ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್: ಅಸ್ಹರ್ ವಜಾಹತ್
Team Udayavani, Apr 30, 2019, 6:30 AM IST
ಕುಂಬಳೆ: ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್ ಆಗಿರುವಂತಹ ಸ್ಥಿತಿ ನಿರ್ಮಾಣವಾಗಿದೆ.ಅನೇಕತೆಯಲ್ಲಿ ಏಕತೆ ಎಂಬ ಭಾರತೀಯ ಚಿಂತನೆಗೆ ವಿರುದ್ಧವಾಗಿ ಚಿಂತನೆ ದೇಶದಲ್ಲಿ ನಡೆಯುತ್ತಿರುವುದಾಗಿ ಪ್ರಮುಖ ಹಿಂದಿ ಸಾಹಿತಿ ಅಸ್ಹರ್ ವಜಾಹತ್ ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯದಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ವರ್ತಮಾನ ಕಾಲ ಮತ್ತು ಬರಹ ಗಾರರು ಎಂಬ ಕುರಿತು ಜರಗಿದ ಏಕದಿನ ಕಾರ್ಯಾ ಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವವೆಂಬುದು ಹಲವು ಬಾಹ್ಯ ಶಕ್ತಿಗಳಿಂದ ಹೈಜಾಕ್ ಆಗಿರುವುದಾಗಿ ಅಭಿಪ್ರಾಯಪಟ್ಟರು. ವಿವಿಧ ಜಾತಿಮತ ಚಿಂತನೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿ ಮಾನವರೆಲ್ಲರನ್ನೂ ಒಂದಾಗಿ ಕಾಣುವ ಸಂಸ್ಕೃತಿಯಾಗಿರುವುದಾಗಿ ಹೇಳಿದರು. ಎಲ್ಲ ಧರ್ಮಗಳನ್ನು ಒಂದಾಗಿ ಕಾಣುವುದು ಮತ್ತು ಗೌರವಿಸುವುದು ಸಾಹಿತಿಗಳ ಧರ್ಮವೆಂದರು. ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರಮುಖರಾದ ಡಾ| ಸುಧಾ ಬಾಲಕೃಷ್ಣನ್, ಡಾ| ಸುಪ್ರಿಯಾ, ಡಾ| ತಾರು ಎಸ್. ಪವಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ