್‌
 . ಚಿರೋಟಿ ರವೆ- ಕಾಲು ಕಪ್‌
 . ಉಪ್ಪು- ರುಚಿಗೆ
 . ಎಣ್ಣೆ- 1 ಲೀಟರ್‌

ಮಾಡುವ ವಿಧಾನ
ಒಂದು ಬಟ್ಟ ಲಿಗೆ ಮೈದಾ ಮತ್ತು ಚಿರೋಟಿ ರವೆ ಹಾಕಿ. ಚಿಟಿಕೆ ಉಪ್ಪು, ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲ ಸಿ. ಅನಂತರ ಒಂದು ಪಾತ್ರೆಗೆ ಹಾಲು, ತುರಿದ ಕ್ಯಾರೆಟ್‌ ಹಾಕಿ ಬೇಯಿಸಿ. ಇದಕ್ಕೆ ತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ. ಬಳಿಕ ಒಣ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಮಿಶ್ರಣ ಮಾಡಿ. ಇದನ್ನು ಸಣ್ಣ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಇದರ ಮಧ್ಯೆ ಕ್ಯಾರೆಟ್‌ ಮಿಶ್ರಣ ಹಾಕಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ. ಎಣ್ಣೆಯಲ್ಲಿ ಕಾಯಿಸಿ.

ಚೆನ್ನಾ ಉಸ್ಲಿ
ಬೇಕಾಗುವ ಸಾಮಗ್ರಿಗಳು

 . ಚೆನ್ನಾ – 2 ಕಪ್‌
 . ಕೆಂಪು ಮೆಣ ಸು- 2
 . ಕರಿಬೇವು- 5
 . ತುರಿದ ಕೊಬ್ಬ ರಿ- 5 ಚಮಚ
 . ಸಾಸಿವೆ- ಅರ್ಧ ಚಮಚ
 . ಉಪ್ಪು- ರುಚಿಗೆ
 . ಎಣ್ಣೆ- ಸ್ವಲ್ಪ

ಮಾಡುವ ವಿಧಾನ
ರಾತ್ರಿಯೇ ಚೆನ್ನಾ ಅನ್ನು ನೀರಿನಲ್ಲಿ ನೆನೆ ಹಾಕಿ. ಮರುದಿನ ಬೆಳಗ್ಗೆ ಸ್ವಲ್ಪ ಉಪ್ಪು ಹಾಕಿ ಕುಕ್ಕರಲ್ಲಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಉಪ್ಪು, ಮೆಣಸು, ಕರಿ ಬೇವು, ತೆಂಗಿನ ತುರಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ಬಳಿಕ ಇದಕ್ಕೆ ಬೇಯಿಸಿದ ಚೆನ್ನಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಅರ್ಧ ಚಮಚ ಸಕ್ಕರೆ ಸೇರಿಸಿದರೆ ಹೆಚ್ಚು ರುಚಿಯಾಗುತ್ತದೆ.

ಮೋದಕ
ಬೇಕಾಗುವ ಸಾಮಗ್ರಿಗಳು
.ತೆಂಗಿನ ತುರಿ- 2 ಕಪ್‌
.ತುರಿದಿರುವ ಬೆಲ್ಲ- 1 ಕಪ್‌
.ಏಲಕ್ಕಿ- 2- 3
. ತುಪ್ಪ- 3 ಚಮಚ
. ಅಕ್ಕಿ ಹಿಟ್ಟು- 1 ಕಪ್‌
. ನೀರು- 1 ಕಪ್‌
. ಉಪ್ಪು- ಚಿಟಿಕೆ

ಮಾಡುವ ವಿಧಾನ
ಬಾಣಲೆಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ, ಬೆಲ್ಲ, ತೆಂಗಿನ ತುರಿ, ಕೊಬ್ಬರಿ ಹಾಕಿ ಅಂಟಾಗುವವರೆಗೆ ಚೆನ್ನಾಗಿ ಕಲೆಸಿ. ಬಳಿಕ ಒಲೆಯಿಂದ ಕೆಳಗಿಳಿಸಿ ಸಂಪೂರ್ಣವಾಗಿ ತಣಿಯಲು ಬಿಡಿ. ಇನ್ನೊಂದು ಪಾತ್ರೆಗೆ ಒಂದು ಕಪ್‌ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಉಪ್ಪು, 1 ಚಮಚ ತುಪ್ಪವನ್ನು ಸೇರಿಸಿ. ಬಳಿಕ ಇದಕ್ಕೆ ಅಕ್ಕಿ ಹಿಟ್ಟು ಹಾಕಿ ಗಟ್ಟಿಯಾಗಿ ಕಲಸಿ. ಬಿಸಿ ಇರುವಾಗಲೇ ಸ್ವಲ್ಪ ದೊಡ್ಡ ಉಂಡೆಗಳನ್ನಾಗಿ ಮಾಡಿ. ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಮಧ್ಯೆ ಬೆರಳಲ್ಲಿ ತೂತು ಮಾಡಿ ಅದಕ್ಕೆ ಮೊದಲು ಸಿದ್ಧಪಡಿಸಿಕೊಂಡ ಕೊಬ್ಬರಿ ಮತ್ತು ಬೆಲ್ಲದ ಪಾಕ ಮಿಶ್ರಣವನ್ನು ಹಾಕಿ. ಕೈ ಬೆರಳಲ್ಲಿ ಮೋದ ಕದ ಆಕೃತಿಯನ್ನು ನೀಡಿ. ಬಳಿಕ ಇದನ್ನು 10 ನಿಮಿಷ ಹಬೆಯಲ್ಲಿ ಬೇಯಿಸಿದರೆ ಮೋದಕ ಸಿದ್ಧ.

ರವೆ ಕಜ್ಜಾಯ

ಬೇಕಾಗುವ ಸಾಮಗ್ರಿಗಳು
. ರವೆ- 1 ಕಪ್‌
 .ಅಕ್ಕಿ ಹಿಟ್ಟು- 1 ಕಪ್‌
 .ತುರಿದ ಬೆಲ್ಲ- ಒಂದುವರೆ ಕಪ್‌
 .ಹಾಲು- ಅರ್ಧ ಕಪ್‌
 .ಗಸಗಸೆ- 2 ಕಪ್‌
 .ಏಲಕ್ಕಿ ಹುಡಿ- ಅರ್ಧ ಚಮಚ
 . ಎಣ್ಣೆ- 1 ಲೀ.

ಮಾಡುವ ವಿಧಾನ
ರವೆಯನ್ನು ಕ್ರಂಚಿಯಾಗುವಂತೆ ಹುರಿಯಿರಿ. ಆದರೆ ಹೆಚ್ಚು ಕೆಂಪು ಬಣ್ಣ ಬಾರದಂತೆ ನೋಡಿಕೊಳ್ಳಿ. ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಇದಕ್ಕೆ ರವೆ ಮತ್ತು 2 ಕಪ್‌ ನೀರು ಹಾಕಿ ಬೇಯಿಸಿ. ಅನಂತರ ತುರಿದ ಬೆಲ್ಲವನ್ನು ರವೆಗೆ ಹಾಕಿ. ಅಕ್ಕಿ ಹಿಟ್ಟು ಸೇರಿಸಿ ಬೇಗನೆ ಮಿಶ್ರಣ ಮಾಡಿ ಕೂಡಲೇ ಒಲೆಯಿಂದ ಇಳಿಸಿ. ಅನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಹಾಲು ಸೇರಿಸಿ ಚಪಾತಿ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳನ್ನಾಗಿ ಮಾಡಿ ವಡೆ ತಟ್ಟುವ ರೀತಿಯಲ್ಲಿ ತಟ್ಟಿಕೊಳ್ಳಿ. ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಬಿಸಿ ಮಾಡಿ ತಟ್ಟಿದ ಕಜ್ಜಾಯವನ್ನು ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ.

ಚಾಲಿಮಿಡಿ ಉಂಡ್ರಾಲು

ಬೇಕಾಗುವ ಸಾಮಗ್ರಿಗಳು
.
 ಅಕ್ಕಿ ಹಿಟ್ಟು- ಒಂದುವರೆ ಕಪ್‌
 . ತುರಿದ ಬೆಲ್ಲ ಅಥವಾ ಸಕ್ಕರೆ-ಮುಕ್ಕಾಲು ಕಪ್‌
 . ನೀರು- 1- 2 ಚಮಚ

ಮಾಡುವ ವಿಧಾನ
ತುರಿದ ಬೆಲ್ಲ ಮತ್ತು ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬಿಡಿ (5- 10 ನಿಮಿಷ ಸಾಕು). ಬೆಲ್ಲ ಮತ್ತು ಅಕ್ಕಿ ನಿಧಾನವಾಗಿ ಮಿಶ್ರಣವಾಗುತ್ತ ಬರುತ್ತದೆ. ಬಳಿಕ ಇದನ್ನು ಉಂಡೆಗಳನ್ನಾಗಿ ಮಾಡಿ. ಮನೆಯಲ್ಲೇ ಮಾಡಿದ ಅಕ್ಕಿ ಹಿಟ್ಟಿಗೆ ನೀರು ಬೇಕಾಗಿರುವುದಿಲ್ಲ. ಒಂದು ವೇಳೆ ಸ್ಟೋರ್‌ ನಿಂದ ಅಕ್ಕಿ ಹಿಟ್ಟು ಖರೀದಿಸಿ ತಂದರೆ ಬೇಕಿದ್ದರೆ ಅದಕ್ಕೆ 1 ಅಥವಾ 2 ಚಮಚ ಸೇರಿಸಬಹುದು.

ಅಕ್ಕಿ ಪಾಯಸ
ಬೇಕಾಗುವ ಸಾಮಗ್ರಿಗಳು
 . ಹಾಲು- 4 ಕಪ್‌
 . ಬೆಳ್ತಿಗೆ ಅಕ್ಕಿ- ಅರ್ಧ ಕಪ್‌
 . ಏಲಕ್ಕಿ- 4
 . ಬೆಲ್ಲ- ಮುಕ್ಕಾಲು ಕಪ್‌
 . ತುಪ್ಪ- 2 ಚಮಚ
 . ಗೇರು ಬೀಜ- 12

ಮಾಡುವ ವಿಧಾನ
ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಿ. ದಪ್ಪ ತಳದ ಬಾಣಲೆಯಲ್ಲಿ ಹಾಲು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಬೆಲ್ಲವನ್ನು ಅರ್ಧ ಕಪ್‌ ನೀರು ಹಾಕಿ ಒಲೆಯಲ್ಲಿ ಕಾಯಿಸಿ. ಸ್ವಲ್ಪ ದಪ್ಪವಾದಾಗ ಒಲೆಯಿಂದ ಕೆಳಗೆ ಇಳಿಸಿ. ಕುದಿಯುತ್ತಿರುವ ಹಾಲಿಗೆ ಅಕ್ಕಿಯನ್ನು ಹಾಕಿ. ಅಕ್ಕಿ ಬೆಂದಾಗ ಅದನ್ನು ಚೆನ್ನಾಗಿ ಸ್ಮಾಶ್‌ ಮಾಡಿ. ಪಾಯಸಕ್ಕೆ ಬೇಕಾಗುವಷ್ಟು ಹಾಲು ಸೇರಿಸಿ. ಬೆಲ್ಲ ಹಾಕುವ ಮೊದಲು ಉರಿಯನ್ನು ಆಫ್ ಮಾಡಿ. ಬಳಿಕ ಏಲಕ್ಕಿ ಹುಡಿ ಸೇರಿಸಿ. ಚೆನ್ನಾಗಿ ಕಲಸಿ. ಬಳಿಕ ಫ್ರೈ ಮಾಡಿದ ಗೊಡಂಬಿ ಹಾಕಿ. ಡ್ರೈಫ್ರುಟ್ಸ್‌ ನಿಂದ ಅಲಂಕರಿಸಿ.

 ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.