ಗೆಜ್ಜೆ ಹಣಕೊಡು ಗ್ರಾಮದಲ್ಲಿ ಬಸವ ಜಯಂತಿ ಆಚರಣೆ
Team Udayavani, May 21, 2019, 6:10 AM IST
ಸೋಮವಾರಪೇಟೆ: ಗೆಜ್ಜೆ ಹಣಕೊಡು ಗ್ರಾಮದಲ್ಲಿ ಬಸವ ಜಯಂತಿ ಆಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಉಪಾಧ್ಯಕ್ಷ ಜಯರಾಜ್, ತಾಲೂಕು ವೀರಶೈವ ಮಹಾಸಭಾದ ಉಪಾಧ್ಯಕ್ಷೆ ರಶ್ಮಿ ನವೀನ್, ಪ್ರಮುಖರಾದ ತಮ್ಮಯ್ಯ, ಸತೀಶ್, ಶಂಕರಪ್ಪ, ದಯಾಕರ ಮತ್ತಿತರರು ಉಪಸ್ಥಿತರಿದ್ದರು.