ಶ್ರೀ ಕೃಷ್ಣಾಷ್ಟಮಿ ಆಯ್ತು ಇನ್ನು ಲೀಲೋತ್ಸವದ ಸಂಭ್ರಮ
Team Udayavani, Aug 23, 2019, 6:28 PM IST
ಶ್ರೀ ಕೃಷ್ಣ ಮಠದಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಇಂದು ಶ್ರೀ ಕೃಷ್ಣ ಲೀಲೋತ್ಸವ. ಉಡುಪಿ ಸುತ್ತೆಲ್ಲಾ ಬಗೆಬಗೆಯ ವೇಷಗಳದ್ದೇ ವೈಭವ. ಆಲಾರೆ ಗೋವಿಂದ ತಂಡದವರು ದಹೀ ಹಂಡಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಹುಲಿವೇಷಧಾರಿಗಳೆಲ್ಲಾ ರಥಬೀದಿಗೆ ಲಗ್ಗೆ ಇಡಲು ಕಾತರದಿಂದ್ದಾರೆ. ಉಳಿದ ವೇಷಧಾರಿಗಳೆಲ್ಲಾ ಕೃಷ್ಣ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾರೆ. ಒಟ್ಟಿನಲ್ಲಿ ಪೊಡವಿಗೊಡೆಯನ ನಾಡಿನಲ್ಲಿ ಲೀಲೋತ್ಸವದ ಸಂಭ್ರಮ ಭರ್ಜರಿಯಾಗಿ ತೆರದುಕೊಳ್ಳಲಿದೆ.