ರೋಗಗಳನ್ನು ಆಹ್ವಾನಿಸುತ್ತಿರುವ ತ್ಯಾಜ್ಯ ರಾಶಿ !


Team Udayavani, May 26, 2018, 6:15 AM IST

25-kbl-2a.jpg

ಕುಂಬಳೆ: ಡೆಂಗ್ಯೂ ಮಲೇರಿಯಾ ಮುಂತಾದ ಮಾರಕ ರೋಗಗಳ‌ ಭಯ ಎಲ್ಲೆಡೆ ಕಾಡುತ್ತಿದೆ. ಪ್ರಾಣಿ ಪಕ್ಷಿಗಳಿಂದ ಈ ರೋಗಗಳು ಪಸರಿಸುತ್ತಿವೆ ಎಂದೂ ಬೆಟ್ಟು ಮಾಡಲಾಗುತ್ತಿದೆ.

ಆದರೆ ಯಾವುದೇ ಮಾರಕ ರೋಗಗಳಿಗೂ ಪ್ರಾಣಿ ಪಕ್ಷಿಗಳಿಗಿಂತ ನಾವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲೆಂದರಲ್ಲಿ ಲಂಗು ಲಗಾಮಿ ಲ್ಲದೆ ತ್ಯಾಜ್ಯ ಸುರಿಯುವುದರಿಂದ ಈ ಪ್ರದೇಶದಲ್ಲಿ ಗಬ್ಬು ವಾಸನೆಯಲ್ಲದೆ ಮಾರಕ ರೋಗಾಣು ಸೃಷ್ಟಿಯಾಗುತ್ತಿದೆ.

ಅಂಗಡಿ, ಹೋಟೆಲ್‌, ಮಾಂಸ ದಂಗಡಿಯ ಮಾಲಿನ್ಯವನ್ನು ಕೆಲವೆಡೆ ರಾಶಿ ಹಾಕುವುದರಿಂದ ಈ ಪ್ರದೇಶ ಮಾತ್ರವಲ್ಲ ಸುತ್ತಮುತ್ತಲ ಪರಿಸರವೂ ಮಲಿನವಾಗುವುದು. ಪ್ರಾಣಿ ಪಕ್ಷಿಗಳು ಮಾಲಿನ್ಯರಾಶಿಯನ್ನು ಹರಡಿ ಗಲೀಜು ಮಾಡುವುದನ್ನು ಎಲ್ಲೆಡೆ ಕಾಣಬಹುದು. ಇದೀಗ ಹೆದ್ದಾರಿಯಿಂದ ತೊಡಗಿ ಗ್ರಾಮೀಣ ಪ್ರದೇಶಗಳ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಮಾಲಿನ್ಯದ ಪೊಟ್ಟಣವನ್ನು ಎಸೆಯುವ ದಂಧೆ ಸಕ್ರಿಯವಾಗಿದೆ. ಇದರಲ್ಲಿ ಕೋಳಿಯ ತ್ಯಾಜ್ಯಗಳೇ ಅಧಿಕವಾಗಿರುವುದು. ಇದರಿಂದ ಜನರು ಭಯಭೀತರಾಗಿದ್ದಾರೆ. ರಾತ್ರಿ ಕಾಲದಲ್ಲಿ ವಾಹನಗಳ ಮೂಲಕ ಮಾಂಸ ತ್ಯಾಜ್ಯವನ್ನು ತಂದು ರಸ್ತೆ ಪಕ್ಕದ ಪೊದರಿನಲ್ಲಿ ಎಸೆದು ಪರಾರಿಯಾಗುವ ತಂಡ ಸಕ್ರಿಯವಾಗಿದೆ. ಈ ತಂಡ ವನ್ನು ವಿಚಾರಿಸಲೂ ಯಾರೂ ಮುಂದಾಗು ತ್ತಿಲ್ಲ. ಮಾರಕಾಯುಧ ಗಳೊಂದಿಗೆ ಹಲ್ಲೆಗೆ ಸಿದ್ಧರಾಗಿ ಆಗಮಿಸುವ ತಂಡ ದಿಂದ ಭಯಭೀತರಾಗಿ ತಂಡವನ್ನು ತಡೆಯಲು ಮುಂದಾಗುವುದಿಲ್ಲ. ಪೊಲೀಸರೂ ಇದನ್ನು ನಿಗ್ರಹಿಸಲು ಕ್ರಮ ಕೈಗೊಳ್ಳುವುದಿಲ್ಲವೆಂಬ ಆರೋಪ ಸಾರ್ವಜನಿಕರದು.

ಕೆಲವು ಕಡೆಗಳಲ್ಲಿ ಕಾಟಾಚಾರಕ್ಕೆ ಮಾಲಿನ್ಯದ ರಾಶಿ ಮೇಲೆ ಲಾರಿಯಲ್ಲಿ ಮಣ್ಣು ತಂದು ಸುರಿಯುತ್ತಿದ್ದಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರವಿಲ್ಲ. ಕೆಲದಿನಗಳ ಬಳಿಕ ಮತ್ತೆ ಇಲ್ಲಿ ಮಾಲಿನ್ಯ ರಾಶಿ ತುಂಬಿ ತುಳುಕುವುದನ್ನು ಕಾಣಬಹುದು.ಆದುದರಿಂದ ಮಾಲಿನ್ಯ ರಾಶಿ ತಡೆಗೆ ಶಾಶ್ವತ ಪರಿಹಾರ ಕಾಣಬೇಕಾಗಿದೆ.

ಕರ್ನಾಟಕ ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ಉಪ್ಪಳ, ಕೈಕಂಬ, ಮಂಗಲ್ಪಾಡಿ, ನಯಾಬಜಾರ್‌, ಬಂದ್ಯೋಡು, ಕುಂಬಳೆ, ಮೊಗ್ರಾಲ್‌, ಚೌಕಿ, ಕಾಸರಗೋಡು ಸಹಿತ ರಸ್ತೆ ಪಕ್ಕದಲ್ಲಿ ತ್ಯಾಜ್ಯ ರಾಶಿಗಳನ್ನು ಕಾಣಬಹುದು. ಅದರಲ್ಲೂ ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ರಸ್ತೆ ಪಕ್ಕದಲ್ಲಿ ಮಾಲಿನ್ಯ ರಾಶಿಯನ್ನು ನಿತ್ಯ ಕಾಣಬಹುದು. ಆದರೆ ಇಲ್ಲಿನ ವೈದ್ಯರಿಗೆ ಮತ್ತು ಸ್ಥಳೀಯಾಡಳಿತಕ್ಕೆ ಇದು ಕ್ಯಾರೇ ಅಲ್ಲವೆಂಬಂತಿದೆ. 

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.