ಬಸ್ಸಿನಲ್ಲಿ ಸಾಗಿಸುತ್ತಿದ್ದ 80 ಲ.ರೂ. ಕಾಳಧನ ವಶಕ್ಕೆ: ಯುವಕನ ಬಂಧನ
Team Udayavani, Jun 1, 2019, 11:21 AM IST
ಸಾಂದರ್ಭಿಕ ಚಿತ್ರ
ಮುಳ್ಳೇರಿಯ: ಬಸ್ಸಿನಲ್ಲಿ ಕಾಸರಗೋಡಿಗೆ ಸಾಗಿಸುತಿದ್ದ 80 ಲ. ರೂ. ಕಾಳಧನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂಧ ಯುವಕನನ್ನು ಬಂಧಿಸಿದ್ದಾರೆ.
ಶುಕ್ರವಾರ ಮುಂಜಾನೆ ಆದೂರು ಅಬಕಾರಿ ಚೆಕ್ಪೋಸ್ಟ್ ಪರಿಸರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಗಳೂರಿನಿಂದ ಕಾಸರಗೋಡಿಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಹಣ ಪತ್ತೆಯಾಯಿತು. ಈ ಸಂಬಂಧ ಮಹಾರಾಷ್ಟ್ರದ ಸತಾರ ಜಿಲ್ಲೆಯ ದೇವಾಪುರ ನಿವಾಸಿ ಭರತ್ ಅವರ ಪುತ್ರ ಮಯೂರ್ ಭರತ್ ದೇಶ್ಮುಖ್(23)ನನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಕಾಸರಗೋಡಿಗೆ ಸಾಗುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ಸನ್ನು ಮುಂಜಾನೆ ಐದು ಗಂಟೆಗೆ ಅಡೂರು ಅಬಕಾರಿ ಚೆಕ್ಪೋಸ್ಟ್ ಬಳಿ ತಪಾಸಣೆ ಮಾಡಿದಾಗ 2,000 ರೂ. ಮುಖ ಬೆಲೆಯ 80 ಲ.ರೂ. ಕಾಳಧನ ಪತ್ತೆಯಾಯಿತು. ಇದನ್ನು ಬೆಂಗಳೂರಿನ ಧನ್ಜಿà ಯಾದವ್ ನೀಡಿದ್ದು, ಕಲ್ಲಿಕೋಟೆಯ ನಜೀಂ ಕದಂಗೆ ಹಸ್ತಾಂತರಿಸು ವಂತೆ ತಿಳಿಸಿರುವುದಾಗಿ ದೇಶ್ಮುಖ್ ತಿಳಿಸಿದ್ದಾನೆ. ಒಂದು ತಿಂಗಳ ಹಿಂದೆ ಇದೇ ರೀತಿ 80 ಲ.ರೂ. ಅನ್ನು ಬೆಂಗಳೂರಿನಿಂದ ತಂದಿದ್ದು, ಕಾಸರಗೋಡಿನ ಚಿನ್ನದಂಗಡಿ ಯೊಂ ದಕ್ಕೆ ನೀಡಿದ್ದಾಗಿ ಆತ ತಿಳಿಸಿದ್ದಾನೆ.
ಗಾಂಜಾಕ್ಕಾಗಿ ಶೋಧ; ಸಿಕ್ಕಿದ್ದು ಕಾಳಧನ!
ಕರ್ನಾಟಕದಿಂದ ಬಸ್ಗಳಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೇ 30ರ ರಾತ್ರಿಯಿಂದಲೇ ಆದೂರು ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ಆರಂಭಿಸಿದ್ದರು. ಆಗ ಕಾಳಧನ ಪತ್ತೆಯಾಯಿತು. ಈ ರೀತಿ ಹಣವನ್ನು ಕಾಸರಗೋಡಿಗೆ ಸಾಗಿಸಿದರೆ ತಿಂಗಳಿಗೆ 10 ಸಾ.ರೂ. ಹಣ ಮತ್ತು ಇತರ ಖರ್ಚುಗಳನ್ನು ನೀಡುತ್ತಿದ್ದುದಾಗಿ ಬಂಧಿತ ದೇಶ್ಮುಖ್ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ