ಹರಿಯುವ ನೀರಿನಲ್ಲಿ, ಒಂದೇ ದಿನ ವಿಸರ್ಜನೆಯ ಮಾದರಿ


Team Udayavani, Sep 1, 2019, 5:38 AM IST

ganapa

ಉಡುಪಿ: ಈ ಬಾರಿ ಗಣಪತಿ ವಿಗ್ರಹಗಳನ್ನು ತಮ್ಮ ಕೆರೆಗಳಲ್ಲಿ ವಿಸರ್ಜಿಸಬಾರದು ಎಂದು ಕೆಲವು ದೇವಸ್ಥಾನಗಳು ನಿರ್ಬಂಧ ಹೇರಿವೆ. ವಿಗ್ರಹಗಳಿಗೆ ರಾಸಾಯನಿಕ ಬಣ್ಣಗಳನ್ನು ಬಳಸುವುದೇ ಇದಕ್ಕೆ ಕಾರಣ.

ಉಡುಪಿಯ ಅತಿ ಹಿರಿಯ ಗಣೇಶೋತ್ಸವ ಸಮಿತಿಯಾದ ಕಡಿಯಾಳಿ ಗಣೇಶೋತ್ಸವವು 1996ರವರೆಗೆ ಶ್ರೀಕೃಷ್ಣಮಠದ ಸರೋವರದಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜಿಸುತ್ತಿತ್ತು. ಆರೆಸ್ಸೆಸ್‌ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಅವರು ಗಣಪತಿ ವಿಗ್ರಹವನ್ನು ಹರಿಯುವ ನೀರಿಗೆ ವಿಸರ್ಜಿಸಬೇಕೆ ವಿನಾ ನಿಂತ ನೀರಿನಲ್ಲಿ ವಿಸರ್ಜಿಸಬಾರದು ಎಂದು ಕಡಿಯಾಳಿ ಗಣೇಶೋತ್ಸವದವರಿಗೆ ಸಲಹೆ ಕೊಟ್ಟರು. ಕಡಿಯಾಳಿ ಗಣೇಶೋತ್ಸವದವರು 1997ರಿಂದ ಇದುವರೆಗೆ ಮಲ್ಪೆ ಸಮುದ್ರಕ್ಕೆ ವಿಗ್ರಹ ವಿಸರ್ಜನೆ ಮಾಡುತ್ತಿದ್ದಾರೆ.

ಬನ್ನಂಜೆ ದೇವಸ್ಥಾನದವರು ತಮ್ಮ ಕೆರೆಯಲ್ಲಿ ವಿಗ್ರಹ ವಿಸರ್ಜಿಸಬಾರದೆಂದು ಹೇಳಿದ್ದಾರೆ. ಶ್ರೀಕೃಷ್ಣಮಠದ ಪರ್ಯಾಯ ಶ್ರೀಗಳು ಬಣ್ಣ ಹಾಕಿದ ವಿಗ್ರಹವನ್ನು ವಿಸರ್ಜಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ.

ಶ್ರೀಕೃಷ್ಣಮಠದಲ್ಲಿ ಗಣಪತಿ ವಿಗ್ರಹ ಮಾಡುವ ಸೋಮನಾಥರು ಈ ಬಾರಿ ನೈಸರ್ಗಿಕ ಬಣ್ಣ ಹಾಕಿ ವಿಗ್ರಹ ರಚಿಸುತ್ತಿದ್ದಾರೆ. ರಥಬೀದಿಯಲ್ಲಿ ಪೂಜೆಗೊಳ್ಳುವ ಗಣೇಶನ ವಿಗ್ರಹಕ್ಕೆ ಬಣ್ಣ ಹಾಕದೆ ದೃಷ್ಟಿಯನ್ನು ಮಾತ್ರ ಬಿಡಿಸುತ್ತಾರೆ. ಕೃಷ್ಣಮಠದ ಗಣೇಶನಿಗಾಗಿ ರಕ್ತಚಂದನವನ್ನು ತೇದುವ ಕೆಲಸಕ್ಕೆ ಈಗಾಗಲೇ ಮುಂದಾಗಿದ್ದಾರೆ. ಹೀಗೆ ಕ್ರಮೇಣ ಒಂದೊಂದೆ ಕಡೆ ಈ ಪದ್ಧತಿ ಜಾರಿಗೆ ಬಂದರೆ ಜನರಲ್ಲೂ ಜಾಗೃತಿ ಮೂಡುತ್ತದೆ. ಇದೇ ರೀತಿ ಕೆರೆಗೆ ವಿಗ್ರಹವನ್ನು ವಿಸರ್ಜಿಸುವ ಬದಲು ಹರಿಯುವ ನೀರಿಗೆ ಹಾಕುವ ಕ್ರಮವನ್ನೂ ಜಾರಿಗೊಳಿಸಿದರೆ ಉತ್ತಮ.

1996ರಲ್ಲಿ ಶ್ರೀಪೇಜಾವರ ಮಠಾಧೀಶರು ಒಂದೂರಿನಲ್ಲಿ ಪೂಜೆಗೊಂಡ ವಿವಿಧ ವಿಗ್ರಹಗಳನ್ನು ಜತೆ ಸೇರಿ ವಿಸರ್ಜಿಸಿದರೆ ಉತ್ತಮ ಎಂದು ಕಡಿಯಾಳಿ ಗಣೇಶೋತ್ಸವ ಸಮಿತಿಯವರಿಗೆ ಸಲಹೆ ಕೊಟ್ಟರು. 1997ರಲ್ಲಿ ಮೂರ್‍ನಾಲ್ಕು ಗಣೇಶೋತ್ಸವದವರು ಇದೇ ರೀತಿ ಒಂದೇ ಮೆರವಣಿಗೆಯಲ್ಲಿ ವಿಸರ್ಜನೆ ನಡೆಸಿದರು. ಆದರೆ ಕಾರಣಾಂತರದಿಂದ ಮತ್ತೆ ಅದು ನಡೆಯಲಿಲ್ಲ. ಕಡಿಯಾಳಿಯಿಂದ ಮಲ್ಪೆ ಕಡಲ ತೀರದವರೆಗೆ ನಗರವನ್ನು ಸುತ್ತಿಕೊಂಡು ಮೆರವಣಿಗೆ ಹೋಗುವಾಗ 12 ಕಿ.ಮೀ. ಆಗುತ್ತದೆ. ಎಲ್ಲ ಗಣೇಶೋತ್ಸವ ಸಮಿತಿಯವರು ಮೊದಲೆ ನಿಗದಿಪಡಿಸಿ ನಿರ್ದಿಷ್ಟ ದಿನಗಳಲ್ಲಿ ಪೂಜಿಸಬೇಕು. ಒಂದು ನಗರದಲ್ಲಿ ಪೂಜೆಗೊಳ್ಳುವ ಎಲ್ಲ ಗಣಪತಿ ವಿಗ್ರಹಗಳು ಒಂದೇ ಮೆರವಣಿಗೆಯಲ್ಲಿ ಜತೆ ಸೇರಿದರೆ ಅದರ ವೈಭವವೇ ಬೇರೆ ಆಗುತ್ತದೆ. ಸಾಕಷ್ಟು ಖರ್ಚುಗಳು ಉಳಿತಾಯವಾಗುತ್ತದೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಇಂತಹ ಪ್ರಯತ್ನಗಳನ್ನು ಎಲ್ಲ ಊರಿನವರೂ ಮಾಡಿದರೆ ಮಾದರಿ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ.

– ಸ್ವಾಮಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.