ಬಿಂಕದ ಸಿಂಗಾರಿ ಈ ಕೆಂಪು ಸುಂದರಿ.


Team Udayavani, May 14, 2019, 5:20 PM IST

may

ಬದಿಯಡ್ಕ : ಎಪ್ರಿಲ್‌ ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಜನರ ಹಾಹಾಕಾರ. ಒಂದೆಡೆ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಸುಡುಬಿಸಿಲಿನ ಸಮಸ್ಯೆ. ಹೊರಗಿಳಿಯಲೂ ಹಿಂದೇಟು ಹಾಕುವ ಸಾಮಾನ್ಯ ಜನರ ಮನದ ಬೇಗುದಿಯನ್ನು ಕ್ಷಣಕಾಲ ತಣಿಸುವ ಶಕ್ತಿ ಇರುವುದು ಎಪ್ರಿಲ್‌ ಮೇ ತಿಂಗಳಲ್ಲಿ ಅರಳುವ ಸುಂದರವಾದ ಹೂಗಳಿಗೆ ಮಾತ್ರ. ಅದರಲ್ಲೂ ಮೇ ಮಾಸದಲ್ಲಿ ಪ್ರಕೃತಿ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಾಳೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಬೀಸುವ ಗಾಳಿಗೆ ತಲೆದೂಗುವ ಈ ಚೆಲುವೆಯರು ಬಿಸಿಲಿನ ಬೇಗೆಯನ್ನೇ ಆಶ್ರಯಿಸಿ ನಗು ಚೆಲ್ಲುತ್ತಾರೆ. ಈ ಹೂಗಳ ಮಧ್ಯೆ ತನ್ನ ಬಣ್ಣ ಹಾಗೂ ಆಕೃತಿಯಿಂದ ಸೆಳೆಯುವ ಹೂಗಳಲ್ಲಿ ಮೇ ಪ್ಲವರ್ ಕೂಡಾ ಒಂದು.

ಉರಿಬಿಸಿಲಿಗೆ ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿ ನಿಂತಾಗ ಭಾರತದಲ್ಲಿ ಮೇ ಪ್ಲವರ್ ಎಂದೇ ಕರೆಯಲ್ಪಡುವ ಗುಲ್‌ ಮೊಹರ್‌ ಮರವು ಮಾತ್ರ ತಣ್ಣಗೆ ಹೂಬಿಟ್ಟು ಕಣ್ಮನ ತಣಿಸುತ್ತದೆ. ಬೆತ್ತಲಾದ ಮರಕ್ಕೆ ಕೆಂಪು ಬಟ್ಟೆ ಹೊದಿಸಿದಂತೆ ಮರದ ತುಂಬಾ ಅರಳಿನಗುವ ಗುಲ್‌ ಮೊಹರ್‌ನ ಚೆಲುವು ಅವರ್ಣನೀಯ. ಹಾಗೆಯೇ ಎಲ್ಲಾ ಮನಸ್ಥಿತಿಯ ಜನರೂ ಒಮ್ಮೆ ಕತ್ತೆತ್ತಿ ನೋಡುವಂತೆ ಮಾಡುವ ಏಕೈಕ ಹೂ ಮೇ ಪ್ಲವರ್ .

ಇದೀಗ ಎಲ್ಲೆಲ್ಲೂ ಕೆಂಪು ಕಡುಕೇಸರಿ ಬಣ್ಣದ ಹೂಗಳಿಂದ ಕಂಗೊಳಿಸುವ ಮರಗಳನ್ನು ಕಾಣಬಹುದು. ರಸ್ತೆಯ ಇಕ್ಕೆಲಗಳಲ್ಲಿ, ಶಾಲೆ ಕಾಲೇಜುಗಳ ಆವರಣದಲ್ಲಿ, ಅರಣ್ಯ ಪ್ರದೇಶಗಳಲ್ಲಿ ಬೀಸುವ ಗಾಳಿಗೆ ಬೆಡಗುಬಿನ್ನಾಣದಿಂದ ನಲಿದಾಡುವ ಮೇ ಪ್ಲವರ್ ಸೌಂದರ್ಯ ಹಾಗೂ ತನ್ನ ಆಕರ್ಷಣೀಯ ಚೆಲುವಿನಿಂದ ಇಡೀ ಪ್ರದೇಶಕ್ಕೆ ಹೊಸರಂಗು ತುಂಬುತ್ತದೆ. ಅಂತೆಯೇ ಬಿಸಿಲಿನ ಬೇಗೆಯಲಿ ಬೇಯುವ ಮನಸಿಗೆ ಸ್ವಲ್ಪ ತಂಪಿನ ಅನುಭವವನ್ನು ನೀಡುತ್ತದೆ. ಕೆಂಬಣ್ಣದ ಹೂವನ್ನು ಮುಡಿದು ಕಂಗೊಳಿಸುವ ಮೇ ಪ್ಲವರ್ ಮರದ ಚೆಲುವನ್ನು ಸೆರೆಹಿಡಿಯದ ಛಾಯಾಗ್ರಾಹಕರಿಲ್ಲಾ, ವರ್ಣಿಸದ ಕವಿ ಹೃದಯಗಳಿಲ್ಲಾ. ಕಣ್ಣಲ್ಲಿ ತುಂಬಿಕೊಳ್ಳದ ನೋಡುಗನಿಲ್ಲಾ.

ಸುಡು ಬಿಸಿಲ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಕಪ್ಪು ಮೋಡಗಳು, ಉದುರಿ ಹೋಗುವ ನಾಲ್ಕು ಹನಿಗಳಂತೆ ಪ್ರಕೃತಿಯ ವಿಸ್ಮಯಗಳಲ್ಲಿ ಇದೂ ಒಂದು. ಬಾನಲ್ಲಿ ರಂಗಿನೋಕುಳಿ ಚೆಲ್ಲಿ ನೆಲದ ಮೇಲೆಲ್ಲಾ ಉದುರಿದ ಹೂದಳಗಳು ಬಿಡಿಸುವ ರಂಗವಲ್ಲಿ. ಹೂಹಾಸಿಗೆಯ ಅಂದ ಮಾತಿಗೆ ನಿಲುಕದು. ಚಿತ್ತಾಕರ್ಷಕ ಹೂಗೊಂಚಲುಗಳ ರಾಶಿ ಕಣ್ಣಿಗೆ ಹಬ್ಬ. ಮಡಗಾಸ್ಕರ್‌ ಮೂಲದ ಈ ಮರ ಕಡಿಮೆ ಎತ್ತರದಲ್ಲಿ ಅಗಲವಾಗಿ ಹರಡಿ ನಿಲ್ಲುತ್ತದೆ. ಗ್ರಾಮೀಣ ಭಾಷೆಯಲ್ಲಿ ಕತ್ತಿಕಾಯಿ ಎಂದು ಕರೆಯುವ ಈ ಮರದ ವೈಜ್ಞಾನಿಕ ಹೆಸರು ಡಿಲೊನಿಕ್ಸ್‌ ರೆಜಿಯ. ಗುಲ್‌ ಮೊಹರ್‌ ಎನ್ನುವುದು ಉರ್ದು ಭಾಷೆಯ ಪದ. ಎಪ್ರಿಲ್‌ ಮೇ ತಿಂಗಳಲ್ಲಿ ಮೊಗ್ಗು ಬಿಡಲು ಪ್ರಾರಂಭವಾಗುತ್ತದೆ. ಕತ್ತಿಯಂತಿರುವ ಕೋಡಿನ ತುಂಬೆಲ್ಲಾ ಬಿತ್ತುಗಳನ್ನು ಕಾಣಬಹುದು.

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಈ ಹೂಗಳನ್ನು ಬಳಸಿ ಚಪ್ಪರವನ್ನು ಅಲಂಕರಿಸುವುದೂ ಇದೆ. ಇಲ್ಲಿನ ಮಕ್ಕಳಿಗಂತೂ ಈ ಹೂವಿನ ಮೊಗ್ಗು ಹೂಗಳನ್ನು ಆಟದಲ್ಲಿ ಬಳಸುವುದೇ ಒಂದು ಗಮ್ಮತ್ತು. ಮುಂಜಾನೆ ಹಾಗೂ ಮುಸ್ಸಂಜೆಯ ರವಿಕಿರಣ ಈ ಹೂವಿನಂದವನ್ನು ಇಮ್ಮಡಿಗೊಳಿಸುತ್ತದೆ. ಅಂತೆಯೇ ನಿಸರ್ಗಪ್ರಿಯರಿಗೆ ಕವಿ ಹೃದಯರಿಗೆ ಸದಾ ಪ್ರೇರಣಾಶಕ್ತಿಯೂ ಹೌದು. ಫಳ ಫಳ ಹೊಳೆಯುವ ಕೆಂಪನೆ ಹೂಗಳ ಆಹ್ಲಾದಮಯ ಆಸರೆ ನೀಡುವ ತಂಪಾದ ಅನುಭವ ಹಾಗೂ ಮೈದುಂಬಿ ನರ್ತಿಸುವ ಈ ವೃಕ್ಷಗಳು ಜಗತ್ತಿನೆಲ್ಲ ಸೌಂದರ್ಯವನ್ನು ಹೀರಿಕೊಂಡು ಬಿಂಕದಿಂದ ಬೀಗುವಂತೆ ಭಾಸವಾಗುತ್ತದೆ.

ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.