ಉಪ ಚುನಾವಣೆ: ಅಭ್ಯರ್ಥಿಗಳ ಖರ್ಚಿನ ಗಣನೆ ಸಲ್ಲಿಕೆ
Team Udayavani, Oct 11, 2019, 5:09 AM IST
ಕಾಸರಗೋಡು: ಮಂಜೇಶ್ವರ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಗಳ ಚುನಾವಣೆ ವೆಚ್ಚದ ಗಣನೆಗಳನ್ನು ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆಗೆ ನಿಗದಿ ಮಾಡಲಾದ ದಿನದಿಂದ ತೊಡಗಿ ಅ. 8 ವರೆಗಿನ ಖರ್ಚಿನ ಗಣನೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಕ್ಸ್ಪೆಂಡೀಚರ್ ಮಾನಿಟರಿಂಗ್ ಸೆಲ್ಗೆ ಈ ಗಣನೆಗಳನ್ನು ಹಸ್ತಾಂತರಿಸಲಾಗಿದೆ. ಎಕ್ಸ್ ಪೆಂಡೀಚರ್ ನಿರೀಕ್ಷಕ ಕಮಲ್ ಜೀತ್ ಕೆ. ಕಮಲ್ ಅವರ ನೇತೃತ್ವದಲ್ಲಿ ಸಹಾಯಕ ಎಕ್ಸ್ ಪೆಂಡೀಚರ್ ಟಿ.ಇ. ಜನಾರ್ದನನ್, ಜಿಲ್ಲಾ ಹಣಕಾಸು ಅಧಿಕಾರಿ ಕೆ. ಸತೀಶನ್ ತಂಡ ಗಣನೆಗಳನ್ನು ಪರಿಶೀಲಿಸಿದೆೆ.
ಚುನಾವಣೆ ಅಧಿಕಾರಿ ವಿತರಣೆ ಮಾಡಿರುವ ಇಲೆಕ್ಷನ್ ಎಕ್ಸ್ಪೆಂಡೀಚರ್ ರಿಜಿಸ್ಟರ್ನಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಮಾಹಿತಿ ಗಳನ್ನು ಎಕ್ಸ್ಪೆಂಡಿಚರ್ ಮಾನಿಟರಿಂಗ್ ಸೆಲ್ನ ನಿಗಾದಲ್ಲಿ ದಾಸ್ತಾನು ಇರಿಸಲಾದ ಶಾಡೋ ಅಬ್ಸರ್ವೆàಶನ್ ರಿಜಿಸ್ಟರ್ನೊಂದಿಗೆ ಹೋಲಿಸಿ ನೋಡುವುದು ಇಲ್ಲಿನ ಕ್ರಮ. ಗಣನೆಗಳನ್ನು ಸಲ್ಲಿಸದೇ ಇದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಚುನಾವಣೆ ಅಧಿಕಾರಿಗಳು ನೋಟಿಸು ರವಾನಿಸಿದ್ದಾರೆ. ವ್ಯತ್ಯಾಸಗಳಿರುವ ಅಭ್ಯರ್ಥಿಗಳಿಗೆ ಚುನಾವಣೆ ಅಧಿಕಾರಿಗಳು ನೋಟೀಸು ಕಳುಹಿಸಿದ್ದಾರೆ. 48 ತಾಸುಗಳ ಅವಧಿಯಲ್ಲಿ ಅಭ್ಯರ್ಥಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಸ್ಪಷ್ಟೀಕರಣ ತೃಪ್ತಿಕರವಲ್ಲದೇ ಇದ್ದಲ್ಲಿ ಪ್ರಜಾಪ್ರಭುತ್ವ ನೀತಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನೂತನ ಗಣನೆಗಳನ್ನು ಅ. 14 ಮತ್ತು 18ರಂದು ಸಲ್ಲಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ