ಅಂಜೂರ ಅಂಜದೆ ಬೆಳೆಯಿರಿ


Team Udayavani, May 12, 2019, 6:00 AM IST

Common-fig-fruit

ಕಡಿಮೆ ಖರ್ಚಿನಲ್ಲಿ, ಏನೂ ಕಿರಿಕಿರಿ ಇಲ್ಲದೇ ಬೆಳೆಯಬಹುದಾದ ತೋಟಗಾರಿಕಾ ಬೆಳೆಗಳಲ್ಲಿ ಅಂಜೂರ ಕೂಡ ಒಂದು. ನಾಟಿ ಮಾಡುವಾಗ ಬೇಕಾಗುವ ಕೊಟ್ಟಿಗೆ ಗೊಬ್ಬರ ಹಾಗೂ ಒಮ್ಮೆ ಅಂಜೂರದ ಗೂಟಿ ಖರೀದಿಸಿ ನಾಟಿ ಮಾಡಿದಿರೆಂದರೆ ಮುಗಿಯಿತು, ಬೇರೇನೂ ದೊಡ್ಡ ಖರ್ಚು ಇಲ್ಲ. ಶೇ. 45ರಿಂದ 65ರಷ್ಟು ಸಕ್ಕರೆ ಅಂಶ ಹೊಂದಿರುವ, ಕ್ಯಾಲ್ಸಿಯಂ, ಕಬ್ಬಿಣ, ಎ ವಿಟಮಿನ್‌ ಒಳಗೊಂಡಿರುವ ಅಂಜೂರ ಹಣ್ಣು, ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಹಣ್ಣುಗಳಷ್ಟೇ ಅಲ್ಲದೇ, ಒಣಗಿದ ರೂಪದಲ್ಲೂ ಅಂಜೂರ ಬಳಕೆಯಲ್ಲಿದೆ. ನೀರು ಬಸಿದು ಹೋಗುವಂಥ ಯಾವುದೇ ಮಣ್ಣಿನಲ್ಲೂ ಇದು ಬೆಳೆಯುತ್ತದೆ, ಭೂಮಿಯಲ್ಲಿ ಕ್ಲೋರೈಡ್‌ ಮತ್ತು ಸಲ್ಫೆàಟ್‌ ಉಪ್ಪಿನಾಂಶವಿದ್ದರೆ ಅದನ್ನೂ ಸಹಿಸಿಕೊಂಡು ಬೆಳೆಯಬಲ್ಲದು.

ನಾಟಿ
ಜಮೀನನ್ನು ಸಮತಟ್ಟಾಗಿ ಉಳುಮೆ ಮಾಡಿದ ಮೇಲೆ ಗಿಡದಿಂದ ಗಿಡಕ್ಕೆ ಹತ್ತು ಅಡಿ, ಸಾಲಿನಿಂದ ಸಾಲಿಗೆ ಹನ್ನೆರಡು ಅಡಿ ಅಂತರ ಕೊಟ್ಟು ಗುರುತು ಮಾಡಿಕೊಳ್ಳಬೇಕು. ಆ ಜಾಗದಲ್ಲಿ ಎರಡು ಅಡಿ ಅಗಲ, ಎರಡು ಅಡಿ ಉದ್ದ, ಎರಡು ಅಡಿ ಆಳದ ಗುಣಿ ತೆಗೆಸಬೇಕು. ಮಣ್ಣು ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರಿಂದ ಈ ಗುಣಿಯನ್ನು ತುಂಬಬೇಕು.

ಅನಂತರ ಹನಿ ನೀರಾವರಿ ಅಳವಡಿಸಿ ಗೂಟಿ ನಾಟಿ ಮಾಡಬೇಕು. ಕಾಂಡ ಹಾಗೂ ಗೂಟಿ ಎರಡರಿಂದಲೂ ಸಸ್ಯಾಭಿವೃದ್ಧಿ ಸಾಧ್ಯವಿದೆ. ಹೆಚ್ಚು ರೈತರು ಗೂಟಿಯನ್ನೇ ನಾಟಿ ಮಾಡುವರು. ಅಂದಾಜು ಇಪ್ಪತ್ತು ರೂಪಾಯಿಗೆ ಒಂದು ಸಿಗುತ್ತದೆ. ಜೂನ್‌- ಜುಲೈ ನಾಟಿ ಮಾಡಲು ಪ್ರಶಸ್ತ ಸಮಯ.

ನಿರ್ವಹಣೆ
ಅಂಜೂರ ಬರಗಾಲವನ್ನು ತಡೆದುಕೊಳ್ಳುವಂಥ ಗಿಡವಾದರೂ ಬೇಸಗೆಯಲ್ಲಿ ಇದಕ್ಕೆ ವಾರಕ್ಕೆ ಒಮ್ಮೆಯಾದರೂ ಸ್ವಲ್ಪ ನೀರು ಕೊಡಬೇಕು. ಸಾವಯವ ಕೃಷಿಯಾಗಿದ್ದರೆ ತಿಂಗಳಿಗೊಮ್ಮೆ ಜೀವಾಮೃತ ಸಿಂಪರಿಸುವುದನ್ನು ತಪ್ಪಿಸಬಾರದು. ಹಾಗೆಯೇ, ಗಿಡದ ಬುಡಕ್ಕೂ ಜೀವಾಮೃತ ಉಣಿಸಬೇಕು. ಜಾಸ್ತಿ ಕಸ ಬೆಳೆಯದಂತೆ ನಿಯಂತ್ರಿಸುತ್ತಾ ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ಪಾತಿ ಮಾಡಿ ಮೂರ್ನಾಲ್ಕು ಕೆ.ಜಿ.ಯಷ್ಟು ಎರೆಹುಳು ಗೊಬ್ಬರ ಕೊಡುತ್ತಿರಿ.

ರಾಸಾಯನಿಕ ಕೃಷಿ ಮಾಡುವುದಾದರೆ, ಮೊದಲ ಎರಡು ವರ್ಷ ಒಂದು ಗಿಡಕ್ಕೆ ವರ್ಷಕ್ಕೊಮ್ಮೆ 75 ಗ್ರಾಂ ಯೂರಿಯಾ, 50 ಗ್ರಾಂ ಡಿ.ಎ.ಪಿ., 50 ಗ್ರಾಂ ಪೊಟ್ಯಾಷ್‌ ಕೊಡಿ. ಅನಂತರದ ವರ್ಷಗಳಲ್ಲಿ ಈ ಪ್ರಮಾಣವನ್ನು ಡಬಲ್‌ ಮಾಡಿ. ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಹೀಗೆ ಎರಡು ಸಲ ಬೆಡ್‌ ಮಾಡಿ, ಅಂದರೆ ಬುಡಗಳಿಗೆ ಕಾಂಪೋÓr… ಗೊಬ್ಬರ ಹಾಕಿ ಮಣ್ಣು ಎತ್ತರಿಸಿ, ಆರನೇ ತಿಂಗಳಲ್ಲಿ ಬೆಡ್‌ ಮಾಡುವಾಗ ಟ್ರಾÂಕ್ಟರ್‌ ಮೂಲಕ ಮಾಡಿ, ಅದೇ ಕೊನೆ, ಮತ್ತೆ ಜಮೀನಿನಲ್ಲಿ ಟ್ರಾÂಕ್ಟರ್‌ ಹಾಯಿಸಲು ಬರುವುದಿಲ್ಲ.

ಸವರುವಿಕೆ
ಅಂಜೂರದಲ್ಲಿ ಸವರುವಿಕೆ ಅತ್ಯಂತ ಪ್ರಮುಖ. ಹಾಗೇ ಬಿಟ್ಟರೆ ಅಂಜೂರ ಗಿಡ ತೆಳ್ಳಗೆ ಉದ್ದನಾಗಿ ಬೆಳೆದುಬಿಡುತ್ತೆ, ಹೀಗಾದರೆ ಹಣ್ಣಿನ ಇಳುವರಿ ಅರ್ಧಕ್ಕರ್ಧ ಕುಂಠಿತವಾಗುವುದರ ಜತೆಗೆ ಹಣ್ಣು ಕೀಳಲು ಸಹ ಆಗುವುದಿಲ್ಲ. ಈ ಕಾರಣಕ್ಕೆ ವರ್ಷಕ್ಕೊಮ್ಮೆ ಗಿಡಗಳನ್ನು ಸವರಿ ಒಂದು ಗಿಡಕ್ಕೆ 5- 6 ಪ್ರಮುಖ ರೆಂಬೆಗಳಿರುವಂತೆ ನೋಡಿಕೊಳ್ಳಿ. ಜತೆಗೆ ಹಣ್ಣಾದ, ನಿರ್ಜೀವ ಎಲೆ ಹಾಗೂ ರೆಂಬೆಗಳನ್ನು ಆಗಾಗ ತೆಗೆದು ಸ್ವತ್ಛಗೊಳಿಸಿ. ಇಲ್ಲವೆಂದರೆ, ಈ ಎಲೆಗಳ ಮೇಲೆ ಧೂಳು ಹಾಗೂ ಫ‌ಂಗಸ್‌ ಬೆಳೆದು ರೋಗಗಳಿಗೆ ಎಡೆಮಾಡಿಕೊಡುತ್ತದೆ.

ಇಳುವರಿ
ನೀಟಾಗಿ ನಿರ್ವಹಣೆ ಮಾಡಿದರೆ ಎಕರೆಗೆ ಒಂದು ವರ್ಷಕ್ಕೆ ಎಂಟು ಟನ್‌ ಹಣ್ಣಿನ ಇಳುವರಿ ಖಚಿತ. ಕೆಲಸ ಕಡಿಮೆಯಾದ್ದರಿಂದ ಆದಷ್ಟು ಮನೆಯವರೇ ನಿರ್ವಹಣೆ ಮಾಡುವುದು ಒಳ್ಳೆಯದು. ದರದ ವಿಷಯಕ್ಕೆ ಬಂದರೆ ಅಂಜೂರ ಪ್ರತಿ ಕ್ವಿಂಟಾಲ್‌ಗೆ ತೀರ ಕಡಿಮೆ ಅಂದರೂ 700ರಿಂದ ಹಿಡಿದು 4,000 ರೂ. ವರೆಗೆ ಮಾರಾಟ ಆಗುವುದು.

–  ಎಸ್‌.ಕೆ.ಪಾಟೀಲ್‌

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.